Advertisement
ಸುದ್ದಿಗಳು

ವೈರಸ್ ಹರಡುವುದು ತಡೆಗೆ ಶಾಂತಿ ಹವನ | ಆಯುರ್ವೇದ ಗಿಡಮೂಲಿಕೆಗಳೇ ಇಲ್ಲಿ ಹವಿಸ್ಸು | ಹೇಗೆ ವರ್ಕ್ಔಟ್ ಆಗುತ್ತದೆ ?

Share

ಸುಳ್ಯ: ದೇಶದಾದ್ಯಂತ ಕೊರೊನಾ ವೈರಸ್ ಹರಡುವುದು ತಡೆಗೆ ವಿವಿಧ ಪ್ರಯತ್ನ ಮಾಡಲಾಗುತ್ತಿದೆ. ಲಾಕ್ಡೌನ್ ಮೂಲಕ ಜನರು ಮನೆಯಿಂದ ಹೊರಬರದಂತೆ ಎಚ್ಚರಿಕೆ ವಹಿಸುವುದು  ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು  ನಡೆಯುತ್ತಿದೆ. ಇದರ ಜೊತೆಗೆ ಆಯುರ್ವೇದ ಗಿಡಮೂಲಿಕೆಗಳ ಹವಿಸ್ಸಿನಿಂದ ಶಾಂತಿ ಹವನ ಮಾಡುವ ಮೂಲಕ ವೈರಸ್ ಪ್ರಭಾವ ತಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಲೋಕಹಿತಕ್ಕಾಗಿ ಈ ಕಾರ್ಯದಲ್ಲಿ ಸಾಮಾಜಿಕ ಕಾಳಜಿಯೂ ಇದೆ.

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆಯ ಹಿರಿಯ ವೈದಿಕ ವಿದ್ವಾಂಸರೂ, ಮಾರ್ಗದರ್ಶಕರೂ ಆಗಿರುವ ವೇದಗುರು ಕರುವಜೆ ಕೇಶವ ಜೋಯಿಸರ ನೇತೃತ್ವದಲ್ಲಿ ಈ ಹವನ ನಡೆಯುತ್ತಿದೆ. ಮಾ.20 ರಿಂದ ಆರಂಭವಾಗಿರುವ ಈ ಹವನ ಕಿಲೋ ಮೀಟರ್ ಗೆ ಒಂದು ಮನೆಯಂತೆ ನಿರಂತರವಾಗಿ ನಡೆಯುತ್ತಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಆಸಕ್ತಿಯಿಂದ ಈ ಕಾರ್ಯ ನಡೆಸುತ್ತಿರುವ ಕರುವಜೆ ಕೇಶವ ಜೋಯಿಸರು ಲೋಕವು ಸಂಕಷ್ಟದಲ್ಲಿ ಇರುವ ಸಂದರ್ಭ ಯಜ್ಞದ ಮೂಲಕ ಜನರಿಗೆ ಮಾನಸಿಕ ಧೈರ್ಯ ತುಂಬುವ ಕಾರ್ಯ ನಡೆಸುತ್ತಿದ್ದಾರೆ. ಜೊತೆಗೆ ಆಯುರ್ವೇದದ ಸಾರವನ್ನೂ ತಿಳಿಸುತ್ತಿದ್ದಾರೆ.

 

 

ಆಯುರ್ವೇದಲ್ಲಿ  ವಿವಿಧ ಗಿಡ ಮೂಲಿಕೆಗಳು ಕಷಾಯಗಳು , ಲೇಹಗಳು, ಆಸವಗಳು, ಅರಿಷ್ಟಗಳು  ದೇಹಕ್ಕೆ ರಕ್ಷಣೆ ನೀಡುತ್ತದೆ, ಅದರಿಂದ ದೇಹದ ಆರೋಗ್ಯ ಕಾಪಾಡುತ್ತದೆ.  ವ್ಯಾಧಿಗಳು ನಿವಾರಣೆಯಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈಗ ಅಂತಹದ್ದೇ ವನಸ್ಪತಿಗಳನ್ನು ಯಜ್ಞಕ್ಕೆ ಹವಿಸ್ಸಿನ ರೂಪದಲ್ಲಿ  ಅರ್ಪಿಸಿ ಆ ಧೂಮವು ಪರಿಸರಕ್ಕೆ ಹರಡಿದರೆ ವೈರಾಣುಗಳ ಪ್ರಭಾವ ತಗ್ಗಿಸಬಹುದು  ಎಂಬುದು ಗ್ರಂಥಗಳಲ್ಲಿ ಹೇಳಲಾಗಿದೆ. ಈಗ ಅದೇ ಮಾದರಿಯಲ್ಲಿ  ಪ್ರಯತ್ನ ಮಾಡಲಾಗುತ್ತಿದೆ. ಹಾಗೆಂದು  ಈ ಯಜ್ಞ ಮಾಡಿದ ತಕ್ಷಣವೇ ವೈರಾಣುಗಳು ಸುಳಿಯುವುದಿಲ್ಲ ಎಂಬುದಲ್ಲ , ಪರಿಸರವು ಯಜ್ಞದ ಧೂಮದ ಮೂಲಕ ಸ್ವಚ್ಛವಾಗಿ ವೈರಾಣುಗಳಿದ್ದರೆ ಅವುಗಳ ಪ್ರಭಾವ ತಗ್ಗಬಹುದು  ಎಂದು ಹೇಳುತ್ತಾರೆ ಕೇಶವ ಜೋಯಿಸರು.

ಇಲ್ಲಿ ಯಜ್ಞಕ್ಕೆ ಅಮೃತಬಳ್ಳಿ, ಕಿರಾತಕಡ್ಡಿ, ನೆಕ್ಕಿ , ಹಿಪ್ಪಲಿ, ಎಕ್ಕೆ , ಅಶೋಕ, ಉತ್ತರಣೆ, ಅತ್ತಿ, ಅರಸಿನ, ಗೋಳಿ, ಗರಿಕೆ, ಲವಂಗ, ನೆಲ್ಲಿ  ಹೀಗೆ ವಿವಿಧ ಬಗೆಯ ಆಯುರ್ವೇದ ಗುಣವುಳ್ಳ ವಸ್ತುಗಳನ್ನು ಹವಿಸ್ಸಾಗಿ ಅರ್ಪಣೆ ಮಾಡಲಾಗುತ್ತದೆ.

ಪ್ರತೀ ಮನೆಯಲ್ಲಿ  ಕೂಡಾ ಪ್ರತಿಯೊಬ್ಬರು ಆಯುರ್ವೇದ ಗುಣವುಳ್ಳ ವಸ್ತುಗಳನ್ನು ಹವಿಸ್ಸಾಗಿ ಪ್ರತೀ ದಿನವೂ ಮನೆಯವರೇ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ ಆ ವಾತಾವರಣ ಶುದ್ಧವಾಗಬಹುದು  ಎಂದು ಕೇಶವ ಜೋಯಿಸರು ಹೇಳುತ್ತಾರೆ.

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬರಗಾಲದಿಂದ ಹೆಚ್ಚಾಗಬಹುದು ಆ್ಯಂಟಿಬಯೋಟಿಕ್ ಪ್ರತಿರೋಧ..! ಹೊಸ ಸಂಶೋಧನೆಯ ಎಚ್ಚರಿಕೆ

ಬರಗಾಲದ ಪರಿಸ್ಥಿತಿಗಳು ಮಣ್ಣಿನಲ್ಲಿನ ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಿಸಲು ಕಾರಣವಾಗಬಹುದು ಎಂದು ಹೊಸ…

4 hours ago

ಜೇನುನೊಣಗಳ ಅಳಿವು ಕೃಷಿಗೂ, ಆಹಾರ ಭದ್ರತೆಗೂ ದೊಡ್ಡ ಅಪಾಯ – ತಜ್ಞರ ಎಚ್ಚರಿಕೆ

ಜೇನುನೊಣಗಳ ಸಂಖ್ಯೆ ಕುಸಿಯುತ್ತಿರುವುದು ಕೃಷಿ ಉತ್ಪಾದನೆ, ಆಹಾರ ಭದ್ರತೆ ಮತ್ತು ಪರಿಸರ ಸಮತೋಲನಕ್ಕೆ…

4 hours ago

ಒಂದು ಹಕ್ಕಿಯ ಫೋಟೋಗಾಗಿ 7 ತಿಂಗಳು ಕಾಯ್ದ ವ್ಯಕ್ತಿ..!, 60ನೇ ಹುಟ್ಟುಹಬ್ಬವನ್ನೂ ವಿಭಿನ್ನವಾಗಿ ಆಚರಿಸಿದರು..!

ವಿಟ್ಲದ ಆರ್‌. ಕೆ. ಪೈ ಅವರು ತಮ್ಮ 60ನೇ ಹುಟ್ಟುಹಬ್ಬವನ್ನು ಮಕ್ಕಳಲ್ಲಿ ಪ್ರಕೃತಿ…

11 hours ago

₹1.11 ಕೋಟಿ ಮೌಲ್ಯದ ಕಳಪೆ ಗುಣಮಟ್ಟದ ಅಡಿಕೆ ವಶಕ್ಕೆ – ಮಹಾರಾಷ್ಟ್ರದ ಕೋಲ್ಡ್ ಸ್ಟೋರೇಜ್‌ನಲ್ಲೂ ಕಳಪೆ ಅಡಿಕೆ ದಾಸ್ತಾನು..!

ನಾಗ್ಪುರದ ಕಾಂಪ್ಟಿಯಲ್ಲಿ FDA ಹಾಗೂ ಪೊಲೀಸರು ನಡೆಸಿದ ದಾಳಿಯಲ್ಲಿ ₹1.11 ಕೋಟಿ ಮೌಲ್ಯದ…

12 hours ago

ಹವಾಮಾನ ವರದಿ | 14.06.2026 | ಜೂನ್ 20ರವರೆಗೆ ಕರಾವಳಿ-ಮಲೆನಾಡಿನಲ್ಲಿ ಇದೇ ವಾತಾವರಣ| ಎಲ್‌ನಿನೋ ಪ್ರಭಾವದ ನಡುವೆ ಮಳೆ ನೀರು ಸಂಗ್ರಹಕ್ಕೆ ರೈತರಿಗೆ ಸಲಹೆ

ಕರ್ನಾಟಕದ ಹಲವು ಭಾಗಗಳಲ್ಲಿ ಜೂನ್ 20ರವರೆಗೆ ಪ್ರಸ್ತುತ ಹವಾಮಾನ ಮಾದರಿಯೇ ಮುಂದುವರಿಯುವ ಸಾಧ್ಯತೆ…

19 hours ago

ತುಮಕೂರಿನಲ್ಲಿ ಅಡಿಕೆ ಕ್ರಾಂತಿ -ತೆಂಗಿನ ತೋಟಗಳ ಜಾಗದಲ್ಲಿ ಅಡಿಕೆ ಬೆಳೆ..! 94 ಸಾವಿರ ಹೆಕ್ಟೇರ್‌ ದಾಟಿದ ವಿಸ್ತೀರ್ಣ

ತುಮಕೂರು ಜಿಲ್ಲೆಯಲ್ಲಿ ಅಡಿಕೆ ಬೆಳೆ ವಿಸ್ತೀರ್ಣ 94 ಸಾವಿರ ಹೆಕ್ಟೇರ್‌ ದಾಟಿದ್ದು, ತೆಂಗಿನ…

22 hours ago