ವೈವಿಧ್ಯಮಯ ಬದುಕಿಗೆ ಸಾರ್ಥಕತೆ ತರಬೇಕು: ಅಣ್ಣಾ ವಿನಯಚಂದ್ರ

October 31, 2019
12:17 PM

ಬೆಳ್ಳಾರೆ: ಬದುಕು ವೈವಿಧ್ಯಮಯವಾಗಿದ್ದು, ಅದಕ್ಕೆ ಸಾರ್ಥಕತೆ ತರಬೇಕು. ಹುಟ್ಟು ಸಾವಿನ ಮಧ್ಯೆ ಇರುವುದೇ ಜೀವನವಾಗಿದೆ. ಬದುಕೆಂಬ ಸಮುದ್ರವನ್ನು ಈಜಿ ದಡ ಸೇರುವ ಸಾಮರ್ಥ್ಯವನ್ನು ನಾವು ಹೊಂದಲು ಪ್ರಯತ್ನಿಸಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಹೇಳಿದರು.

Advertisement
Advertisement
Advertisement

ಕಳಂಜ ಗ್ರಾಮ ಪಂಚಾಯತ್‍ನಲ್ಲಿ ಬಿಲ್‍ಕಲೆಕ್ಟರ್ ಆಗಿ ಕರ್ತವ್ಯದಲ್ಲಿದ್ದು, ಪದೋನ್ನತಗೊಂಡು ವರ್ಗಾವಣೆಯಾದ ಮೋನಪ್ಪ ಕೋಡಿಯಡ್ಕ ಅವರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದ ಅವರು ವೈಯಕ್ತಿಕ ಬದುಕಿನೊಂದಿಗೆ ಸಮಾಜದ ಏಳಿಗೆಗೂ ಶ್ರಮಿಸಬೇಕು. ನಾಲ್ಕು ಜನರ ಆಶಿರ್ವಾದ ನಮ್ಮ ಯಶಸ್ಸಿಗೆ ಬುನಾದಿ ಎಂದರು.

Advertisement

ಬಿಲ್‍ಕಲೆಕ್ಟರ್ ಆಗಿ ಸೇವೆ ಸಲ್ಲಿಸಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಭಡ್ತಿಯೊಂದಿಗೆ ಮಂಗಳೂರು ತಾಲೂಕು ಪಂಚಾಯತ್‍ಗೆ ವರ್ಗಾವಣೆಯಾದ ಮೋನಪ್ಪ ಕೋಡಿಯಡ್ಕ ಅವರನ್ನು ಅಣ್ಣಾ ವಿನಯಚಂದ್ರ ಕಳಂಜ ಗ್ರಾಮ ಪಂಚಾಯತ್ ಪರವಾಗಿ ಸನ್ಮಾನಿಸಿ ಗೌರವಿಸಿದರು. ಸನ್ಮಾನಿತರಿಂದ ಕಳಂಜ ಗ್ರಾಮ ಪಂಚಾಯತ್‍ಗೆ ನೆನಪಿನ ಕೊಡುಗೆಯನ್ನು ನೀಡಲಾಯಿತು. ಸಾರ್ವಜನಿಕರು ಸನ್ಮಾನಿತರ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಯಶೋದಾ ಎಂ. ವಹಿಸಿ ಸ್ವಾಗತಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಸೌಮ್ಯ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಧರ್ ಕೆ.ಆರ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮೀಶ ಕಜೆಮೂಲೆ ಪ್ರಸ್ತಾವಿಸಿ ವಂದಿಸಿದರು. ಸಿಬ್ಬಂದಿ ಗಿರಿಧರ ಕಳಂಜ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಾಡ್ಗಿಚ್ಚು ಕೇವಲ ಜನರಿಗೆ ಅಪಾಯವಲ್ಲ | ಹವಾಮಾನ ಬದಲಾವಣೆಯ ಮೇಲೂ ಪರಿಣಾಮ |
April 16, 2024
3:48 PM
by: ದ ರೂರಲ್ ಮಿರರ್.ಕಾಂ
ಬೆಳಿಗ್ಗೆ ಎದ್ದ ತಕ್ಷಣ ಚಹ ಅಥವಾ ಕಾಫಿ ಕುಡಿಯುವ ಅಭ್ಯಾಸ ನಿಮಗಿದೆಯೇ? | ಈ ಅಭ್ಯಾಸವನ್ನು ಬದಲಿಸಿ!.
April 16, 2024
2:35 PM
by: The Rural Mirror ಸುದ್ದಿಜಾಲ
ಅಯೋಧ್ಯೆ ಬಾಲರಾಮನಿಗೆ ಮೊದಲ ರಾಮನವಮಿ | 19 ಗಂಟೆ ಭಕ್ತರಿಗೆ ದರ್ಶನ ಭಾಗ್ಯ, VIP ಗಳಿಗೆ ನೋ ಎಂಟ್ರಿ | ದೂರದರ್ಶನದಲ್ಲಿ ರಾಮ ನವಮಿ ಆಚರಣೆಯ ನೇರಪ್ರಸಾರ |
April 16, 2024
2:16 PM
by: The Rural Mirror ಸುದ್ದಿಜಾಲ
ಇನ್ನು ದೇಶದಲ್ಲಿ ಈರುಳ್ಳಿ ಕೊರತೆ ಇರಲ್ಲ| ಎರಡೂ ಹಂಗಾಮಿನಲ್ಲಿ ಬೆಳೆಯ 93 ಹೊಸ ತಳಿಯ ಬೀಜ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು |
April 16, 2024
1:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror