ಬೆಳ್ಳಾರೆ:ವ್ಯಸನಗಳು ಕುಟುಂಬದ ಭವಿಷ್ಯವನ್ನೇ ಹಾಳುಗೆಡವುತ್ತದೆ. ವ್ಯಸನವು ಒಂದು ಮಾನಸಿಕ ಸಮಸ್ಯೆಯಾಗಿದ್ದು, ಶಾರೀರಿಕ ಸಮಸ್ಯೆಗಿಂತ ಮಾನಸಿಕ ಸಮಸ್ಯೆ ಹೆಚ್ಚು ನೋವುಂಟುಮಾಡುತ್ತದೆ ಎಂದು ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ|ಸುಪ್ರಿಯಾ.ಪಿ.ಆರ್ ಹೇಳಿದರು.
ಜೇಸಿಐ ಸಪ್ತಾಹ ಪ್ರಯುಕ್ತ ಬೆಳ್ಳಾರೆ ಜೇಸಿಐ ವತಿಯಿಂದ ಸಮಾಜಕಾರ್ಯ ವಿಭಾಗ ಹಾಗು ಯೂತ್ರೆಡ್ಕ್ರಾಸ್ ಘಟಕದ ಸಹಯೋಗದೊಂದಿಗೆ ಪೆರುವಾಜೆ ಡಾ| ಕೆ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವ್ಯಸನ ಮುಕ್ತ ಹಾಗು ಕ್ಷಯಮುಕ್ತ ಭಾರತ ಮಾಹಿತಿ ಕಾರ್ಯಗಾರದಲ್ಲಿ ಪ್ರಸ್ತಾವಿಸಿ ಅವರು ಮಾತನಾಡಿದರು.
ಬೆಳ್ಳಾರೆ ಜೇಸಿಐ ಅಧ್ಯಕ್ಷ ಹಾಗು ಸುಳ್ಯ ತಾಲೂಕು ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಲೋಕೇಶ್ ತಂಟೆಪ್ಪಾಡಿ ಮಾಹಿತಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ರಾಘವ ಅವರು ಶುಭಹಾರೈಸಿದರು.
ವೇದಿಕೆಯಲ್ಲಿ ಜಿಲ್ಲಾ ಕ್ಷಯರೋಗ ಚಿಕಿತ್ಸಾ ವಿಭಾಗದ ಮನೋಜ್, ಯೂತ್ರೆಡ್ಕ್ರಾಸ್ ಅಧ್ಯಕ್ಷ ಗಿರೀಶ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರೇಮಾ ಸ್ವಾಗತಿಸಿದರು. ಚಿತ್ರಕಲಾ ಕಾರ್ಯಕ್ರಮ ನಿರೂಪಿಸಿದರು.
ಗುತ್ತಿಗಾರಿನಲ್ಲಿ ‘ಮಾನ್ಸೂನ್ ಕಲರ್ಸ್’ ಜಲವರ್ಣ ಚಿತ್ರಕಲಾ ಶಿಬಿರ ನಡೆಯುತ್ತಿದೆ. ಮಲೆನಾಡಿನ ನಿಸರ್ಗ ಸೌಂದರ್ಯವನ್ನು…
ಗೋಮಯವನ್ನು ಶುದ್ಧ ಇಂಧನ ಹಾಗೂ ಸಾವಯವ ಗೊಬ್ಬರವಾಗಿ ಬಳಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಉತ್ತರ…
ಬ್ರೆಜಿಲ್ನಲ್ಲಿ ಮಳೆಯಿಂದ ಕಾಫಿ ಕೊಯ್ಲು ವಿಳಂಬವಾಗಿರುವ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿ ಬೆಲೆ…
ಜುಲೈ 10ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಜುಲೈ 11…
ಪವರ್ ಸ್ಪ್ರೇಯರ್ ಸಮಸ್ಯೆಯ ಅನುಭವದ ಮೂಲಕ E20 ಪೆಟ್ರೋಲ್ನ ಪರಿಣಾಮಗಳ ಬಗ್ಗೆ ಪ್ರಶ್ನೆ…
ಮ್ಯಾನ್ಮಾರ್ನಿಂದ ಅಕ್ರಮ ಅಡಿಕೆ ಸಾಗಾಟ ಮಾಡಿ ₹1,500 ಕೋಟಿ ಹಣ ವರ್ಗಾವಣೆ ನಡೆಸಿದ…