ಶಬರಿಮಲೆಯಲ್ಲಿ ಸಕಲ ಸಿದ್ಧತೆ : ಸ್ವಚ್ಛ ಶಬರಿಮಲೆಗೆ ಆದ್ಯತೆ : ವಾಹನ ಪಾರ್ಕಿಂಗ್ ಗಮನಿಸಿಕೊಳ್ಳಿ…..

January 3, 2020
7:00 AM

ಶಬರಿಮಲೆ : ಸ್ವಾಮಿಯೇ ಶರಣಂ ಅಯ್ಯಪ್ಪ…… ಘೋಷಣೆ ಎಲ್ಲೆಡೆಯಿಂದ ಕೇಳಲು ಶುರುವಾಗಿದೆ. ಶಬರಿಮಲೆ ಯಾತ್ರೆಗೆ ಭಕ್ತಾದಿಗಳು ಹೊರಡುತ್ತಿದ್ದಾರೆ. ಈಗಾಗಲೇ ಶಬರಿಮಲೆಯಲ್ಲಿ  ಸಕಲ ಸಿದ್ಧತೆ ನಡೆದಿದ್ದು, ಈ ಬಾರಿ ಸ್ವಚ್ಛ ಶಬರಿಮಲೆಗೆ ಆದ್ಯತೆ ನೀಡಲಾಗಿದೆ. ಭಕ್ತಾದಿಗಳ ಸಂಖ್ಯೆ ಹೆಚ್ಚು ಬರುವ ನಿರೀಕ್ಷೆ ಇರುವುದರಿಂದ ವಾಹನ ಪಾರ್ಕಿಂಗ್ ಗೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಪಂಪಾದಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.

ಕೇರಳದ ಪಟ್ಟಾನಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೇ ಸ್ವಾಮಿ ಅಯ್ಯಪ್ಪನ ಸನ್ನಿದಾನ ಮಕರವಿಳಕ್ಕು ಉತ್ಸವಕ್ಕಾಗಿ ಡಿ.30ರಂದು ಸಂಜೆ 5 ಗಂಟೆಗೆ ತೆರೆದುಕೊಂಡಿದೆ. ನ.16 ರಿಂದ ಆರಂಭಗೊಂಡಿದ್ದ ಮಂಡಲ ಉತ್ಸವ ಡಿ.27 ರ ತನಕ ನಡೆದು ಶಬರಿಮಲೆ ಬಾಗಿಲು ಮುಚ್ಚಲಾಗಿತ್ತು.ನಂತರ 21 ದಿನಗಳ ಮಕರ ಉತ್ಸವಕ್ಕಾಗಿ ಡಿ.30 ರಂದು ತೆರದುಕೊಂಡಿದೆ.ಈ ಹಿನ್ನೆಲೆಯಲ್ಲಿ ಪಂಪಾ, ಶಬರಿಗಿರಿ ಮತ್ತು ಶಬರಿಮಲೆ ದೇಗುಲದ ಸುತ್ತಮುತ್ತ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ಕನ್ನಡಿಗರಿಗಾಗಿ ಪಂಪಾ ನದಿಯ ತಟದಲ್ಲಿರುವ ಗಣಪತಿ ದೇವಸ್ಥಾನದ ಸಮೀಪ ಬೃಹತ್ ಭೋಜನಾಲಯವನ್ನು ನಿರ್ಮಿಸಲಾಗಿದೆ. ಕರ್ನಾಟಕದಿಂದ ತೆರಳುವ ಸಾವಿರಾರು ಮಾಲಾಧಾರಿಗಳಿಗೆ ಇದು ಸಹಕಾರಿಯಾಗಲಿದೆ. ಇಲ್ಲಿ ಕನ್ನಡದಲ್ಲಿಯೇ ಅಗತ್ಯ ಸೂಚನೆ, ಮಾರ್ಗದರ್ಶನ ನೀಡಲಾಗುತ್ತಿದೆ. ವಿಶೇಷ ಸೌಲಭ್ಯಗಳಿಂದಾಗಿ ಈ ವರ್ಷ ರಾಜ್ಯದ ಭಕ್ತರ ಸಂಖ್ಯೆ ದುಪ್ಪಟ್ಟಾಗುವ ನಿರೀಕ್ಷೆಯಿದೆ.

ಮಕರವಿಳಕ್ಕು ಪುಣ್ಯ ಕಾಲದಲ್ಲಿ ಮುಂಜಾನೆ 4 ರಿಂದ ಮಧ್ಯಾಹ್ನ 1.30 ರವರೆಗೂ, ಸಂಜೆ 4 ರಿಂದ ರಾತ್ರಿ 11 ರವರೆಗೆ ಅಯ್ಯಪ್ಪ ದರ್ಶನ ಮಾಡಬಹುದಾಗಿದೆ. ಉಳಿದಂತೆ ಉಷಾ ಪೂಜೆ ಮತ್ತಿತರೆ ವಿಶೇಷ ಸಂದರ್ಭಗಳಲ್ಲಿ ಕೊಂಚ ಬದಲಾವಣೆ ಇರುತ್ತದೆ.

ಹತ್ತು ವರ್ಷಕ್ಕೂ ಮೇಲ್ಪಟ್ಟ 50 ವರ್ಷಕ್ಕೆ ಒಳಗಿನ ವಯೋಮಿತಿಯ ಮಹಿಳೆಯರಿಗೆ ಅಯ್ಯಪ್ಪ ದರ್ಶನದ ವಿವಾದದ ಹಿನ್ನೆಲೆಯಲ್ಲಿ ಕಳೆದ ವರ್ಷ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಕಾರಣ ನಿಲಕ್ಕಲ್, ಪಂಪ ಹಾಗೂ ಶಬರಿಗಿರಿಯಲ್ಲಿ ಭಾರೀ ಭದ್ರತೆ ಮಾಡಲು ನಿರ್ಧರಿಸಲಾಗಿದೆ.ಯಾವುದೇ ಕಾರಣಕ್ಕೆ ಒಂದು ಸಣ್ಣ ಅಹಿತಕರ ಘಟನೆಗೂ ಅವಕಾಶ ಇಲ್ಲದಂತೆ ವಾರ್ಷಿಕ ಮಂಡಲೋತ್ಸವವನ್ನು ಪೂರೈಸಲು ನಿರ್ಧರಿಸಲಾಗಿದೆ.ಅಲ್ಲದೆ ಈ ಬಾರಿ ಶಬರಿಮಲೆ ಪ್ರವೇಶಿಸುವ 10 ರಿಂದ 50 ವಯೋಮಾನದ ಮಹಿಳೆಯರಿಗೆ ಭದ್ರತೆ ನೀಡಲು ಕೇರಳ ಸರಕಾರ ನಿರಾಕರಿಸಿರುವುದರಿಂದ ಈ ಬಾರಿ ಮಲೆ ಪ್ರವೇಶಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಪಂಪಾದಲ್ಲಿ ವಾಹನ ಪಾರ್ಕಿಂಗ್‍ಗೆ ನಿರ್ಬಂಧ:
ಈ ವರ್ಷ ಭಕ್ತರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇರುವುದರಿಂದ ಪಂಪಾದಲ್ಲಿ ಪಾರ್ಕಿಂಗ್ ನಿಷೇ„ಸಲಾಗಿದೆ. ಕೇರಳ ಸರಕಾರದ ಸಾರಿಗೆ ಬಸ್‍ಗಳು ಮಾತ್ರ ಅಲ್ಲಿವರೆಗೆ ಹೋಗಲಿವೆ. ಉಳಿದಂತೆ ಭಕ್ತರ ವಾಹನಗಳನ್ನು ನಿಲಕ್ಕಲ್ ಶಿವ ದೇವಸ್ಥಾನದ ಪಕ್ಕದ ಹತ್ತಿರವಿರುವ ವಿಶಾಲವಾದ ಜಾಗದಲ್ಲಿ ನಿಲುಗಡೆ ಮಾಡಬೇಕಿದೆ.ಈ ವ್ಯವಸ್ಥೆಯನ್ನು ನಿರ್ವಹಿಸಲು ಪೊಲೀಸ್ ಮತ್ತು ಸಾರಿಗೆ ಇಲಾಖೆ ವತಿಯಿಂದ ವಿಶೇಷ ತಂಡಗಳನ್ನು ರಚಿಸಲಾಗಿದೆ. ವಾಹನ ನಿಲುಗಡೆಗೆ 1 ರಿಂದ 12 ವಿಭಾಗಗಳನ್ನು ಮಾಡಲಾಗಿದೆ.

ಸ್ವಚ್ಛ ಶಬರಿಮಲೆ: ಪ್ಲಾಸ್ಟಿಕ್ ಸಂಪೂರ್ಣ ನಿರ್ಬಂಧ:
ಶಬರಿಮಲೆಯಲ್ಲಿ ಈ ವರ್ಷ ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಡಲಾಗಿದೆ. ಪ್ಲಾಸ್ಟಿಕ್ ಅನ್ನು ಕಡ್ಡಾಯವಾಗಿ ನಿಷೇ„ಸಲಾಗಿದ್ದು, ಬಟ್ಟೆ ಬ್ಯಾಗುಗಳನ್ನು ಬಳಸುವಂತೆ ಅಂಗಡಿ ಮಾಲೀಕರಿಗೆ ತಾಕೀತು ಮಾಡಲಾಗಿದೆ.ನೀಲಕ್ಕಲ್ ವಾಹನ ನಿಲುಗಡೆ ಸ್ಥಳದಿಂದ ಆರಂಭವಾಗಿ ಶಬರಿಗಿರಿಯವರೆಗೂ ಪ್ಲಾಸ್ಟಿಕ್ ಕಾಣುವಂತೆಯೇ ಇಲ್ಲ ಎಂದು ಸರಕಾರ ಆದೇಶಿಸಿದೆ. ಹೆಜ್ಜೆ ಹೆಜ್ಜೆಗೂ ತಾತ್ಕಾಲಿಕ ಶೌಚಾಲಯಗಳನ್ನು ಅಳವಡಿಸಲಾಗಿದೆ.

ಆನ್‍ಲೈನ್ ಬುಕ್ಕಿಂಗ್:
ಭಕ್ತರಿಗೆ ಆದಷ್ಟು ಸುಲಭವಾಗಿ ಸ್ವಾಮಿಯ ದರ್ಶನ ಭಾಗ್ಯ ಸಿಗಲು ಕ್ರಮ ಕೈಗೊಳ್ಳಲಾಗಿದೆ. ಭಕ್ತರಿಗೆ ಆನ್‍ಲೈನ್ ಲ್ಲಿತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಇವರು ಪ್ರತ್ಯೇಕ ಸಾಲಿನಲ್ಲಿದರ್ಶನ ಪಡೆಯಬಹುದು ಹಾಗೂ ಪ್ರಸಾದವನ್ನೂ ತೆಗೆದುಕೊಳ್ಳಬಹುದಾಗಿದೆ. ಸಾಮಾನ್ಯ ಕ್ಯೂನಲ್ಲಿ ಬಂದರೆ ದರ್ಶನಕ್ಕೆ 4ರಿಂದ 5ಗಂಟೆ ಸಮಯ ಹಿಡಿಯುತ್ತದೆ. ಆನ್ಲೈನ್ ಬುಕಿಂಗ್ ಮಾಡಿಕೊಂಡರೆ ಎರಡೂವರೆ ಗಂಟೆಯಲ್ಲಿ ದರ್ಶನ ಮಾಡಬಹುದು. ತುಪ್ಪಾಭಿಷೇಕ ಸೇರಿದಂತೆ ಇತರ ಸೇವೆಗಳಿಗೂ ಮುಂಗಡವಾಗಿ ಕಾದಿರಿಸಬಹುದು. ದಿನವೊಂದಕ್ಕೆ ಮೂರು ಸಾವಿರ ಭಕ್ತರು ಆನ್‍ಲೈನ್ ಮೂಲಕ ದರ್ಶನ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಹೆಲ್ಪ್ ಡೆಸ್ಕ್ ಸಂಖ್ಯೆ 7025800100 ಇಲ್ಲಿ ಕರೆ ಮಾಡಬಹುದು.

ಮಾಹಿತಿ : ಪ್ರವೀಣ್ ಚೆನ್ನಾವರ 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಕಳ್ಳಸಾಗಣೆ ಪ್ರಕರಣ – ಸಿಲ್ಚಾರ್ ಉದ್ಯಮಿಯ ಮನೆ ಮೇಲೆ ಇ.ಡಿ. ದಾಳಿ, ಹಣ ಅಕ್ರಮ ವರ್ಗಾವಣೆ ತನಿಖೆ ತೀವ್ರ
July 5, 2026
10:43 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಳೆ ನಷ್ಟಕ್ಕೆ ಎನ್‌ಡಿಆರ್‌ಎಫ್ ಪರಿಹಾರ ತೀರಾ ಕಡಿಮೆ…! ಪ್ರಕೃತಿ ವಿಕೋಪದಲ್ಲಿ ರೈತರಿಗೆ ಅನ್ಯಾಯ?
July 4, 2026
2:59 PM
by: ದ ರೂರಲ್ ಮಿರರ್.ಕಾಂ
ಭಾರತದ ಹಲಸಿನ ಹಣ್ಣಿನ ರಾಜಧಾನಿ ಎಲ್ಲಿದೆ ಗೊತ್ತಾ..?
July 4, 2026
12:59 PM
by: ದ ರೂರಲ್ ಮಿರರ್.ಕಾಂ
ಉತ್ತಮ ಗುಣಮಟ್ಟದ ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ; ರಾಸಾಯನಿಕ ಮಿಶ್ರಣವೇ ಅಪಾಯ – ಎಸ್.ಆರ್. ಸತೀಶ್ಚಂದ್ರ
July 4, 2026
12:16 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror