ಪುತ್ತೂರು: ಕಡಬದಲ್ಲಿ ಪಡಿತರ ವ್ಯವಸ್ಥೆಯ ಕುರಿತು ಸಹಕಾರಿ ಸಂಘಗಳ ಮುಖ್ಯಸ್ಥರ ಸಭೆ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡ ಶಾಸಕ ಅಂಗಾರ ಅವರನ್ನು ಕಡಬದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕಡಬದಲ್ಲಿ ಅಸ್ವಸ್ಥರಾದ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಈ ಸಂದರ್ಭ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯ ವೈದ್ಯ ಡಾ.ಪದ್ಮನಾಭ ಕಾಮತ್ ಅವರ ನೃತೃತ್ವದ ತಂಡ ಗ್ರಾಮೀಣ ಭಾಗಕ್ಕೆ ನೀಡಿರುವ ವಿಶೇಷ ಯೋಜನೆಯಾದ ಸಿ ಒ ಡಿ ವ್ಯವಸ್ಥೆಯಡಿ ಇ ಸಿ ಜಿ ಮಾಡಿದ ಬಳಿಕ ಅದರ ವರದಿಯನ್ನು ವಾಟ್ಸಪ್ ಮೂಲಕ ವೈದ್ಯರ ತಂಡಕ್ಕೆ ಕಳುಹಿಸಲಾಗಿತ್ತು. ತಕ್ಷಣವೇ ಸಮೀಪದ ಆಸ್ಪತ್ರೆಗೆ ತೆರಳಲು ಸೂಚಿಸಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel