ಶಿಕ್ಷಕರ ದಿನಾಚರಣೆ ಪ್ರಯುಕ್ತ ಲಯನ್ಸ್ ಕ್ಲಬ್ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ

September 7, 2019
8:50 AM

ಗುತ್ತಿಗಾರು: ಶಿಕ್ಷಕರ ದಿನಾಚರಣೆ ಪ್ರಯುಕ್ತ ನಿವೃತ್ತ ಶಿಕ್ಷಕರಾದ ಕೂಜುಗೋಡು ಕಟ್ಟೆಮನೆ ನಾಗಪ್ಪ ಮಾಸ್ಟರ್ ಹಾಗು ಕೇಪಳಕಜೆ ಪುರುಷೋತ್ತಮ ಮಾಸ್ಟರ್ ದಂಪತಿಗಳಿಗೆ ಗುತ್ತಿಗಾರು ಲಯನ್ಸ್ ಕ್ಲಬ್ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಲಯನ್ಸ್ ಕ್ಲಬ್ ಪದಾಧಿಕಾರಿಗಳು ಇವರ ಮನೆಗೆ ತೆರಳಿ ಶಾಲು, ಹಾರ, ಪೇಟ ತೊಡಿಸಿ ಸನ್ಮಾನಪತ್ರ ನೀಡಿ ಗೌರವಿಸಿದರು.

ಲಯನ್ಸ್ ಅಧ್ಯಕ್ಷ ಮೋಹನ.ಕೆ ಸ್ವಾಗತಿಸಿದರು. ಲಯನ್ಸ್ ಕ್ಲಬ್ ನ ಪದಾಧಿಕಾರಿಗಳಾದ ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ, ವೆಂಕಪ್ಪ ಕೇನಾಜೆ ಶಿಕ್ಷಕರ ದಿನಾಚರಣೆ ಮಹತ್ವ ಕುರಿತು ಹಾಗೂ ಸನ್ಮಾನಿತರಿಗೆ ಅಭಿನಂದಿಸಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಕೆ. ಬಾಲಕೃಷ್ಣ, ಡಿ.ಯಸ್.ಧರ್ಮಪಾಲ, ಲಿಜೊ ಜೊಸ್, ಕುಶಾಲಪ್ಪ ಮಾಸ್ಟರ್, ಯಂ.ಡಿ.ವಿಜಯಕುಮಾರ್, ಯಂ,ಕೆ. ಮೋಹನ್ ಕುಮಾರ್, ಪಿ.ಸಿ.ಜಯರಾಮ, ಡಿ.ಆರ್.ಉದಯಕುಮಾರ್, ನವೀನ್ ಬಾಳುಗೋಡು, ರಾಜೇಶ್ ಉತ್ರಂಬೆ, ನಾಗೇಶ್ ಪಾರೆಪ್ಪಾಡಿ, ಶಿವರಾಮ ಚಿಲ್ತಡ್ಕ, ಲಯನೆಸ್ ಕ್ಲಬ್ ನ ಚೆನ್ನಮ್ಮ ಮೋಹನ್ ಭಾಗವಹಿಸಿದ್ದರು. ಕೆ.ವಿ. ಸುಧಿರ್ ದಂಪತಿಗಳು, ಶಿಕ್ಷಕಿ ಶೇಷಮ್ಮ ಕೆ, ನಿವೃತ್ತ ಯೋಧ ಜತ್ತಪ್ಪ ಗೌಡ ಓಟೆಡ್ಕ, ಚಂದ್ರಕಾಂತ ಕಲ್ಲುರಾಯ, ಸತೀಶ್ ಕೂಜುಗೋಡು ಉಪಸ್ಥಿತರಿದ್ದರು. ಎಂ. ಕೆ. ಮೋಹನ ಕುಮಾರ್ ವಂದಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ
ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ
April 1, 2026
6:13 AM
by: ಮಿರರ್‌ ಡೆಸ್ಕ್
ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ
April 1, 2026
6:07 AM
by: ಮಿರರ್‌ ಡೆಸ್ಕ್
ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್
April 1, 2026
5:56 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror