ಅನುಕ್ರಮ

ಶಿಕ್ಷಕ-ವಿದ್ಯಾರ್ಥಿ ಸಂಬಂಧ ಗಟ್ಟಿಯಾಗಲಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಂದು ಶಿಕ್ಷಕರ ದಿನಾಚರಣೆ. ನಾನು ನನ್ನ ಪುತ್ರನೊಂದಿಗೆ ಅವನು ಕಲಿತ ಪುತ್ತೂರಿನ ಅಂಬಿಕಾ ವಿದ್ಯಾಲಯದ ಸುಬ್ರಹ್ಮಣ್ಯ ನಟ್ಟೋಜರನ್ನು ಭೇಟಿ ಆಗುವ ಉದ್ದೇಶದಿಂದ ಅಂಬಿಕಾ ವಿದ್ಯಾಲಯಕ್ಕೆ ಹೋಗಿದ್ದೆವು.

Advertisement
Advertisement

ಅಲ್ಲಿ ಶಿಕ್ಷಕರ ಮತ್ತು ಮಕ್ಕಳ ಅದ್ಭುತವಾದ ,ಸಂಸ್ಕಾರಯುತ ಲೋಕ ನಮ್ಮ ಮುಂದೆ ತೆರೆದುಕೊಂಡಿತ್ತು.ಶಿಕ್ಷಕರ ದಿನಾಚರಣೆ ಆಚರಿಸಿಕೊಳ್ಳುತ್ತಿದ್ದ ಮಕ್ಕಳೊಂದಿಗೆ ನಾವೂ ಸಭಾಂಗಣದಲ್ಲಿ ಹೋಗಿ ಕುಳಿತೆವು.ಮಕ್ಕಳು ಶಿಕ್ಷಕರನ್ನು ಪಕ್ಕದಲ್ಲಿ ಕೂರಿಸಿ ತಮ್ಮದೇ ಕಲ್ಪನೆಯ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿದ್ದರು. ಪುಟ್ಟ ಮಕ್ಕಳು ಗುರು ಹಿರಿಯರ ಚರಣಗಳಿಗೆ ಶಿರಬಾಗಿ ನಮಿಸಿ ಆಶೀರ್ವಾದ ಪಡಕೊಳ್ಳುವ ದೃಶ್ಯ ಕಂಡು ನಿಬ್ಬೆರಗಾದೆವು. ಕೆಲವು ಮಕ್ಕಳಂತೂ ನಮ್ಮೆಡೆಗೂ ಬಂದು ಹೂವನ್ನಿತ್ತು ಶಿರಬಾಗಿ ನಮಿಸಿ ಪ್ರೀತಿಯ ನುಡಿಗಳನ್ನಾಡಿದ್ದು ನಮ್ಮನ್ನು ಮಂತ್ರ ಮುಗ್ಧರನ್ನಾಗಿಸಿದ್ದೂ ನಿಜ.

ಈವತ್ತಿನ ತಳಕು ಬಳುಕಿನ ಸ್ವೇಚ್ಚಾ ಸಮಾಜದಲ್ಲಿ ಪುಟ್ಟ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿದ,ಬೆಳೆಸುವ ಪರಿ ನಿಜಕ್ಕೂ ಪ್ರಶಂಸನೀಯ. ಭಾರತೀಯತೆ,ಸನಾತನತೆ ಅವಿನಾಶಿನಿ ಎಂಬುದ ಕಂಡು ಮನಸ್ಸು ಸಂತಸಗೊಂಡದ್ದೂ ಹೌದು.
ವಂದೇ ಗುರೂಣಾಂ ಚರಣಾರವಿಂದೇ
ಸಂಧರ್ಶಿತಸ್ವಾತ್ಮ ಸುಖಾವಬೋಧೇ
ಜನಸ್ಯಯೇ ಜಾಂಗಲಿಕಾಯಮಾನೇ
ಸಂಸಾರ ಹಾಲಹಲಮೋಹಶಾಂತ್ಯೈ…
ಎಂದು ಮಕ್ಕಳು ಶಿಕ್ಷಕ ಸಮಾಜವನ್ನು ಪೂಜಿಸಿದ ಆ ಕ್ಷಣಗಳಲ್ಲಿ ನಾವೂ ಅಲ್ಲಿದ್ದುದು ನಿಜಕ್ಕೂ ಅವಿಸ್ಮರಣೀಯ. ಇಂಥಹ ಧನ್ಯ ಶಿಕ್ಷಕ ವಿದ್ಯಾರ್ಥಿ ಸಮೂಹ ದೇಶದೆಲ್ಲೆಡೆ ಬೆಳೆದು ಬರಲೆಂಬ ಆಶಯ ನಮ್ಮೆಲ್ಲರದಾಗಲಿ.

 

  • ಸುರೇಶ್ಚಂದ್ರ ಕಲ್ಮಡ್ಕ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

ಅಹಮದಾಬಾದ್​ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ

ಟೇಕ್ ಆಫ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿರುವ  ಘಟನೆ ಗುಜರಾತಿನ ಅಹಮದಾಬಾದ್​​ನಲ್ಲಿ…

5 hours ago

ಹವಾಮಾನ ವರದಿ | 12-06-2025 | ಮುಂದೂಡಿದ ಭಾರೀ ಮಳೆ..! | ಜೂ.13 ರಿಂದ ಮುಂದುವರಿಯುವ ಮಳೆ |

ಜೂನ್ 13ರಿಂದ ಗಾಳಿಯ ಚಲನೆಯು ನೈರುತ್ಯದಿಂದ ಈಶಾನ್ಯಕ್ಕೆ ಬದಲಾಗುವ ಸಾಧ್ಯತೆಗಳಿರುವುದರಿಂದ ರಾಜ್ಯದ ವಿವಿದೆಡೆ…

6 hours ago

ತೆಂಗಿನ ಗೆರಟೆ ಮೌಲ್ಯವರ್ಧನೆ | ಇದು ಬರೀ “ಚಿಪ್ಪಿ”ಯಲ್ಲ ಇದರೊಳಗಿದೆ ಹಲವು ಬಗೆ..!

ತೆಂಗಿನ ಗೆರಟೆಯು ಮೌಲ್ಯವರ್ಧನೆಯಾದಾಗ ತೆಂಗಿನ ಒಟ್ಟಾರೆ ಆದಾಯವೂ ಹೆಚ್ಚಾಗಲು ಸಾಧ್ಯವಿದೆ. ಸದ್ಯ ಸಣ್ಣ…

9 hours ago

ಮಳೆ ಹಿನ್ನೆಲೆ | ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಶಾಲೆಗಳಿಗೆ ರಜೆ

ಮುಂದಿನ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ. ಹೀಗಾಗಿ…

13 hours ago

ಶನಿ ಬುಧರಿಂದ ನವಪಂಚಮ ರಾಜಯೋಗ

2025 ರಲ್ಲಿ ಶನಿ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ನಿರ್ಮಾಣವಾಗುತ್ತಿರುವ ನವಪಂಚಮ ರಾಜಯೋಗವು…

14 hours ago

ಸಂಪಾಜೆ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ…

22 hours ago