ಸುಳ್ಯ: ಪ್ರೇಮ ವೈಫಲ್ಯದ ಕಾರಣದಿಂದ ಶಿವ ಗಂಗೆ ಬೆಟ್ಟದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನು ಸುಳ್ಯದ ಯುವಕರು ಸಾಹಸದಿಂದ ಬದುಕಿಸಿದ್ದಾರೆ.
ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 7 ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಶಿವಂಗಂಗೆಗೆ ತೆರಳಿದ್ದರು. ಬೆಟ್ಟ ತಲಪುವ ಹೊತ್ತಿಗೆ ಯುವಕನೊಬ್ಬ ಮೇಲಿನಿಂದ ಜಿಗಿಯಲು ಸಿದ್ಧತೆ ಮಾಡಿರುವುದನ್ನು ಗಮನಿಸಿದ ಯುವಕರ ತಂಡವು ಅಲ್ಲಿನ ಅರ್ಚಕರ ಸಹಾಯದಿಂದ ರಕ್ಷಿಸಿದರು. ಈ ರಕ್ಷಣಾ ಕೆಲಸಕ್ಕೆ ಬೆಂಗಳೂರು ಯುವಕರು ಕೈಜೋಡಿಸಿದರು. ಯುವಕರನ ರಕ್ಷಿಸಿದ ಬಳಿಕ ತುಮಕೂರು ಪೊಲೀಸರಿಗೆ ಒಪ್ಪಿಸಲಾಯಿತು.
ಸುಳ್ಯದ ಯುವಕರ ತಂಡದಲ್ಲಿ ಜಯದೀಪ ಕುದ್ಕುಳಿ , ರಾಜೇಶ್ ಚೊಕ್ಕಾಡಿ, ಧನುಷ್ ಪೆರುಂಬಾರ್, ರೋಹಿತ್ ಪೇರಾಲು, ಉದಿತ್ ಕುಮಾರ್ ಅಜ್ಜಾವರ, ಲಿಖಿತ್ ಸುಳ್ಯ , ಗೌತಮ್ ಸುಳ್ಯ ಇದ್ದರು.
ಶಿವಗಂಗೆ ಬೆಟ್ಟವು ಬೆಂಗಳೂರು ನಗರದಿಂದ 54 ಕಿಮೀ ದೂರದಲ್ಲಿದ್ದು ತುಮಕೂರಿನಿಂದ 20 ಕಿಮೀ ದೂರದಲ್ಲಿದೆ. ಈ ಬೆಟ್ಟ ಸಮುದ್ರ ಮಟ್ಟದಿಂದ 1380 ಮೀಟರ್ ಎತ್ತರದಲ್ಲಿ ಇದೆ.
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…
ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯುವ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…