ಸುಳ್ಯ: ಪ್ರೇಮ ವೈಫಲ್ಯದ ಕಾರಣದಿಂದ ಶಿವ ಗಂಗೆ ಬೆಟ್ಟದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನು ಸುಳ್ಯದ ಯುವಕರು ಸಾಹಸದಿಂದ ಬದುಕಿಸಿದ್ದಾರೆ.
ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 7 ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಶಿವಂಗಂಗೆಗೆ ತೆರಳಿದ್ದರು. ಬೆಟ್ಟ ತಲಪುವ ಹೊತ್ತಿಗೆ ಯುವಕನೊಬ್ಬ ಮೇಲಿನಿಂದ ಜಿಗಿಯಲು ಸಿದ್ಧತೆ ಮಾಡಿರುವುದನ್ನು ಗಮನಿಸಿದ ಯುವಕರ ತಂಡವು ಅಲ್ಲಿನ ಅರ್ಚಕರ ಸಹಾಯದಿಂದ ರಕ್ಷಿಸಿದರು. ಈ ರಕ್ಷಣಾ ಕೆಲಸಕ್ಕೆ ಬೆಂಗಳೂರು ಯುವಕರು ಕೈಜೋಡಿಸಿದರು. ಯುವಕರನ ರಕ್ಷಿಸಿದ ಬಳಿಕ ತುಮಕೂರು ಪೊಲೀಸರಿಗೆ ಒಪ್ಪಿಸಲಾಯಿತು.
ಸುಳ್ಯದ ಯುವಕರ ತಂಡದಲ್ಲಿ ಜಯದೀಪ ಕುದ್ಕುಳಿ , ರಾಜೇಶ್ ಚೊಕ್ಕಾಡಿ, ಧನುಷ್ ಪೆರುಂಬಾರ್, ರೋಹಿತ್ ಪೇರಾಲು, ಉದಿತ್ ಕುಮಾರ್ ಅಜ್ಜಾವರ, ಲಿಖಿತ್ ಸುಳ್ಯ , ಗೌತಮ್ ಸುಳ್ಯ ಇದ್ದರು.
ಶಿವಗಂಗೆ ಬೆಟ್ಟವು ಬೆಂಗಳೂರು ನಗರದಿಂದ 54 ಕಿಮೀ ದೂರದಲ್ಲಿದ್ದು ತುಮಕೂರಿನಿಂದ 20 ಕಿಮೀ ದೂರದಲ್ಲಿದೆ. ಈ ಬೆಟ್ಟ ಸಮುದ್ರ ಮಟ್ಟದಿಂದ 1380 ಮೀಟರ್ ಎತ್ತರದಲ್ಲಿ ಇದೆ.
ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…
ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…
ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…
ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…