ಸುಳ್ಯ: ಪ್ರೇಮ ವೈಫಲ್ಯದ ಕಾರಣದಿಂದ ಶಿವ ಗಂಗೆ ಬೆಟ್ಟದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನು ಸುಳ್ಯದ ಯುವಕರು ಸಾಹಸದಿಂದ ಬದುಕಿಸಿದ್ದಾರೆ.
ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 7 ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಶಿವಂಗಂಗೆಗೆ ತೆರಳಿದ್ದರು. ಬೆಟ್ಟ ತಲಪುವ ಹೊತ್ತಿಗೆ ಯುವಕನೊಬ್ಬ ಮೇಲಿನಿಂದ ಜಿಗಿಯಲು ಸಿದ್ಧತೆ ಮಾಡಿರುವುದನ್ನು ಗಮನಿಸಿದ ಯುವಕರ ತಂಡವು ಅಲ್ಲಿನ ಅರ್ಚಕರ ಸಹಾಯದಿಂದ ರಕ್ಷಿಸಿದರು. ಈ ರಕ್ಷಣಾ ಕೆಲಸಕ್ಕೆ ಬೆಂಗಳೂರು ಯುವಕರು ಕೈಜೋಡಿಸಿದರು. ಯುವಕರನ ರಕ್ಷಿಸಿದ ಬಳಿಕ ತುಮಕೂರು ಪೊಲೀಸರಿಗೆ ಒಪ್ಪಿಸಲಾಯಿತು.
ಸುಳ್ಯದ ಯುವಕರ ತಂಡದಲ್ಲಿ ಜಯದೀಪ ಕುದ್ಕುಳಿ , ರಾಜೇಶ್ ಚೊಕ್ಕಾಡಿ, ಧನುಷ್ ಪೆರುಂಬಾರ್, ರೋಹಿತ್ ಪೇರಾಲು, ಉದಿತ್ ಕುಮಾರ್ ಅಜ್ಜಾವರ, ಲಿಖಿತ್ ಸುಳ್ಯ , ಗೌತಮ್ ಸುಳ್ಯ ಇದ್ದರು.
ಶಿವಗಂಗೆ ಬೆಟ್ಟವು ಬೆಂಗಳೂರು ನಗರದಿಂದ 54 ಕಿಮೀ ದೂರದಲ್ಲಿದ್ದು ತುಮಕೂರಿನಿಂದ 20 ಕಿಮೀ ದೂರದಲ್ಲಿದೆ. ಈ ಬೆಟ್ಟ ಸಮುದ್ರ ಮಟ್ಟದಿಂದ 1380 ಮೀಟರ್ ಎತ್ತರದಲ್ಲಿ ಇದೆ.
ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೂ ಮೋಡ–ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.…
ಜೂನ್ನಲ್ಲಿ ಶೇ.29ರಷ್ಟು ಮಳೆ ಕೊರತೆ ಎದುರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು,…
ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ…
ಸರ್ಕಾರಿ ಶಾಲೆಗಳಲ್ಲಿ ಬಾಕಿ ಇರುವ ಮಕ್ಕಳಿಗೆ ಆಗಸ್ಟ್ 28ರೊಳಗೆ ಶೂ ಮತ್ತು ಸಾಕ್ಸ್…
ರಾಜ್ಯಾದ್ಯಂತ ಪಿಜಿ, ಹಾಸ್ಟೆಲ್, ಕ್ಯಾಟರಿಂಗ್ ಹಾಗೂ ಹೋಟೆಲ್ಗಳಲ್ಲಿ ಆಹಾರ ಸುರಕ್ಷತಾ ತಪಾಸಣೆ ಮುಂದುವರಿಯಲಿದೆ…
ಉತ್ತರ ಪ್ರದೇಶದಲ್ಲಿ ಸುಮಾರು 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ ನೀಡಿ ಗೋ…