Advertisement
ಸುದ್ದಿಗಳು

ಶ್ರೀ ಚೆನ್ನಕೇಶವ ಪ್ರವಾಸಿ ತಂಡದಿಂದ ಕಾಶಿ ಕ್ಷೇತ್ರಯಾತ್ರೆ

Share

ಸುಳ್ಯ : ಶ್ರೀ ಚೆನ್ನಕೇಶವ ಪ್ರವಾಸಿ ತಂಡದಿಂದ ನಿವೃತ್ತ ಕ್ಷೇತ್ರಾಭಿವೃದ್ಧಿ ಅಧಿಕಾರಿ ಎಂ.ಮೀನಾಕ್ಷಿ ಗೌಡ ನೇತೃತ್ವದಲ್ಲಿ 23 ಮಂದಿ ಕಾಶಿ, ಪ್ರಯಾಗ, ಗಯ, ಬೋದಗಯಾ ಇನ್ನಿತರ ಸ್ಥಳಗಳಿಗೆ ಪ್ರವಾಸ ನಡೆಸಿತು.

ಮಂಗಳೂರಿನಿಂದ , ಮುಂಬೈ ಮೂಲಕ ವಾರಣಾಸಿಗೆ ವಿಮಾನ ಪ್ರಯಾಣ ತೆರಳಿ ಅಲ್ಲಿ ವಿವಿಧ ಕ್ಷೇತ್ರಗಳನ್ನು ಸಂದರ್ಶಿಸಿತು. ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ ಕಾಲಬೈರವೇಶ್ವರ , ಕಾಶಿ ವಿಶ್ವನಾಥ ದೇವಸ್ಥಾನ, ಕಾಶಿ ವಿಶಾಲಾಕ್ಷಿ, ಹರಿಶ್ಚಂದ್ರ ಘಾಟ್, ಬಿಂದು ಮಾಧವ ದೇವಸ್ಥಾನ, ತುಳಸಿ ಮಾನಸ ಮಂದಿರ, ಸಂಕಟ ಮೋಚನ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಬಳಿಕ ಗಂಗಾರತಿ ವೀಕ್ಷಿಸಲಾಯಿತು.

ಮರುದಿನ ಪ್ರಯಾಗರಾಜ್ (ಅಲಹಾಬಾದ್)ಗೆ ತೆರಳಿ ಅಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಬಡಾ ಹನುಮಾನ್ ದೇವರ ದರ್ಶನ ಮಾಡಲಾಯಿತು.
ಮೂರನೇ ದಿನ ಬಿಹಾರದ ಬುದ್ದಗಯಾಕ್ಕೆ ತೆರಳಿ ಬುದ್ದ ನಿಗೆ ಜ್ಞಾನೋದಯ ಆದ ಪ್ರಸಿದ್ಧ ಸ್ಥಳ ಮಹಾಬೋದಿ ದೇವಸ್ಥಾನ, ಅಶೋಕ ಸ್ತಂಭ, ಬೋದಿವೃಕ್ಷ ಮೊದಲಾದ ಸ್ಥಳವನ್ನು ಸಂದರ್ಶಿಸಲಾಯಿತು. ಅಲ್ಲಿಯೇ ಬಳಿಯಲ್ಲಿದ್ದ 25 ಮೀಟರ್ ಎತ್ತರದ ಮಹಾ ಬುದ್ದನ ವಿಗ್ರಹವನ್ನು ವೀಕ್ಷಿಸಲಾಯಿತು.

ನಾಲ್ಕನೇ ದಿನ ಗಯಾಕ್ಕೆ ತೆರಳಿ ಅಲ್ಲಿ ವಿಷ್ಣುಪಾದ ದೇವಸ್ಥಾನ, ಅಕ್ಷಯ ವಟ, ಸರಯೂ ನದಿಯನ್ನು ದರ್ಶಿಸಲಾಯಿತು. ಗಯಾದಿಂದ ಕಲ್ಕತ್ತಾ ಮತ್ತು ಅಲ್ಲಿಂದ ಬೆಂಗಳೂರಿಗೆ ವಾಯುಯಾನ ಮೂಲಕ ತಲುಪಿ ಆನಂತರ ಬಸ್ಸಿನ ಮೂಲಕ ಸುಳ್ಯಕ್ಕೆ ಹಿಂತಿರುಗಲಾಯಿತು.

ಪ್ರವಾಸಿ ತಂಡದಲ್ಲಿ ಎಂ.ಮೀನಾಕ್ಷಿ ಗೌಡ, ಶೋಭಾ ಚಿದಾನಂದ, ಡಾ|ಹರಪ್ರಸಾದ್ ತುದಿಯಡ್ಕ, ಶಶಿಕಲಾ ಹರಪ್ರಸಾದ್, ಡಾ|ರೇವತಿ ನಂದನ್, ಕೆ.ಬಿ.ರಾಮಚಂದ್ರ, ಭವಾನಿ, ರಘುರಾಮ ಕೆ,ಬಿ., ಪದ್ಮಾವತಿ, ಕುಶಾಲಪ್ಪ ಗೌಡ ಕಾರಿಂಜ, ಪುಷ್ಪಾವತಿ, ದಿನಕರ ಕೆ.ಬಿ., ಶೀಲಾ ದಿನಕರ್, ಎಂ.ವಿ.ಗಿರಿಜಾ, ವೆಂಕಟ್ರಮಣ ಗೌಡ ಹುಲಿಮನೆ, ರಾಜಮ್ಮ, ಡಾ|ವೀಣಾ ವಿಜಯಕುಮಾರ್ ಮೈಸೂರು, ಗೀತಾ ಬೆಂಗಳೂರು, ಅರುಣ ಬೆಂಗಳೂರು, ದಾಮೋದರ ಕುಂದಲ್ಪಾಡಿ, ಲೀಲಾ ದಾಮೋದರ್, ಗಂಗಾಧರ ಮಟ್ಟಿ, ಚಿತ್ರಾ ಮಟ್ಟಿ ಪಾಲ್ಗೊಂಡಿದ್ದರು.
ಕಳೆದ ವರ್ಷ ಈ ತಂಡ ವೈಷ್ಣೋವದೇವಿ, ಅಮೃತಸರ್, ವಾಘಾಬಾರ್ಡರ್ ಪ್ರವಾಸ ಕೈಗೊಂಡಿತ್ತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?

ಸಂಪತ್ತು ಮತ್ತು ಸೌಲಭ್ಯಗಳು ಹೆಚ್ಚಿರುವುದೇ ನಿಜವಾದ ಶ್ರೀಮಂತಿಕೆಯಲ್ಲ; ಅವುಗಳನ್ನು ವಿವೇಕದಿಂದ ಬಳಸುವ ಮನಸ್ಸು…

10 hours ago

ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?

ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…

21 hours ago

ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ

ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್‌ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್‌ ಪೂರೈಕೆಯ…

21 hours ago

ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ : ಮಂಗಳೂರು ಮಹಾನಗರಪಾಲಿಕೆ ಸೂಚನೆ

2026ರ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಸೂಚಿಸಿದ್ದು, POP…

1 day ago

ಹವಾಮಾನ ವರದಿ | 09-09-2026 | ಕರ್ನಾಟಕದಲ್ಲಿ ಮಳೆಯ ಚಿತ್ರಣ ಬದಲಾಗುತ್ತಿದೆ – ಸೆ.11ರಿಂದ ಕರಾವಳಿಯಲ್ಲಿ ಬದಲಾವಣೆ

ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಒಟ್ಟಾರೆ ಇಳಿಮುಖವಾಗುತ್ತಿದ್ದು, ಕರಾವಳಿಯಲ್ಲಿ ಸೆ.11ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.…

2 days ago

ಕ್ಯಾಂಪ್ಕೋ ಅಭಿವೃದ್ಧಿಯ ಹಾದಿಯಲ್ಲಿ: ₹2,900 ಕೋಟಿ ಅಡಿಕೆ ವ್ಯವಹಾರದ ನಡುವೆ ಮುಂದಿರುವ ಸವಾಲುಗಳೇನು?

2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…

2 days ago