Advertisement
ಸುದ್ದಿಗಳು

ಶ್ರೀ ಚೆನ್ನಕೇಶವ ಪ್ರವಾಸಿ ತಂಡದಿಂದ ಕಾಶಿ ಕ್ಷೇತ್ರಯಾತ್ರೆ

Share

ಸುಳ್ಯ : ಶ್ರೀ ಚೆನ್ನಕೇಶವ ಪ್ರವಾಸಿ ತಂಡದಿಂದ ನಿವೃತ್ತ ಕ್ಷೇತ್ರಾಭಿವೃದ್ಧಿ ಅಧಿಕಾರಿ ಎಂ.ಮೀನಾಕ್ಷಿ ಗೌಡ ನೇತೃತ್ವದಲ್ಲಿ 23 ಮಂದಿ ಕಾಶಿ, ಪ್ರಯಾಗ, ಗಯ, ಬೋದಗಯಾ ಇನ್ನಿತರ ಸ್ಥಳಗಳಿಗೆ ಪ್ರವಾಸ ನಡೆಸಿತು.

ಮಂಗಳೂರಿನಿಂದ , ಮುಂಬೈ ಮೂಲಕ ವಾರಣಾಸಿಗೆ ವಿಮಾನ ಪ್ರಯಾಣ ತೆರಳಿ ಅಲ್ಲಿ ವಿವಿಧ ಕ್ಷೇತ್ರಗಳನ್ನು ಸಂದರ್ಶಿಸಿತು. ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ ಕಾಲಬೈರವೇಶ್ವರ , ಕಾಶಿ ವಿಶ್ವನಾಥ ದೇವಸ್ಥಾನ, ಕಾಶಿ ವಿಶಾಲಾಕ್ಷಿ, ಹರಿಶ್ಚಂದ್ರ ಘಾಟ್, ಬಿಂದು ಮಾಧವ ದೇವಸ್ಥಾನ, ತುಳಸಿ ಮಾನಸ ಮಂದಿರ, ಸಂಕಟ ಮೋಚನ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಬಳಿಕ ಗಂಗಾರತಿ ವೀಕ್ಷಿಸಲಾಯಿತು.

ಮರುದಿನ ಪ್ರಯಾಗರಾಜ್ (ಅಲಹಾಬಾದ್)ಗೆ ತೆರಳಿ ಅಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಬಡಾ ಹನುಮಾನ್ ದೇವರ ದರ್ಶನ ಮಾಡಲಾಯಿತು.
ಮೂರನೇ ದಿನ ಬಿಹಾರದ ಬುದ್ದಗಯಾಕ್ಕೆ ತೆರಳಿ ಬುದ್ದ ನಿಗೆ ಜ್ಞಾನೋದಯ ಆದ ಪ್ರಸಿದ್ಧ ಸ್ಥಳ ಮಹಾಬೋದಿ ದೇವಸ್ಥಾನ, ಅಶೋಕ ಸ್ತಂಭ, ಬೋದಿವೃಕ್ಷ ಮೊದಲಾದ ಸ್ಥಳವನ್ನು ಸಂದರ್ಶಿಸಲಾಯಿತು. ಅಲ್ಲಿಯೇ ಬಳಿಯಲ್ಲಿದ್ದ 25 ಮೀಟರ್ ಎತ್ತರದ ಮಹಾ ಬುದ್ದನ ವಿಗ್ರಹವನ್ನು ವೀಕ್ಷಿಸಲಾಯಿತು.

ನಾಲ್ಕನೇ ದಿನ ಗಯಾಕ್ಕೆ ತೆರಳಿ ಅಲ್ಲಿ ವಿಷ್ಣುಪಾದ ದೇವಸ್ಥಾನ, ಅಕ್ಷಯ ವಟ, ಸರಯೂ ನದಿಯನ್ನು ದರ್ಶಿಸಲಾಯಿತು. ಗಯಾದಿಂದ ಕಲ್ಕತ್ತಾ ಮತ್ತು ಅಲ್ಲಿಂದ ಬೆಂಗಳೂರಿಗೆ ವಾಯುಯಾನ ಮೂಲಕ ತಲುಪಿ ಆನಂತರ ಬಸ್ಸಿನ ಮೂಲಕ ಸುಳ್ಯಕ್ಕೆ ಹಿಂತಿರುಗಲಾಯಿತು.

ಪ್ರವಾಸಿ ತಂಡದಲ್ಲಿ ಎಂ.ಮೀನಾಕ್ಷಿ ಗೌಡ, ಶೋಭಾ ಚಿದಾನಂದ, ಡಾ|ಹರಪ್ರಸಾದ್ ತುದಿಯಡ್ಕ, ಶಶಿಕಲಾ ಹರಪ್ರಸಾದ್, ಡಾ|ರೇವತಿ ನಂದನ್, ಕೆ.ಬಿ.ರಾಮಚಂದ್ರ, ಭವಾನಿ, ರಘುರಾಮ ಕೆ,ಬಿ., ಪದ್ಮಾವತಿ, ಕುಶಾಲಪ್ಪ ಗೌಡ ಕಾರಿಂಜ, ಪುಷ್ಪಾವತಿ, ದಿನಕರ ಕೆ.ಬಿ., ಶೀಲಾ ದಿನಕರ್, ಎಂ.ವಿ.ಗಿರಿಜಾ, ವೆಂಕಟ್ರಮಣ ಗೌಡ ಹುಲಿಮನೆ, ರಾಜಮ್ಮ, ಡಾ|ವೀಣಾ ವಿಜಯಕುಮಾರ್ ಮೈಸೂರು, ಗೀತಾ ಬೆಂಗಳೂರು, ಅರುಣ ಬೆಂಗಳೂರು, ದಾಮೋದರ ಕುಂದಲ್ಪಾಡಿ, ಲೀಲಾ ದಾಮೋದರ್, ಗಂಗಾಧರ ಮಟ್ಟಿ, ಚಿತ್ರಾ ಮಟ್ಟಿ ಪಾಲ್ಗೊಂಡಿದ್ದರು.
ಕಳೆದ ವರ್ಷ ಈ ತಂಡ ವೈಷ್ಣೋವದೇವಿ, ಅಮೃತಸರ್, ವಾಘಾಬಾರ್ಡರ್ ಪ್ರವಾಸ ಕೈಗೊಂಡಿತ್ತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 18-08-2026 | ಕರಾವಳಿಯಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ – ಮಲೆನಾಡಿನಲ್ಲಿ ಆಗಸ್ಟ್ 21 ರಿಂದ ಇಳಿಕೆ

ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೂ ಮೋಡ–ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.…

12 hours ago

ಬೆಳಗಾವಿಯಲ್ಲಿ ಮಳೆ ಕೊರತೆಯ ಆತಂಕ ದೂರ ; ಜುಲೈ ಮಳೆಯಿಂದ ಕೃಷಿ ಚಟುವಟಿಕೆಗೆ ಚುರುಕು

ಜೂನ್‌ನಲ್ಲಿ ಶೇ.29ರಷ್ಟು ಮಳೆ ಕೊರತೆ ಎದುರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು,…

20 hours ago

‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ನಕಲಿ ಸುದ್ದಿ : ಸಾರ್ವಜನಿಕರಿಗೆ ಕೇಂದ್ರ ಸಚಿವರಿಂದ ಮಾಹಿತಿ

ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ…

21 hours ago

ಆಗಸ್ಟ್ 28 ರೊಳಗೆ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ: ಸಚಿವ ಮಧು ಬಂಗಾರಪ್ಪ

ಸರ್ಕಾರಿ ಶಾಲೆಗಳಲ್ಲಿ ಬಾಕಿ ಇರುವ ಮಕ್ಕಳಿಗೆ ಆಗಸ್ಟ್ 28ರೊಳಗೆ ಶೂ ಮತ್ತು ಸಾಕ್ಸ್…

21 hours ago

ರಾಜ್ಯಾದ್ಯಂತ ಆಹಾರ ಸುರಕ್ಷತೆ ಪರಿಶೀಲನೆಗೆ ದಾಳಿ ಮುಂದುವರಿಕೆ : ಉಲ್ಲಂಘನೆಗೆ ಕ್ಷಮೆಯಿಲ್ಲ ಎಂದ ಆರೋಗ್ಯ ಸಚಿವ

ರಾಜ್ಯಾದ್ಯಂತ ಪಿಜಿ, ಹಾಸ್ಟೆಲ್‌, ಕ್ಯಾಟರಿಂಗ್ ಹಾಗೂ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ತಪಾಸಣೆ ಮುಂದುವರಿಯಲಿದೆ…

21 hours ago

ಗೋ ಸಂರಕ್ಷಣೆಗೆ Gen Z – 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ – ಗ್ರಾಮೀಣ ಆರ್ಥಿಕತೆಗೆ ಹೊಸ ಮಾದರಿಯೇ?

ಉತ್ತರ ಪ್ರದೇಶದಲ್ಲಿ ಸುಮಾರು 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ ನೀಡಿ ಗೋ…

1 day ago