ಸಂಬಂಧ

September 2, 2019
1:00 PM
ಒಣಗಿ ಹೋದ ಮರದ ಮೇಲೆ
ಕುಳಿತ ಪಕ್ಷಿಗೆ ಕಾಡುತ್ತಿದೆ ಚಿಂತೆ
ವಸಂತ ಮಾಸದಲ್ಲೂ ಮರದಲ್ಲಿ
ಚಿಗುರಿಲ್ಲವೆಂದು…
ಅದು ಬಯಸುತ್ತಿದೆ
ಹೂವಿನ ಘಮ,ಹಣ್ಣಿನ ಸ್ವಾದ
ಮತ್ತೆ ಬೇಕೆಂದು
ಅತ್ತು ಕರೆಯುತ್ತಿದೆ ಮಳೆರಾಯನ
ಬಂದು ಚಿಗುರಿಸಬಾರದೇ ಮರವನ್ನ?
ಆದರೆ ಪಕ್ಷಿಗೇನು ಗೊತ್ತು?
ಮರ ಸಾಯಲೆಂದು
ಬೇರಿಗೆ ವಿಷವುಣಿಸಿದ ಮನುಜನ ಮರ್ಮ!
ನೆರಳನುಣಿಸಿದ ಮರಕ್ಕೂ
ಗೊತ್ತಿಲ್ಲ ತಾನುಂಡಿದ್ದು ವಿಷವೆಂದು
ಸತ್ತ ಮರವೂ ಕಣ್ಣೀರಿಡುತ್ತಿದೆ
ಬಾರದ ಮಳೆಯ ಶಪಿಸುತ್ತಿದೆ
ಮರದ ಆಶ್ರಯ ಮರೆಯದ
ಪಕ್ಷಿ ಮತ್ತೆ ಹಾಡಲಾರಂಭಿಸಿದೆ
ಮರದ ನೋವ ಮರೆಸಲೆಂದು
ಎಂದೆಂದೂ ಜೊತೆ ನಾನಿರುವೆನೆಂದು…!

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಹೊಸರುಚಿ | ನೆಕ್ಕರೆ ಮಾವಿನ ಕಾಯಿ ಪಲ್ಯ
June 16, 2025
8:00 AM
by: ದಿವ್ಯ ಮಹೇಶ್
ಬದುಕು ಪುರಾಣ | ‘ಅವನೇನು.. ಹರಿಶ್ಚಂದ್ರನೋ!’
June 15, 2025
6:40 AM
by: ನಾ.ಕಾರಂತ ಪೆರಾಜೆ
ಅಡಿಕೆ ಜಗಿಯುವ ಪ್ರವೃತ್ತಿ ಎಲ್ಲೆಲ್ಲಿ ಇದೆ ?
June 14, 2025
2:43 PM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಹೊಸರುಚಿ | ಹಲಸಿನ ಹಣ್ಣಿನ ಮೈಸೂರು ಪಾಕ್
June 14, 2025
7:13 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group