ಸಾಲಮನ್ನಾ ಯೋಜನೆಯ ಅನುಷ್ಠಾನದಲ್ಲಿನ ಗೊಂದಲ ಸರಿಪಡಿಸಲು ಶಾಸಕ ಅಂಗಾರ ಆಗ್ರಹ

October 31, 2019
7:40 PM

ಸುಳ್ಯ: ರಾಜ್ಯ ಸರ್ಕಾರ ಘೋಷಣೆ ಮಾಡಿದ ಒಂದು ಲಕ್ಷ ರೂ ತನಕದ ಸಾಲ ಮನ್ನಾ ಯೋಜನೆಯ ಅನುಷ್ಠಾನದಲ್ಲಿ ಪ್ರಾರಂಭಿಕ ಹಂತದಲ್ಲಿ ಸರ್ಕಾರದ ಆದೇಶಗಳಿಂದಾಗಿ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಬೇಕೆಂದು ಶಾಸಕ ಎಸ್.ಅಂಗಾರ ರಾಜ್ಯ ಗೃಹ ಹಾಗೂ ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಆಗ್ರಹಿಸಿದ್ದಾರೆ.

Advertisement
Advertisement
Advertisement

ತಾಂತ್ರಿಕ ಕಾರಣಗಳಿಂದಾಗಿ ಸಾಲಮನ್ನಾ ವಂಚಿತರಾಗಬಹುದಾದ ರೈತರ ಹಿತದೃಷ್ಠಿಯಿಂದ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಅವಕಾಶ ನೀಡಿ ಎಲ್ಲಾ ಅರ್ಹ ರೈತರಿಗೆ ಸಾಲ ಮನ್ನಾ ಸವಲತ್ತು ಸಿಗುವಂತೆ ತಂತ್ರಾಂಶದಲ್ಲಿ ಅವಕಾಶ ಮಾಡಬೇಕೆಂದು ಸಚಿವರಲ್ಲಿ ವಿನಂತಿಸಲಾಗಿದೆ. ಈ ಕುರಿತು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಶಾಸಕರಿಗೆ ಭರವಸೆ ನೀಡಿದ್ದಾರೆ. ಪ್ರಾಥಮಿಕ ಸಹಕಾರಿ ಸಂಘಗಳು ಸದಸ್ಯರ ರೂಪೇ ಕೆ.ಸಿ.ಸಿ ಖಾತೆಗಳ ಸಂಖ್ಯೆಯನ್ನು ನಮೂದಿಸದೇ ಇದ್ದುದರಿಂದ ಬಹಳಷ್ಟು ರೈತರ ಸಾಲ ಮನ್ನಾ ಮೊಬಲಗು ಜಮಾ ಆಗದೆ ಬಾಕಿ ಇರುತ್ತದೆ ಈ ಬಗ್ಗೆ ಮಾರ್ಚ್ ತನಕ ಸಾಲ ಮನ್ನಾ ಮೊತ್ತ ಬಿಡುಗಡೆಯಾದ ಖಾತೆಗಳಿಗೆ ಎಡಿಟಿಂಗ್ ಅವಕಾಶ ನೀಡುವುದರ ಮೂಲಕ ಸದಸ್ಯರ ರೂಪೇ ಖಾತೆ ಸಂಖ್ಯೆ ನಮೂದಿಸಲು ಅವಕಾಶ ನೀಡಿರುತ್ತಾರೆ.

Advertisement

ಮಾರ್ಚ್ 2019ರ ನಂತರ ಬಿಡುಗಡೆಯಾದ ಹಾಗು ಬಿಡುಗಡೆಯಾಗಲಿರುವ ಖಾತೆಗಳಿಗೂ ಎಡಿಟಿಂಗ್ ಅವಕಾಶ ನೀಡಬೇಕು, ಸದಸ್ಯರ ನಂಬ್ರದ ಕಾಲಂ ಸರಿಯಾಗಿ ಕಾಣುವಂತೆ ಮಾಡಲು ಕ್ರಮ ಕೈಗೊಳ್ಳಬೇಕು, ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಿದರಿಂದ ಅದು ಹೊಸ ಪಡಿತರ ಚೀಟಿ ಎಂದು ನಮೂದಾಗುವ ಕಾರಣ ಹಲವು ಮಂದಿ ಕೃಷಿಕರು ಸಾಲಮನ್ನಾ ಸೌಲಭ್ಯ ಪಡೆಯುವುದರಿಂದ ವಂಚಿತರಾಗಿದ್ದಾರೆ. ಅರ್ಹರಿಗೆ ಸಾಲಮನ್ನಾ ಸೌಲಭ್ಯ ದೊರಕಿಸಲು ಕ್ರಮ ಕೈಗೊಳ್ಳಬೇಕು. ವಿವರ ನಮೂದಿಸುವಾಗ ತಪ್ಪುಗಳು ಉಂಟಾಗಿರುವುದನ್ನು ಸರಿಪಡಿಸಲು ಅವಕಾಶ ನೀಡಬೇಕು, ಎಫ್‍ಎಸ್‍ಡಿ ಇನ್ ಕಂಪ್ಲೀಟ್ ಮತ್ತು ಪ್ಯಾಕ್ಸ್ ಡಿಇಒ ಲಾಗಿನ್‍ನಲ್ಲಿ ವಿಲೇವಾರಿಗೆ ಬಾಕಿ ಇರುವ ಪ್ರಕರಣವನ್ನು ಇತ್ಯರ್ಥ ಪಡಿಸಲು ತಾಲೂಕು ಸಮಿತಿಗೆ ವರ್ಗಾಯಿಸಬೇಕು, ಹಿಂದಿನ ಆದೇಶದಂತೆ ಆದಾಯ ತರಿಗೆ, ಪಿಂಚಣಿ, ವೇತನ ಮಾಹಿತಿ ಅಪ್‍ಲೋಡ್ ಆಗಿದ್ದು ಇದರಿಂದ ಹಲವು ಮಂದಿ ಸೌಲಭ್ಯ ವಂಚಿತರಾಗಿದ್ದಾರೆ ಇದನ್ನು ತಿದ್ದುಪಡಿಗೆ ಅವಕಾಶ ನೀಡಬೇಕು, ಸಾಲಮನ್ನಾ ಸೌಲಭ್ಯವನ್ನು ಸಹಕಾರಿ ಸಂಘಗಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಲ್ಲಿರುವ ಖಾತೆಗೆ ಬಿಡುಗಡೆ ಮಾಡಿ ಸಹಕಾರಿ ಸಂಘಗಳ ಮೂಲಕ ರೈತರಿಗೆ ತಕ್ಷಣ ದೊರಕಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು, ಟಿ.ಎಲ್.ಸಿ ಸ್ಕ್ಯಾನ್ ಅಪ್‍ಲೋಡ್ ಪೆಂಡಿಂಗ್ ಪ್ರಕರಣವನ್ನು ತಾಲೂಕು ಸಮಿತಿಗೆ ವರ್ಗಾಯಿಸಬೇಕು, ಜಿ.ಪಿ.ಎ ನೀಡಿದ ಪ್ರಕರಣಗಳಿಗೆ ಸಾಲ ಮನ್ನಾ ಸವಲತ್ತು ಅವಕಾಶ ನೀಡಬೇಕು, ಸಾಲ ಪಡೆದ ಬಳಿಕ ಪಹಣಿ ಪೋಡಿ ದುರಸ್ತಿ, ಖಾತಾ ಬದಲಾವಣೆ, ಇತ್ಯಾದಿ ಕಾರಣಗಳಿಂದ ಪಹಣಿಯಲ್ಲಿ ಹೆಸರು ಬದಲಾಗಿದ್ದು ಇಂತಹಾ ಪ್ರಕರಣಗಳನ್ನು ತಾಲೂಕು ಸಮಿತಿಯಲ್ಲಿ ವಿಲೇವಾರಿಗೆ ಅವಕಾಶ ನೀಡಬೇಕು ಎಂದು ಮನವಿ ಆಗ್ರಹಿಸಲಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೆಂಗಳೂರಿನಲ್ಲಿ ನೀರಿಗಾಗಿ ಖರ್ಚು…! | ಜಲಮಂಡಳಿಗೆ ಆರ್ಥಿಕ ಸಂಕಷ್ಟ..!
March 29, 2024
3:03 PM
by: ದ ರೂರಲ್ ಮಿರರ್.ಕಾಂ
Karnataka Weather | 28-03-2024 | ಕೆಲವು ಕಡೆ ತುಂತುರು ಮಳೆ | ಮಾ.31 ನಂತರ ಕೆಲವು ಕಡೆ ಸಾಮಾನ್ಯ ಮಳೆ ನಿರೀಕ್ಷೆ |
March 28, 2024
1:19 PM
by: ಸಾಯಿಶೇಖರ್ ಕರಿಕಳ
ಬರ ಹಿನ್ನೆಲೆ | ಮೈಸೂರು ಜಿಲ್ಲೆಯಲ್ಲಿ ಪಂಪ್‌ಸೆಟ್ ಬಳಸಿ ಕೃಷಿಗೆ ನದಿ ನೀರು ಬಳಕೆ ನಿಷೇಧ |
March 27, 2024
10:01 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಪ್ರಕರಣಗಳಲ್ಲಿ ದೂರು ದಾಖಲಾಗುತ್ತಿಲ್ಲವೇಕೆ…? | ಆರೋಪಿಗಳು ಪತ್ತೆಯಾಗುತ್ತಿಲ್ಲವೇಕೆ…? |
March 27, 2024
9:32 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror