ಸುಳ್ಯ: ಸುಳ್ಯ ತಾಲೂಕು ಅಮರ ಮುಡ್ನೂರು ಗ್ರಾಮದ ಅಶ್ವಿತಾ ಮೋಹನ್ 2019ನೇ ಸಾಲಿನ ಸಿ.ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ.
ಸುಳ್ಯದ ಹಾಸನಡ್ಕ ಮತ್ತು ಕುಕ್ಕುಜಡ್ಕ ಪ್ರಾಥಮಿಕ, ಕೆವಿಜಿ ಆಂಗ್ಲ ಮಾಧ್ಯಮ ಪ್ರೌಡ ಶಾಲೆಯಲ್ಲಿ ಹೈಸ್ಕೂಲ್, ಮೂಡುಬಿದರೆ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣ ಪೂರೈಸಿದ್ದಾರೆ. ಇವರು ಮಂಗಳೂರು ಸಂಧ್ಯಾ ಸಂಸ್ಥೆಯಲ್ಲಿ ತರಬೇತಿ ಪಡೆದು ಸುಳ್ಯದ ಭಟ್ ಅಸೋಸಿಯೇಟ್ಸ್ ಮತ್ತು ಮಂಗಳೂರಿನ ಮೊಗೆರಾಯ ರತ್ನಂ ಆಂಡ್ ಕಂಪನಿಯಲ್ಲಿ ಸೇವೆ ಸಲ್ಲಿಸುತಿದ್ದಾರೆ. ಇವರು ಅಮರಮೂಡ್ನೂರು ಅಲಂಗೂರು ದಿ.ಮೋಹನ್ ಮತ್ತು ಸುಕುಮಾರಿ ಮೋಹನ್ ದಂಪತಿ ಪುತ್ರಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel