(ಕಡತ ಚಿತ್ರ )
ನೆಟ್ಟಣ: ಮಂಗಳೂರು-ಬೆಂಗಳೂರು ನಡುವಿನ ರೈಲು ಮಾರ್ಗದಲ್ಲಿ ಸುಬ್ರಹ್ಮಣ್ಯದಿಂದ ಸಕಲೇಶಪುರ ನಡುವಿನ ರೈಲು ಹಳಿಯಲ್ಲಿ ಮಣಿಬಂಡ ಎಂಬಲ್ಲಿ ಬಂಡೆಯೊಂದು ರೈಲು ಹಳಿ ಮೇಲೆ ಉರುಳಿ ಬೀಳಲು ಸಿದ್ದವಾಗಿದೆ. ಬಂಡೆ ತೆರವು ಕಾಮಗಾರಿಯನ್ನು ಶನಿವಾರ ನಡೆಸಲು ರೈಲ್ವೆ ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದಾರೆ.
ಶನಿವಾರ ಬಂಡೆ ಸ್ಪೋಟಿಸುವ ಕಾಮಗಾರಿ ವೇಳೆ ಮತ್ತಷ್ಟು ಭೂಕುಸಿತ ಆದಲ್ಲಿ ಈ ಮಾರ್ಗದಲ್ಲಿ ಶನಿವಾರ ಹಗಲು ಅಥವಾ ರಾತ್ರಿ ಅವಧಿ ರೈಲು ಓಡಾಟಗಳಲ್ಲಿ ವ್ಯತ್ಯಯಗಳು ಉಂಟಾಗುವ ಸಾಧ್ಯತೆ ಇದೆ. ಸುಬ್ರಹ್ಮಣ್ಯ ರಸ್ತೆ ಮತ್ತು ಸಿರಿಬಾಗಿಲು ನಡುವಿನ 86 ನೇ ಕಿ.ಮೀ ನಲ್ಲಿ ಹಳಿಯ ಮೇಲೆ ಕಳೆದ ಮಳೆಗಾಲ ಆಗಸ್ಟ್ ನಲ್ಲಿ ಭಾರಿ ಭೂಕುಸಿತ ಸಂಭವಿಸಿತ್ತು. ಹಲವು ಕಡೆ ಭೂಕುಸಿತ ಸಂಭವಿಸಿ ಅನಾಹುತ ಸೃಷ್ಟಿಸಿತ್ತು. ಅಂದು ಭೂಕುಸಿತಗೊಂಡ ಸ್ಥಳದಲ್ಲಿ ಈ ಅಪಾಯಕಾರಿ ಬಂಡೆ ಇದೆ. ಈ ಸ್ಥಳದಲ್ಲಿ ಇನ್ನಷ್ಟು ಭೂಕುಸಿತ ನಡೆಯುವ ಸಾಧ್ಯ ತೆಗಳು ಕಂಡುಬಂದಿವೆ. ಶುಕ್ರವಾರ ರಾತ್ರಿ ರೈಲು ಓಡಾಟ ನಡೆಸಿದ ಬಳಿಕವಷ್ಟೆ ಬಂಡೆ ತೆರವು ಕಾಮಗಾರಿ ಕುರಿತು ರೈಲ್ವೆ ಅಧಿಕಾರಿಗಳು ನಿರ್ಧಾರಿಸಲಿದ್ದಾರೆ.
ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ತಾಂತ್ರಿಕ ಅಧಿಕಾರಿಗಳು ಈ ಭಾಗದಲ್ಲಿ ಮೊಕ್ಕಂ ಹೂಡಿ ಪರಿಶೀಲನೆ ನಡೆಸುತಿದ್ದಾರೆ.ಅತೀವ ಮಳೆ ಇರುವ ಕಾರಣ ಈ ಮಾರ್ಗದಲ್ಲಿ ರೈಲು ಯಾನದ ಕುರಿತು ತೀವ್ರ ನಿಗಾವಹಿಸಲಾಗಿದೆ.
ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳಿಗೆ ಸ್ಥಳೀಯ ಹವಾಮಾನದಿಂದ ಉಂಟಾಗುವ ನೈಜ…
ರೋಸ್ಟೆಡ್ ಅಡಿಕೆಯ ಆಮದು ನೀತಿಯನ್ನು 2025ರ ಏಪ್ರಿಲ್ನಲ್ಲಿ ಬದಲಾಯಿಸಲಾಗಿದ್ದು, ಕೆ.ಜಿಗೆ ₹351 ಅಥವಾ…
ತೆಂಗು ಬೆಳೆಯನ್ನು PMFBY ಅಥವಾ RWBCIS ಅಡಿಯಲ್ಲಿ ವಿಮಾ ವ್ಯಾಪ್ತಿಗೆ ತರುವ ಅಧಿಕಾರ…
ಕರಾವಳಿ ಜಿಲ್ಲೆಗಳಲ್ಲಿ ಮಳೆಯ ನಡುವೆ ಹೆಚ್ಚಿನ ಬಿಡುವಿನ ಅವಧಿಯೊಂದಿಗೆ ಬಿಸಿಲು–ಮೋಡದ ವಾತಾವರಣ ಮುಂದುವರಿಯಲಿದ್ದು,…
ಬಿ.ಎಸ್ಸಿ. ಕೃಷಿ ಪದವೀಧರರಿಗೆ ಸರ್ಕಾರಿ ಉದ್ಯೋಗ, ಖಾಸಗಿ ಕಂಪನಿಗಳು, ಬ್ಯಾಂಕಿಂಗ್, ಸಂಶೋಧನೆ ಮತ್ತು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆ…