Advertisement
Categories: MIRROR FOCUS

ಸುಳ್ಯದಲ್ಲಿ “ಮನೆಮನೆಯಲ್ಲಿ ಇಂಗುಗುಂಡಿ” ಆಂದೋಲನ

Share

ಸುಳ್ಯದಲ್ಲಿ ಇದೊಂದು ನೂತನ ಅಭಿಯಾನ. ಇದು ಪ್ರತಿಯೊಬ್ಬರೂ ಗಮನಿಸಿ ಮಾಡಲೇಬೇಕಾದ ಕಾರ್ಯ. ಇದು ಜಲಸಂರಕ್ಷಣೆಯ ಅಭಿಯಾನ. ನೀರು ಉಳಿದರೆ ಮಾತ್ರವೇ ಬದುಕು, ನಿರು ಉಳಿದರೆ ಮಾತ್ರವೇ ಕೃಷಿ. ನೀರು ಉಳಿದರೆ ಮಾತ್ರವೇ ಉಸಿರು. ಹೀಗಾಗಿ ಈಗ ಮಳೆಗಾಲದಲ್ಲಿ ಜಲಸಂರಕ್ಷಣೆಗೆ ಮನೆಮನೆಯಲ್ಲೂ ಇಂಗುಗುಂಡಿಯಾಗಬೇಕು ಎಂಬ ಉದ್ದೇಶದಿಂದ ಸುಳ್ಯದ ಸ್ನೇಹ ಶಾಲೆ ಅಭಿಯಾನ ಮಾಡುತ್ತಿದೆ. ಎಲ್ಲರ ಸಹಕಾರ ಇರಲಿ. ಸುಳ್ಯನ್ಯೂಸ್.ಕಾಂ ಸಹಕಾರ ನೀಡುತ್ತಿದೆ. ಅಭಿಯಾನದ ಜೊತೆ ಇರಲಿದೆ. ತಾಲೂಕಿನ ಎಲ್ಲಾ ಶಾಲೆಗಳಲ್ಲೂ ಈ ಅಭಿಯಾನ ನಡೆದು ಮಕ್ಕಳ ಮೂಲಕ ಮನೆಮನೆಗೆ ತಲುಪಲಿ. ಬನ್ನಿ ಕೈ ಜೋಡಿಸಿ….

Advertisement
Advertisement
Advertisement
Advertisement

ಸುಳ್ಯ: ಮನೆಮನೆಯಲ್ಲಿ  ಇಂಗುಗುಂಡಿ ರಚನೆಯಾಗಬೇಕು, ಈ ಮೂಲಕ ಜಲಸಂರಕ್ಷಣೆಯಾಗಬೇಕು. ಇದು ಅಭಿಯಾನ ಮುಂದೆ ಇದೊಂದು ಕ್ರಾಂತಿಯೇ ಆಗಬೇಕು, ದೇಶದಾದ್ಯಂತ ಜಲ ಸಂರಕ್ಷಣೆಯ ಬಗ್ಗೆ ಒಲವು ಹೆಚ್ಚಬೇಕು. ಇದು ಸ್ನೇಹ ಶಾಲೆಯ ಚಂದ್ರಶೇಖರ ದಾಮ್ಲೆ ಅವರ ಉದ್ದೇಶ.  ಈ ಹಿನ್ನೆಲೆಯಲ್ಲಿ  ಸುಳ್ಯ ತಾಲೂಕಿನ ಶಾಲೆಗಳಲ್ಲಿ  ಜಲಾಮೃತ ಯೋಜನೆಯ ಮೂಲಕ ಮನೆ ಮನೆಯಲ್ಲೂ ಇಂಗು ಗುಂಡಿ ರಚನೆ ಮಾಡಿದ ಅಭಿಯಾನ ಇಂದಿನಿಂದ ಆರಂಭವಾಗುತ್ತಿದೆ.

Advertisement

ಸುಳ್ಯದ ಸ್ನೇಹ ಶಾಲೆಯಲ್ಲಿ  ಈಗಾಗಲೇ ಇಂಗುಗುಂಡಿ ರಚನೆ ಮಾಡಿ ಯಶಸ್ಸು ಕಂಡಿದ್ದಾರೆ. ಇದಾದ ಬಳಿಕ ಮಕ್ಕಳ ಮೂಲಕ ಮನೆಮನೆಯಲ್ಲೂ ಇಂಗುಗುಂಡಿ ರಚನೆ ಮಾಡಿದ ಅದರ ಫೋಟೊ ಮಕ್ಕಳ ಮೂಲಕವೇ ತೆಗೆಸಿ ಶಾಲೆಯಲ್ಲಿ ಬಹುದೊಡ್ಡ ಬ್ಯಾನರ್ ಮೂಲಕ ಪ್ರದರ್ಶನ ಮಾಡಿದ್ದಾರೆ. ಇದೀಗ ಇಡೀ ತಾಲೂಕಿನಲ್ಲೀ ಜಲಸಂರಕ್ಷಣೆ ಮಕ್ಕಳ ಮೂಲಕ ಮನೆ ಮನೆಗೂ ತಲುಪಬೇಕು. ಕನಿಷ್ಟ ಒಂದು ಇಂಗುಗುಂಡಿ ಮಕ್ಕಳ ಮೂಲಕ ನಡೆದರೆ ತಾಲೂಕಿನಲ್ಲಿ ಸಂಗ್ರಹವಾಗುವ , ಭೂಮಿಗೆ ಸೇರುವ ನೀರು ಅಪಾರಪ್ರಮಾಣ. ಹೀಗಾಗಿ ಈ ಯೋಜನೆ ಇಂದಿನಿಂದ ಜಾರಿಯಾಗುತ್ತಿದೆ. ಈ ಯೋಜನೆಗೆ ಮುಂದೆ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದವರೆಗೂ ವಿಸ್ತಾರವಾಗಬೇಕು. ಸುಳ್ಯದಲ್ಲಿ ತೆಗೆದುಕೊಂಡ ಹೆಜ್ಜೆ ವಿಸ್ತಾರವಾಗಲಿ. ಬನ್ನಿ ಒಂದಾಗೋಣ. ಮುಂದೆ ಎಲ್ಲೆಲ್ಲಿ ಈ ಅಭಿಯಾನ ಇರುತ್ತದೆ ಎಂಬುದನ್ನೂ ತಿಳಿಸುತ್ತೇವೆ.

ಇಂದು ಸುಳ್ಯದ ಗಾಂಧಿನಗರ ಪ್ರೌಢಶಾಲೆಯಲ್ಲಿ  ಸಂಜೆ 3 ಗಂಟೆಗೆ ಈ ಅಭಿಯಾನ ಆರಂಭವಾಗಲಿದೆ. ಬನ್ನಿ ಜೊತೆಯಾಗೋಣ

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

5 hours ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

2 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

3 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

3 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

3 days ago