ಸುಳ್ಯದಲ್ಲಿ ಮಾದರಿಯಾಯ್ತು ಪರಿಸರ “ಸ್ನೇಹ” ಶಾಲೆ : ಜಲಸಂರಕ್ಷಣೆಯ ಪ್ರಾಯೋಗಿಕ ಪಾಠದಲ್ಲಿ ಸ್ನೇಹ ಶಾಲೆ

June 22, 2019
8:00 AM

ಸುಳ್ಯ: ಮಗುವಿಗೊಂದು ಗಿಡ ಎಂಬ ಮಾತು ಹಿಂದೆ ಇದ್ದರೆ ಈ ವರ್ಷ ಮಗುವಿಗೊಂದು ಇಂಗುಗುಂಡಿ ಎಂದೂ ಸೇರಿಸಲೇಬೇಕಾದ ಅನಿವಾರ್ಯತೆ ಇದೆ. ಕಾರಣ ಏಕೆಂದು ಹೇಳಬೇಕಾಗಿಲ್ಲ, ಅಷ್ಟೊಂದು ಜಲ ತತ್ತ್ವಾರ ಈ ಬಾರಿ ಕಂಡಿದೆ. ಹಾಗಿದ್ದರೆ ನಾವೇನು ಮಾಡಬಹುದು  ಎಂಬುದಕ್ಕೆ ಮಾದರಿಯಾಗಿ ನಿಂತಿದೆ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ.

Advertisement
Advertisement

ಹಲವು ವೈಶಿಷ್ಠ್ಯಗಳಿಂದ ಕೂಡಿದ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ ಈ ಬಾರಿ ಜಲಸಂರಕ್ಷಣೆಯ ಕಾರ್ಯದಲ್ಲಿ  ಸುಳ್ಯ ತಾಲೂಕಿಗೆ  ಮಾತ್ರವಲ್ಲ ಜಿಲ್ಲೆಗೆ, ರಾಜ್ಯಕ್ಕೆ ಮಾದರಿಯಾಗಿದೆ. ಸುಳ್ಯ ತಾಲೂಕಿನಂತಹ ಪ್ರದೇಶದಲ್ಲೂ  ವಿಪರೀತವಾಗಿ ಈ ಬಾರಿ ಬರದ ಛಾಯೆ ಕಂಡಿದೆ. ಎಲ್ಲಾ ಕಡೆ ಎಲ್ಲರೂ ಬರ ಬರ ಎಂದು ಕೂಗಾಡಿದರು. ಪರಿಹಾರ ಏನು ಎಂಬುದರ ಕಡೆಗೆ ಕೆಲವು ಮಂದಿ ಯೋಚನೆ ಮಾಡಿದರು. ಮಂಗಳೂರಿನ ಸರಕಾರಿ ಶಾಲೆಯೊಂದರಲ್ಲಿ ಜಲಜಾಗೃತಿಗೆ ಮುಂದಾದರೆ ಪಡ್ರೆಯಂತಹ ಪ್ರದೇಶದಲ್ಲಿ  ಜಲಸಂರಕ್ಷಣೆಗೆ ಹೊಳೆಯಲ್ಲಿ  ನಡೆದು ಭವಿಷ್ಯದ ಬಗ್ಗೆ  ಚಿಂತೆ ಮಾಡದೆ, ಚಿಂತನೆ ಮಾಡಿದರು. ಮುಂದಿನ 3 ವರ್ಷದಲ್ಲಿ  ಸಮೃದ್ಧ ಜಲ ಪಡೆಯುವ ಭರವಸೆಯನ್ನು  ವ್ಯಕ್ತಪಡಿಸಿದರು. ಇದೀಗ ಅದೇ ಮಾದರಿಯಲ್ಲಿ  ಮತ್ತೊಂದು ಹೆಜ್ಜೆಯನ್ನು  ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ ಮಾಡಿದೆ. ಇದು ಪ್ರಾಯೋಗಿಕ ಪಾಠ. ಪುಸ್ತಕದಲ್ಲಿ ಜಲಸಂರಕ್ಷಣೆಯ ಬಗ್ಗೆ ಓದುವುದರ ಬದಲಾಗಿ ಸ್ವತ: ಇಂಗುಗುಂಡಿ ಮಾಡಿ ಪಾಠ ಕಲಿಯುವ ಜೀವನ ಪಾಠ ಇದು. ಇಲ್ಲಿ ಶಾಲೆಯ ಪ್ರತೀ ಮಗುವೂ ಮನೆಯಲ್ಲಿ ಕನಿಷ್ಠ ಒಂದು ಇಂಗು ಗುಂಡಿ ಮಾಡಿ ಜಲಸಂರಕ್ಷಣೆಗೆ ಹೆಜ್ಜೆ ಇರಿಸಿದ್ದಾರೆ. ಜಲದ ವಿಚಾರವು ಇಂದು  ಆಂದೋಲನವಲ್ಲ , ಕ್ರಾಂತಿಯಾಗಬೇಕು ಎಂಬುದು  ಸ್ನೇಹ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಅಕ್ಷರ ದಾಮ್ಲೆ ಹೇಳುತ್ತಾರೆ.

Advertisement

 

Advertisement

 

ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯದಲ್ಲಿ ಪ್ರಾರಂಭವಾಗುವ ಹೊತ್ತಿಗೆ ನೀರಿನ ಕೊರತೆ ವಿಪರೀತವಾಗಿ ಕಾಡುತ್ತಿತ್ತು. ಹಾಗಿದ್ದರೆ ಮುಂದೇನು ಎಂಬ ಯೋಚನೆ ಶಾಲೆಯ ಸಂಚಾಲಕ ಚಂದ್ರಶೇಖರ ದಾಮ್ಲೆ ಹಾಗೂ ಜಯಲಕ್ಷ್ಮಿ ದಾಮ್ಲೆ ಅವರನ್ನು ಕಾಡಿತ್ತು. ಆದರೆ ಜಲದ ಬಗ್ಗೆ ಹೆಚ್ಚು ಅರಿವು ಹಾಗೂ ಕಾಳಜಿ ಹೊಂದಿದ್ದ ಅವರು ಮೊದಲು ಮಾಡಿದ್ದು ಇಂಗುಗುಂಡಿ. ಶಾಲೆಯ ಆವರಣದ ಸುತ್ತ ಇಂಗುಗುಂಡಿ ತೋಡಿದರು. ಇದರ ಪರಿಣಾಮವಾಗಿ ಎರಡು ವರ್ಷದಲ್ಲಿ  ಶಾಲೆಯ ಬಾವಿಯಲ್ಲಿ ನೀರಿನ ಮಟ್ಟ ಏರಿಕೆ ಕಂಡಿತು. ಅಂದಿನಿಂದ ಅಂದಿನವರೆಗೆ ಬಾವಿಯಲ್ಲಿ  ನೀರು ಬತ್ತಿಲ್ಲ, ಶಾಲೆಯ ಚಟುವಟಿಕೆಗೆ ನೀರು ಕಡಿಮೆಯಾಗಿಲ್ಲ ಇಂದು ಚಂದ್ರಶೇಖರ ದಾಮ್ಲೆ ವಿಶ್ವಾಸದಿಂದ ಹೇಳುತ್ತಾರೆ.

Advertisement

 

ಈ ಬಾರಿ ಜಲ ಕ್ಷಾಮ ತೋರುತ್ತಿದ್ದಾಗ ಚಂದ್ರಶೇಖರ ದಾಮ್ಲೆ ಅವರಿಗೆ ಶಾಲೆಯ ಯಶೋಗಾಥೆ ಕಣ್ಣಮುಂದೆ ಬಂತು. ತಕ್ಷಣವೇ ಈ ವಿಚಾರವನ್ನು  ಹಂಚಿಕೊಂಡರು. ಇದಕ್ಕೆ ಪೂರಕವಾಗಿ ಅವರ ಪುತ್ರ ಅಕ್ಷರ ದಾಮ್ಲೆ ಅವರು ಕೂಡಾ ಜಲ ಸಂರಕ್ಷಣೆಗೆ ಶಾಲೆಯ ಮಕ್ಕಳ ಮನೆಯಲ್ಲಿ  ಕನಿಷ್ಠ ಒಂದು ಇಂಗುಗುಂಡಿ ರಚನ ಮಾಡಿಸಬೇಕು ಎಂಬ ಯೋಚನೆಯಲ್ಲಿದ್ದರು. ಹೀಗಾಗಿ ತಡ ಮಾಡದೆ ಶಾಲೆ ಆರಂಭವಾದ ತಕ್ಷಣವೇ ಮಕ್ಕಳಿಗೆ ಇಂಗುಗುಂಡಿ ಬಗ್ಗೆ ಮಾಹಿತಿ ನೀಡಿ ಮನೆಯಲ್ಲಿ  ಇಂಗುಗುಂಡಿ ರಚನೆ ಮಾಡಿ ಫೋಟೊ ಕಳಿಸಲು ಹೇಳಿದರು.  ಕೆಲವೇ ದಿನದಲ್ಲಿ  ಶಾಲೆಯ ಮಕ್ಕಳು ಇಂಗುಗುಂಡಿ ಮಾಡಿ ಫೋಟೊ ಕಳಿಸಿದರು. ಈಗ ಮಳೆ ಶುರುವಾಯಿತು. ನೀರು ಗುಂಡಿಯಲ್ಲಿ  ನಿಲ್ಲ ತೊಡಗಿದೆ. ಓಡುವ ನೀರು ನಿಂತಿದೆ. ನಿಂತ ನೀರು ಇಂಗುತ್ತಿದೆ. ಭವಿಷ್ಯದಲ್ಲಿ  ಲೀಟರ್ ಗಟ್ಟಲೆ ನೀರು ಭೂಮಿ ಸೇರಿ ನಮಗೂ ಲಭ್ಯವಾಗುತ್ತಿದೆ.

Advertisement

 

Advertisement

 

ಶಾಲೆಯ ವಿದ್ಯಾರ್ಥಿ ಜಯದೀಪ್ ಹೇಳುತ್ತಾನೆ, ಶಾಲೆಯಿಂದ ಈ ಸೂಚನೆ ಬಂದಾಗ ಖುಷಿಯಿಂದ ಇಂಗುಗುಂಡಿ ಮಾಡಿದ್ದೇನೆ. ಈಗ ನೀರು ನಿಲ್ಲುವಾಗ ಖುಷಿಯಾಗುತ್ತದೆ. ಬರುವ ವರ್ಷ ಇನ್ನೊಂದು ಇಂಗುಗುಂಡಿ ಮಾಡುತ್ತೇನೆ ಎನ್ನುತ್ತಾರೆ.

Advertisement

ಇನ್ನೊಬ್ಬ ವಿದ್ಯಾರ್ಥಿನಿ ಧೃತಿ ಹೇಳುತ್ತಾಳೆ,” ನಮಗೆ ಇಂಗುಗುಂಡಿ ಬಗ್ಗೆ ಗೊತ್ತಿರಲಿಲ್ಲ. ಈಗ ಇದರಲ್ಲಿ  ನೀರು ನಿಲ್ಲುವಾಗ ಖುಷಿಯಾಗುತ್ತದೆ ಎನ್ನುತ್ತಾರೆ.

 

Advertisement

 

Advertisement

 

ಇಂಗುಗುಂಡಿ ಬಗ್ಗೆ ಯೋಚನೆ ಮಾಡಿದ ಚಂದ್ರಶೇಖರ ದಾಮ್ಲೆ ಹಾಗೂ ಅಕ್ಷರ ದಾಮ್ಲೆ ಹೇಳುತ್ತಾರೆ, “ಜಲಸಂರಕ್ಷಣೆಗೆ ಮೊದಲ ಆದ್ಯತೆ ಇಂದು ಬೇಕಾಗಿದೆ. ಸರಕಾರ ಯೋಜನೆ ಮಾಡುವುದಕ್ಕಿಂತ ಪ್ರತಿಯೊಬ್ಬ ವ್ಯಕ್ತಿಗೂ ಜಾಗೃತಿಯಾಗಬೇಕಿದೆ. ಇದಕ್ಕಾಗಿ ಶಾಲೆಗಳಲ್ಲಿಯೇ ಮೊದಲ ಹೆಜ್ಜೆ ಇರಬೇಕು ಎಂಬುದು ನಮ್ಮ ಅಪೇಕ್ಷೆ” ಎನ್ನುತ್ತಾರೆ.

Advertisement

 

ಈ ಕೆಲಸ ಸುಳ್ಯ ತಾಲೂಕಿನ ಮಾತ್ರವಲ್ಲ ಜಿಲ್ಲೆಯ ಪ್ರತೀ ಶಾಲೆಗಳಲ್ಲಿ  ಒಂದು ಮಗು ಕನಿಷ್ಠ  ಒಂದು ಇಂಗುಗುಂಡಿ ರಚನೆ ಮಾಡುವ ಪ್ರೋತ್ಸಾಹ, ಶಾಲೆಯು ಮುತುವರ್ಜಿ ವಹಿಸುವಂತಾಗಬೇಕಿದೆ. ಜಲಸಂರಕ್ಷಣೆಗೆ ಸದ್ಯ ನಾವು ಮಾಡಬಹುದುದಾದ ಇಂದಿನ ಸಣ್ಣ ಪ್ರಯತ್ನ ಇದು.

Advertisement

 

 

Advertisement

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ : ಗೋ ಸಂತತಿಯ ಉಳಿವು ಅಂದರೆ ಧರ್ಮದ ಉಳಿವು
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ
ಬರಗಾಲದ ಪರಿಣಾಮ | ತರಕಾರಿ ಬೆಲೆ ಏರಿಕೆಯ ಬಿಸಿ | ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ…. ಎಲ್ಲವೂ ದರ ಏರಿಕೆ |.
April 25, 2024
2:39 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror