Advertisement

ಸುಳ್ಯದಲ್ಲಿ ಲಂಚಾವತಾರ: ಭ್ರಷ್ಟಾಚಾರ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲು ಆಮ್ ಆದ್ಮಿ ಪಕ್ಷ ಒತ್ತಾಯ

Share

ಸುಳ್ಯ: ಭ್ರಷ್ಟಾಚಾರ ಸುಳ್ಯದ ಬಹುತೇಕ ಇಲಾಖೆಗಳಲ್ಲಿ ತಾಂಡವವಾಡುತ್ತಿದೆ ಎಂಬ ವಿಚಾರ ಜನಸಾಮಾನ್ಯರಿಗೆ ನಿತ್ಯಜೀವನದಲ್ಲಿ ಅನುಭವಕ್ಕೆ ಬರುತ್ತಿದೆಯಾದರೂ ಬಹುತೇಕ ಜನತೆಗೆ ಆಡಳಿತ ವ್ಯವಸ್ಥೆ ಶುದ್ದೀಕರಣ ಯಾವ ರೀತಿ ಮಾಡಬೇಕೆಂದೆ ತಿಳಿಯದಾಗಿದೆ. ಆಯ್ಕೆಯಾದ ಜನಪ್ರತಿನಿಧಿ ಭ್ರಷ್ಟಾಚಾರ ಮಾಡದೇ ಇದ್ದರೆ ಸಾಲದು, ಭ್ರಷ್ಟಾಚಾರ ವಿರುದ್ದ ಧ್ವನಿ ಎತ್ತಬೇಕಿದೆ. ಸುಳ್ಯದಲ್ಲಿ ಈಗ ಕಂಡುಬಂದ ಭ್ರಷ್ಟಾಚಾರ ವಿರುದ್ಧ ಸೂಕ್ತ ಕ್ರಮವಾಗಬೇಕು. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.

 

ಇಂದು ಅತ್ಯಂತ ಹೆಚ್ಚು ಭ್ರಷ್ಟಾಚಾರ ನಡೆತುತ್ತಿರುವು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಗಿದ್ದು ಮಲೆನಾಡಿನ 17 ತಾಲೂಕಿನ ದೊಡ್ಡ ಮಟ್ಟಿನ ಕೃಷಿ ಭೂಮಿ ಪರಬಾರೆ ಇತ್ಯಾದಿ ಕೃಷಿಯೇತರರಿಗೆ ನಕಲಿ ದಾಖಲೆಗಳ ಮೂಲಕ ನಡೆಯುತ್ತಿದ್ದು ಕಳೆದ 15 ವರ್ಷಗಳ ಪರಬಾರೆ ದಾಖಲೆಗಳನ್ನು ತನಿಖೆ ಒಳಪಡಿಸಬೇಕು, ಪರಿಸರ ಹಾಗೂ ಕೃಷಿ ನಾಶ ತಡೆಯಬೇಕು ಎಂಬುದಾಗಿ ಕಂದಾಯ ಸಚಿವರನ್ನು ಆಮ್ ಆದ್ಮಿ ಪಾರ್ಟಿ ಆಗ್ರಹಿಸುತ್ತದೆ ಎಂದು ಎಎಪಿ ಮುಖಂಡ ಅಶೋಕ್ ಎಮಡಲೆ ತಿಳಿಸಿದ್ದಾರೆ.

 

ಇದೀಗ ಸುಳ್ಯದ ಸಬ್ ರಿಜಿಸ್ಟ್ರಾರ್ ಭ್ರಷ್ಟಾಚಾರ ಬಗ್ಗೆ ಜನಸಾಮಾನ್ಯರು ನೊಂದು ವೀಡಿಯೋ ವರದಿ ಮಾಡುವ ಮೂಲಕ ತಮ್ಮ ಕೊನೆಯ ಆಕ್ರೋಶದ ಅಸ್ತ್ರ ಪ್ರಯೋಗ ಮಾಡಿದ್ದಾರೆ ‌ಇದರ ಬಗ್ಗೆಯೂ ಕೂಲಕುಂಶ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿ ಪಡಿಸಬೇಕು, ಮಾತ್ರವಲ್ಲ ಭ್ರಷ್ಟಾಚಾರ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಅವರನ್ನು ಆಮ್ ಆದ್ಮಿ ಪಾರ್ಟಿ ಆಗ್ರಹಿಸುತ್ತದೆ.

ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿರೋಧ ಪಕ್ಷದ ಬಿಜೆಪಿ ಕಾರ್ಯಕರ್ತರೇ ಮದ್ಯವರ್ತಿಗಳಾಗಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಇಲ್ಲದಾಗಿದೆ. ಸುಳ್ಯದಲ್ಲಿ ಭ್ರಷ್ಟಾಚಾರ ವಿರುದ್ದ ಬಿಜೆಪಿಯನ್ನು ಜನತೆ ಕಳೆದ 25 ವರ್ಷದಿಂದ ಎಲ್ಲಾ ಸ್ತರದಲ್ಲಿ ಆಯ್ಕೆ ಮಾಡಿದ್ದರೂ , ಬಿಜೆಪಿಯೂ ಒಂದು ವಿಶಿಷ್ಟ ಧಾರ್ಮಿಕ ಸಿದ್ದಾಂತದ ವಿಚಾರಕ್ಕೆ ಸೀಮಿತವಾದ ಪಕ್ಷವಾಗಿ, ಆಡಳಿತದಲ್ಲಿ ನಡೆಯುವ,  ಯಾವುದೇ ಭ್ರಷ್ಟಾಚಾರ ವಿಷಯದಲ್ಲಿ ಈ ತನಕ‌ ಹೋರಾಟವಾಗಲಿ , ತನಿಖೆಗೆ ದೂರು ನೀಡಿದ ಕುರುಹು ಕಂಡು ಬರುವುದಿಲ್ಲ. ರಾಜ್ಯ ಆಡಳಿತ ಕಾಂಗ್ರೆಸ್ ಸ್ಥಳೀಯವಾಗಿ ನಿಷ್ಕ್ರಿಯವಾಗಿ ಕೇವಲ ಬ್ರೋಕರ್ ಕೆಲಸದಲ್ಲಿ ನಿರತವಾಗಿದೆ  ಎಂದು ಆರೋಪಿಸಿದೆ.

ಜನಸಾಮಾನ್ಯರು, ರೈತರು ಶ್ರಮಿಕರು ಭ್ರಷ್ಟಾಚಾರ ವಿರುದ್ದ ಒಂದಾಗಿ ವಿರೋಧಿಸಬೇಕು ಭ್ರಷ್ಟಾಚಾರ ವಿರೋಧಿ ಆಮ್ ಆದ್ಮಿ ಪಾರ್ಟಿ ಆಂದೋಲನದಲ್ಲಿ ಕೈಜೋಡಿಸಬೇಕೆಂದು ಎಂದು ಆಮ್ ಆದ್ಮಿ ಮನವಿ ಮಾಡಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?

“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…

1 hour ago

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!

ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…

13 hours ago

ಹಸು ಕರು ಹಾಕಿದ ಬಳಿಕದ “ಪ್ಲಾಸೆಂಟಾ” ದಿಂದ ತಯಾರಿಸಬಹುದೇ ನೈಸರ್ಗಿಕ ದ್ರಾವಣ?

ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…

14 hours ago

ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?

ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…

21 hours ago

ಹೆಬ್ರಿಯ ಗೋಡಂಬಿ ತ್ಯಾಜ್ಯದಿಂದ ಹಡಗುಗಳಿಗೆ ಇಂಧನ..!

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…

1 day ago

ಮಡಿಕೇರಿಯಲ್ಲಿ ಅಡಿಕೆ ಹಾಳೆ ತಟ್ಟೆಗೂ ನಿಷೇಧ..!

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…

1 day ago