ಸುಳ್ಯದಲ್ಲಿ ಶುರುವಾಗಿದೆ “ಸಂಚಾರಿ ಯೋಗ “, ಮನೆಮನೆಗೂ ಬರಲಿದ್ದಾರೆ ಯೋಗ ಗುರುಗಳು….!

May 27, 2019
8:00 AM

ಸುಳ್ಯ: ಸುಳ್ಯದಲ್ಲಿ  ಇದೀಗ “ಸಂಚಾರಿ ಯೋಗ” ಎಂಬ ವಿಶೇಷ ಅಭಿಯಾನ ಶುರುವಾಗಿದೆ. ಪ್ರತೀ ಗ್ರಾಮ, ಹಳ್ಳಿ, ವಾರ್ಡ್ ಗಳಿಗೆ ಯೋಗ ಗುರುಗಳು ಆಗಮಿಸಿ ಯೋಗದ ಬಗ್ಗೆ ತರಬೇತಿ ನೀಡಿಲಿದ್ದಾರೆ. ಇದರ ಆರಂಭ ಉಬರಡ್ಕದಲ್ಲಿ  ನಡೆದಿದೆ. 15 ದಿನಗಳ ಕಾಲ ಇಲ್ಲಿ ಯೋಗ ಶಿಬಿರ ನಡೆಯಲಿದೆ. ಈ ಶಿಬಿರ  ಯೋಗಗುರು ಸಂತೋಷ್ ಮುಂಡಕಜೆ ನೇತೃತ್ವದಲ್ಲಿ ನಡೆಯುತ್ತಿದೆ.

ಯೋಗವೆಂಬುದು ಈಗ ಎಲ್ಲರ ಸೊತ್ತು. ಹಿಂದೆಲ್ಲಾ ಯೋಗ ಎಂದರೇನು ಎಂಬುದನ್ನು ಸಾಕಷ್ಟು ಬಾರಿ ವಿವರವಾಗಿ ಹೇಳಿದರೂ ಯೋಗದ ಬಗ್ಗೆ ಅನಾದಾರ ಇತ್ತು. ಭಾರತೀಯ ಪರಂಪರೆ ಇದಕ್ಕಿದ್ದರೂ ಯೋಗದ ಮಹತ್ವ ತಿಳಿದಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ ಯಾವಾಗ ಯೋಗವು ವಿಶ್ವದ ಮಟ್ಟಕ್ಕೆ ತಲಪಿತೋ ಅಂದಿನಿಂದಲೇ ಯೋಗವು ಎಲ್ಲರ ಸೊತ್ತಾಯಿತು. ಪ್ರತಿಯೊಬ್ಬರೂ ಯೋಗ ಮಾಡುವುದಕ್ಕೆ ಆರಂಭ ಮಾಡಿದರು. ಹೀಗಾಗಿ ವಿಶ್ವಯೋಗದಿನ ಮಾತ್ರವಲ್ಲ ಯೋಗ ಕೇಂದ್ರಗಳು ತೆರೆದವು, ಪ್ರತೀ ಹಳ್ಳಿಗೂ ಯೋಗದ ಬಗ್ಗೆ ಅರಿವು ಮೂಡಿತು.

 

 

ವಿಶ್ವ  ಯೋಗದ ಕಲ್ಪನೆ ಹೀಗಿತ್ತು,  ಭಾರತೀಯ ಪರಂಪರೆಯಲ್ಲಿ  ಯೋಗಕ್ಕೆ ಮಹತ್ವದ ಸ್ಥಾನವಿತ್ತು. ಋಷಿಮುನಿಗಳು ಯೋಗದ ಮೂಲಕವೇ ದೇಹವನ್ನು, ಮನಸ್ಸನ್ನು ನಿಯಂತ್ರಣ ಮಾಡುತ್ತಿದ್ದರು. ರೋಗ ಮುಕ್ತ ಬದುಕು ಸಾಗಿಸುತ್ತಿದ್ದರು. ಆದರೆ ಕಾಲಕ್ರಮೇಣ ಯೋಗ ಮರೆಯಾಯಿತು. ದೇಶದಲ್ಲಿ  ರೋಗಿಗಳ ಸಂಖ್ಯೆ ಹೆಚ್ಚಾಗತೊಡಗಿತು. ಇದಕ್ಕೆ ಆಹಾರ, ವಿಹಾರ, ಮನಸ್ಸೂ ಕಾರಣವಾಯಿತು. ಸಮೀಕ್ಷೆಯೊಂದರ ಪ್ರಕಾರ ಈ ದೇಶದಲ್ಲಿ ಶೇ.30 ರಷ್ಟು ಯುವಕರ ಸಹಿತ 50 ವರ್ಷದ ಕೆಳಗಿನ ಮಂದಿ ವಿವಿಧ ಗಂಭೀರವಲ್ಲದ  ಕಾಯಿಲೆಯಿಂದ ಬಳಲುತ್ತಿದ್ದರು. ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣ ಹೆಚ್ಚುತ್ತಲೇ ಹೋಗುತ್ತಿದೆ. ಹೀಗಾದರೆ ದೇಶದ ಮಾನವ ಸಂಪನ್ಮೂಲದ ಸದ್ಭಳಕೆ ಕಷ್ಟವಾಗುತ್ತಿದೆ. ಇದೇ ರೀತಿಯಲ್ಲಿ ಸಾಗಿದರೆ ಮುಂದಿನ 25 ವರ್ಷಗಳಲ್ಲಿ  ಯುವಕರೇ ರೋಗದಿಂದ ಬಳಲುತ್ತಾರೆ,. ಹೀಗಾದರೆ ಮಾನವ ಸಂಪನ್ಮೂಲದ ಕೊರತೆ ಹೆಚ್ಚುತ್ತದೆ. ಹೀಗಾಗಿ ಇಂತಹ ರೋಗಗಳ ನಿವಾರಣೆ ಹಾಗೂ ಗಂಭೀರವಲ್ಲದ ಕಾಯಿಲೆಗೆ ಸೂಕ್ತ ಚಿಕಿತ್ಸೆ ಯೋಗ. ಇದರ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ ಯೋಗವನ್ನು ವಿಶ್ವಮಟ್ಟಕ್ಕೆ ವಿಸ್ತರಿಸಿದರು. ಇದು ಭಾರತದಲ್ಲೂ ಮತ್ತೆ ಯೋಗ ಜೀವಪಡೆಯುವುದಕ್ಕೆ ಸಾಧ್ಯವಾಯಿತು. ಹೀಗಾಗಿ ಈಗ ಭಾರತದ ಹಳ್ಳಿ ಹಳ್ಳಿಗಳಲ್ಲೂ ಯೋಗ ಶಿಬಿರ ನಡೆಯುತ್ತಿದೆ. ಇದೀಗ ಅದರ ಭಾಗವಾಗಿ “ಸಂಚಾರಿ ಯೋಗ ಆರಂಭವಾಗುತ್ತಿದೆ ಸುಳ್ಯದಲ್ಲಿ.

 

 

ಏನಿದು  ಸಂಚಾರಿ ಯೋಗ ತರಬೇತಿ:

ಯೋಗಾಭ್ಯಾಸ ಸಪ್ತ ಸಾಗರಗಳ ಸಂಗಮ. ಭಾರತೀಯ ಪರಂಪರೆಯಯ ಪ್ರತೀಕ. ಸೃಷ್ಠಿಯನ್ನು ಬಿಟ್ಟು  ಯೋಗವಿಲ್ಲ. ಯೋಗವು ತ್ಯಾಗದ ಮೂಲಾಧಾರ . ಯೋಗದ ಮೂಲಕ ಗುರಿ, ಮಾನಸಿಕ ಸ್ಥಿರತೆ, ಶಾರೀರಿಕ ಶುದ್ಧತೆ ಸಾದ್ಯವಿದೆ. ಯೋಗದ ಬೆಳಕು ಪ್ರತಿಯೊಬ್ಬರ ಹೃದಯಲ್ಲಿ ಬೆಳೆಯಬೇಕು. ಹೀಗಾಗಿ 15 ದಿನಗಳ ಯೋಗ ತರಬೇತಿ ಯೋಗ ಗುರು ಸಂತೋಷ್ ಮುಂಡಕಜೆ ನೇತೃತ್ವದಲ್ಲಿ  ತಾಲೂಕಿನ ವಿವಿಧ ಕಡೆ ನಡೆಯಲಿದೆ. ಶಿಬಿರ ಉಚಿತವಾಗಿರುತ್ತದೆ. ಶಿಬಿರಾರ್ಥಿಗಳು ಆಯಾ ಗ್ರಾಮದವರು ಇರುತ್ತಾರೆ. ಸೇವಾ ರೂಪದಲ್ಲಿ ಯೋಗ ತರಬೇತಿ ನೀಡುವ ಇವರ ಕಾಳಜಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ಶಿಬಿರ ಬೆಳಗ್ಗೆ 6 ರಿಂದ 7 ಗಂಟೆಯವರೆಗೆ 15 ದಿನಗಳ ಕಾಲ ನಿರಂತರವಾಗಿ ನಡೆಯುತ್ತದೆ. ಇದೀಗ ಮೊದಲ ಶಿಬಿರ ಉಬರಡ್ಕದಲ್ಲಿ ಆರಂಭಗೊಂಡಿದೆ. ಮೊದಲ ದಿನ  ಹಾಗೂ ಜನರಿಗೆ ಅರಿವಿನ ಕೊರತೆಯಿಂದ ಕೊಂಚ ಕಡಿಮೆ ಪ್ರತಿಕ್ರಿಯೆ ಬಂದಿದೆ , ಆದರೆ ಇದು ನಿರಂತರ ಶಿಬಿರವಾಗಿರುತ್ತದೆ. ಉತ್ಸಾಹ ಕುಂದದೆ ಈ ಸೇವೆ ಮಾಡಲು ಸಾರ್ವಜನಿಕರೂ ಸಹಕರಿಸಬೇಕು ಎಂಬುದು ಆಶಯ.

 

ಉಬರಡ್ಕದಲ್ಲಿ ನಡೆದ ಶಿಬಿರವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಶ್ರೀನಿವಾಸ ಉಬರಡ್ಕ ಉದ್ಘಾಟಿಸಿದರು. ಅತಿಥಿಗಳಾಗಿ  ಉಬರಡ್ಕ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ ಇದ್ದರು.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ
July 25, 2026
6:46 AM
by: ದ ರೂರಲ್ ಮಿರರ್.ಕಾಂ
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
July 24, 2026
9:47 PM
by: ದ ರೂರಲ್ ಮಿರರ್.ಕಾಂ
ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ
July 24, 2026
5:01 PM
by: ದ ರೂರಲ್ ಮಿರರ್.ಕಾಂ
18 ಕರಿಮೆಣಸು ತಳಿಗಳ ನರ್ಸರಿ ನಿರ್ಮಿಸಿ ಯಶಸ್ಸು ಕಂಡ ಯುವ ರೈತ
July 24, 2026
6:22 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror