ಸುಳ್ಯದ ಅನ್ನದಾತ ಸುಂದರ ಸರಳಾಯ ಇನ್ನಿಲ್ಲ

June 27, 2020
9:16 PM

ಸುಳ್ಯ: ಸುಳ್ಯದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಸುಂದರ ಸರಳಾಯ (81) ಶನಿವಾರ ನಿಧನರಾದರು. ವಯೋಸಹಜ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದ ಅವರು ಸುಳ್ಯದ ಖಾಸಗೀ ಆಸ್ಪತ್ರೆಯಲ್ಲಿ ನಿಧನರಾದರು.

Advertisement
Advertisement

ಸುಳ್ಯದ ಇವರ `ರಾಮ್‍ಪ್ರಸಾದ್’ ಹೋಟೆಲ್‍ನಲ್ಲಿ ಅತ್ಯಂತ ಕಡಿಮೆ ದರದಲ್ಲಿ ಊಟ ನೀಡುವ ಮೂಲಕ ಸುಂದರ ಸರಳಾಯರು ಸುಳ್ಯದ ಅನ್ನದಾತರು ಎಂದೇ ಪ್ರಸಿದ್ಧರಾಗಿದ್ದರು. ಐದು ದಶಕಗಳಿಂದಲೂ ಹೆಚ್ಚು ಸಮಯ ಹೋಟೆಲ್ ಉದ್ಯಮ ನಡೆಸುತ್ತಿರುವ ಇವರು ತನ್ನ ಹೋಟೆಲ್‍ನಲ್ಲಿ ಈಗಲೂ 10 ರೂಗೆ ಸ್ವಾದಿಷ್ಟವಾದ ಊಟ ಬಡಿಸುತ್ತಿದ್ದರು. ಇಂದಿರಾ ಕ್ಯಾಂಟೀನ್, ಅಮ್ಮಾ ಕ್ಯಾಂಟೀನ್‍ಗಳ ಕಲ್ಪನೆ ಹುಟ್ಟುವುದಕ್ಕಿಂದ ಹಲವು ದಶಕಗಳ ಮೊದಲೇ ಸರಳಾಯರು ಸುಳ್ಯದಲ್ಲಿ ಅತೀ ಕಡಿಮೆ ದರದಲ್ಲಿ ಊಟ, ತಿಂಡಿ ನೀಡುತ್ತಾ ಬಂದಿದ್ದರು. ಕಳೆದ ಐದು ದಶಕಗಳಿಂದಲೂ 1 ರೂ, 2ರೂ, 3ರೂ, 4ರೂ ಬಳಿಕ 5 ರೂಗೆ ಊಟ ಬಡಿಸುತ್ತಿದ್ದ ಇವರ ಹೋಟೆಲ್‍ನಲ್ಲಿ ಊಟದ ದರ 10 ರೂಗಿಂತ ಮೇಲೆ ಏರಲೇ ಇಲ್ಲ. ಉಳಿದ ಹೋಟೆಲ್‍ಗಳಲ್ಲಿ ಊಟಕ್ಕೆ 40 ರೂ ದರ ಇರುವಾಗ ಇವರು ನೂರಾರು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ 10 ರೂಗೆ ಹೊಟ್ಟೆ ತುಂಬಾ ಊಟ ನೀಡಿ ಅನ್ನದಾತರು ಎನಿಸಿಕೊಂಡಿದ್ದರು. ತನ್ನ ಅನ್ನ ಸೇವೆಯಿಂದ ಹಲವಾರು ಸನ್ಮಾನ, ಪುರಸ್ಕಾರಗಳಿಗೆ ಭಾಜನರಾಗಿದ್ದರು. ಇವರು ಪತ್ನಿ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Advertisement

ಶಾಸಕ ಎಸ್.ಅಂಗಾರ ಸೇರಿದಂತೆ ಹಲವರು  ಅಂತಿಮ ದರ್ಶನ ಪಡೆದರು.

 

Advertisement

 

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೈಸೂರು – ಚಾಮರಾಜನಗರ ಭಾಗದ ಪ್ರಭಾವಿ ನಾಯಕ | ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ
April 29, 2024
12:14 PM
by: The Rural Mirror ಸುದ್ದಿಜಾಲ
ಹಿರಿಯ ನಟ ದ್ವಾರಕೀಶ್ ನಿಧನ | ಕಂಬನಿ ಮಿಡಿದ ಚಿತ್ರರಂಗ ಹಾಗೂ ನಾಡಿನ ಗಣ್ಯರು
April 16, 2024
12:54 PM
by: The Rural Mirror ಸುದ್ದಿಜಾಲ
ಕುದುರೆಮುಖ ಉಳಿಸಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಿವೃತ್ತ ಅರಣ್ಯಾಧಿಕಾರಿ ಕೆ.ಎಂ.ಚಿಣ್ಣಪ್ಪ ನಿಧನ | `ಕಾಡಿನೊಳಗೊಂದು ಜೀವ’
February 27, 2024
1:18 PM
by: The Rural Mirror ಸುದ್ದಿಜಾಲ
ಯಕ್ಷಗಾನ ಕಲಾವಿದ ವೆಂಕಟೇಶ ಮಯ್ಯರಿಗೆ ಮಾತೃವಿಯೋಗ
January 15, 2024
11:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror