ಸುಳ್ಯ: ಇಲ್ಲಿನ ಗಾಂಧಿನಗರ ಆಲೆಟ್ಟಿ ರಸ್ತೆಯ ತಿರುವಿನಲ್ಲಿ ಬದ್ರುದ್ದೀನ್ ಪಟೇಲ್ ಮತ್ತು ಐ.ಇಸ್ಮಾಯಿಲ್ ಅವರ ಪಾಲುದಾರಿಕೆಯ ಪಟೇಲ್ ಮೆಡಿಕಲ್ಸ್ ಶುಭಾರಂಭಗೊಂಡಿತು.
ಅಲ್ ಹಜ್ ಅಸ್ಸಯ್ಯದ್ ಕೆ.ಎಸ್.ಅಟ್ಟಕೋಯ ತಂಙಳ್ ಕುಂಬೋಳ್ ಅವರು ಉದ್ಘಾಟಸಿ ದು:ವಾ ನೆರವೇರಿಸಿದರು. ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ, ಅರಂತೋಡು ಎನ್.ಎಂ.ಪಿ.ಯು.ಕಾಲೇಜಿನ ಸಂಚಾಲಕರಾದ ಕೆ.ಆರ್.ಗಂಗಾಧರ, ನ.ಪಂ.ಸದಸ್ಯರಾದ.ಎಂ.ವೆಂಕಪ್ಪ ಗೌಡ ರವರು ಸಂಸ್ಥೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ನ.ಪಂ.ಮಾಜಿ ಅಧ್ಯಕ್ಷರಾದ ಎನ್.ಎ.ರಾಮಚಂದ್ರ, ಎಸ್.ಸಂಶುದ್ದೀನ್, ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್, ಭಾರತ್ ಮೆಡಿಕಲ್ಸ್ ನ ಮಾಲಕ ಪ್ರಭಾಕರ ಬಿ.ಪಿ, ಎ.ಪಿ.ಯಂ.ಸಿ.ನಿರ್ದೇಶಕ ಹಾಜಿ ಆದಂ ಕಮ್ಮಾಡಿ, ಕೆಪೆಕ್ ನಿರ್ದೇಶಕ ಪಿ.ಎ.ಮಹಮ್ಮದ್, ಕೆ.ವಿ.ಜಿ.ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರೋಫೆಸರ್ ಡಾ.ಹರ್ಷವರ್ಧನ್ ಅರಂತೋಡು, ನ.ಪಂ.ಸದಸ್ಯರಾದ ಉಮ್ಮರ್ ಕೆ.ಎಸ್, ಶರೀಫ್ ಕಂಠಿ, ಹಾಜಿ ರಿಯಾಝ್ ಅಹ್ಮದ್ ಕಟ್ಟೆಕ್ಕಾರ್, ಪ್ರವಿತಾ ಪ್ರಶಾಂತ್, ಅರಂತೋಡು ಎನ್.ಯಂ.ಪಿ.ಯು.ಕಾಲೇಜಿನ ಉಪಾಧ್ಯಕ್ಷ ಹಾಜಿ ಅಹ್ಮದ್ ಕುಂಞ ಪಟೇಲ್, ಪತ್ರಕರ್ತ ಶರೀಫ್ ಜಟ್ಟಿಪಳ್ಳ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.
ನ.ಪಂ.ಮಾಜಿ ಸದಸ್ಯಕೆ.ಎಂ.ಮುಸ್ತಾಫ ಅವರು ಕಾರ್ಯಕ್ರಮ ನಿರ್ವಹಿಸಿದರು.ಪಾಲುದಾರರಾದ ಬದ್ರುದ್ದೀನ್ ಪಟೇಲ್ ಮತ್ತು ಐ.ಇಸ್ಮಾಯಿಲ್ ಅವರು ಸರ್ವರನ್ನು ಸ್ವಾಗತಿಸಿದರು.
ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…
ದೇಶದಲ್ಲಿ ಹವಾಮಾನ ತೀವ್ರ ಬದಲಾವಣೆ ಕಂಡುಬರುತ್ತಿದ್ದು, 13 ರಾಜ್ಯಗಳಲ್ಲಿ ಮಳೆ ಮತ್ತು ಗಾಳಿ…
ಅಂಜನಾದ್ರಿ ಬೆಟ್ಟ ಏರಲು ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ನಿರ್ಬಂಧ ವಿಧಿಸಲಾಗಿದೆ. ಬಿಸಿಲಿನ…
ರಾಜ್ಯದಲ್ಲಿ ಉಷ್ಣಾಂಶ ಏರಿಕೆ ಮುಂದುವರಿದಿದ್ದು, ಕಲಬುರಗಿಯಲ್ಲಿ 43.2°C ದಾಖಲಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ…
ಏಪ್ರಿಲ್ 18ರಿಂದ ರಾಜ್ಯದಲ್ಲಿ ಹವಾಮಾನ ಬದಲಾವಣೆ ಕಂಡುಬರುತ್ತಿದ್ದು, ಹಂತ ಹಂತವಾಗಿ ಮಳೆಯ ಚಟುವಟಿಕೆ…
ಒಡಿಶಾ ಕರಾವಳಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 700 ಕ್ಕೂ ಹೆಚ್ಚು ಗೋಣಿ ಚೀಲಗಳ ಅಡಿಕೆ…