Advertisement
MIRROR FOCUS

ಸುಳ್ಯ-ಅಜ್ಜಾವರ ರಸ್ತೆ ಅಭಿವೃದ್ಧಿ ಅಂತಿಮ ಹಂತದಲ್ಲಿ

Share

ಸುಳ್ಯ: ರಾಜಕೀಯ ವಿವಾದ ಸೃಷ್ಠಿಸಿದ್ದ, ಪ್ರತಿಭಟನೆ, ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಕಾಂತಮಂಗಲ-ಅಜ್ಜಾವರ ರಸ್ತೆ ಅಭಿವೃದ್ಧಿ ಪೂರ್ತಿಯಾಗುತ್ತಿದೆ. ಕೇಂದ್ರ ರಸ್ತೆ ನಿಧಿ ಅನುದಾನದಲ್ಲಿ ಆರು ಕೋಟಿ ರೂ ವೆಚ್ಚದಲ್ಲಿ ಸುಳ್ಯ-ಅಜ್ಜಾವರ-ಮಂಡೆಕೋಲು-ಅಡೂರು ಅಂತಾರಾಜ್ಯ ರಸ್ತೆಯಲ್ಲಿ ಕಾಂತಮಂಗಲದಿಂದ ಅಜ್ಜಾವರದ ಅಡ್ಪಂಗಾಯದವರೆಗೆ ಆರು ಕಿ.ಮಿ. ಅಭಿವೃದ್ಧಿ ನಡೆಯುತಿದೆ. ಇದರಲ್ಲಿ 4.5 ಕಿ.ಮಿ.ರಸ್ತೆ ಡಾಮರೀಕರಣ ಪೂರ್ತಿಯಾಗಿದೆ. ಉಳಿದ ಸುಮಾರು ಒಂದೂವರೆ ಕಿ.ಮಿ ರಸ್ತೆಯಲ್ಲಿ ಜಲ್ಲಿ ಹಾಸುವ ಕೆಲಸ ಪೂರ್ತಿಯಾಗಿದೆ. ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿದ್ದು ಡಾಮರೀಕರಣ ಕೆಲಸ ಸದ್ಯದಲ್ಲಿಯೇ ಪೂರ್ತಿಯಾಗಲಿದೆ ಎಂದು ಇಂಜಿನಿಯರ್‍ಗಳು ತಿಳಿಸಿದ್ದಾರೆ. 5.5 ಮೀಟರ್ ಅಗಲದಲ್ಲಿ ರಸ್ತೆ ಡಾಮರೀಕರಣ ಮಾಡಲಾಗಿದೆ. ಅಗಲೀಕರಣ ಮಾಡಿ ಅಲ್ಲಲ್ಲಿ ಕಿರು ಸೇತುವೆ, ಮೋರಿಗಳ ನಿರ್ಮಾಣವೂ ನಡೆದಿದೆ. ಡಾಮರು ಕಂಡು ದಶಕಗಳೇ ಕಳೆದು ಸಂಪೂರ್ಣ ಎಕ್ಕುಟ್ಟಿ ಹೋಗಿದ್ದ ರಸ್ತೆಯಲ್ಲಿನ ಪ್ರಯಾಣ ದೇವರಿಗೇ ಪ್ರೀತಿ ಎಂಬ ಸ್ಥಿತಿ ಇತ್ತು. ಕಳೆದ ಬೇಸಿಗೆಯಲ್ಲಿ ಕಾಮಗಾರಿ ಆರಂಭಿಸಿ ಮಳೆಗಾಲಕ್ಕೆ ಮುನ್ನ ಸ್ವಲ್ಪ ಭಾಗ ಅಭಿವೃದ್ಧಿಸಿ ಡಾಮರೀಕರಣ ನಡೆಸಲಾಗಿತ್ತು. ಮಳೆಗಾಲ ಕಳೆದ ಬಳಿಕ ಕಾಮಗಾರಿ ಮತ್ತೆ ಆರಂಭಿಸಲಾಗಿತ್ತು.

ದಶಕದ ಯಾತನೆಗೆ ಮುಕ್ತಿ: ಸುಳ್ಯ ಅಜ್ಜಾವರ ಮಧ್ಯೆಯ ಆರೂವರೆ ಕಿ.ಮಿ.ರಸ್ತೆ ಅಭಿವೃದ್ಧಿ ಕಾಣದೆ ದಶಕಗಳೇ ಕಳೆದು ಹೋಗಿತ್ತು. ಇದೀಗ ರಸ್ತೆ ಅಭಿವೃದ್ಧಿ ಕಂಡಿರುವುದರಿಂದ ದಶಕದ ಯಾತನೆಗೆ ಮುಕ್ತಿ ದೊರೆಯುವಂತಾಗಿದೆ. ಕಾಂತಮಂಗಲ ವೃತ್ತದಿಂದ ಅಡ್ಪಂಗಾಯದವರೆಗೆ ಒಟ್ಟು ಏಳೂವರೆ ಕಿ.ಮಿ.ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿ ಆರೂವರೆ ಕಿ.ಮಿ. ಸಂಪೂರ್ಣ ಎಕ್ಕುಟ್ಟಿ ಹೋಗಿ ಪ್ರಯಾಣ ದುಸ್ತರವಾಗಿತ್ತು. ಸುಳ್ಯ-ಅಜ್ಜಾವರ-ಮಂಡೆಕೋಲು-ಅಡೂರು ಅಂತಾರಾಜ್ಯ ರಸ್ತೆಯಲ್ಲಿ ಸುಳ್ಯದಿಂದ ಮಂಡೆಕೋಲು ಗಡಿವರೆಗೆ ಕರ್ನಾಟಕದ ಭಾಗ ಒಟ್ಟು 14 ಕಿ.ಮಿ. ರಸ್ತೆ ಇದೆ. ಇದರಲ್ಲಿ ಅಡ್ಪಂಗಾಯದಿಂದ ಮಂಡೆಕೋಲು ಪೇಟೆವರೆಗೆ ಮೂರು ಕಿ.ಮಿ.ಲೋಕೋಪಯೋಗಿ ರಸ್ತೆ ಹೊರತುಪಡಿಸಿದರೆ ಉಳಿದ 11 ಕಿ.ಮಿ.ಜಿಲ್ಲಾ ಪಂಚಾಯಿತಿ ರಸ್ತೆ ಇದೆ. ಇದರಲ್ಲಿ ನಾಲ್ಕು ಕೋಟಿ ರೂ ಅನುದಾನದಲ್ಲಿ ನಾಲ್ಕೂವರೆ ಕಿ.ಮಿ. ಕೆಲವು ವರ್ಷಗಳ ಹಿಂದೆ ಅಭಿವೃದ್ದಿಗೊಂಡಿತ್ತು. ಕಾಂತಮಂಗಲ ಹಾಗು ಅಜ್ಜಾವರಗಳಲ್ಲಿ ಒಟ್ಟು ಒಂದು ಕಿ.ಮಿ.ಕಾಂಕ್ರೀಟೀಕರಣ ಮತ್ತು ಮಂಡೆಕೋಲು ಪೇಟೆಯಿಂದ ಗಡಿಯವರೆಗೆ 3.5 ಕಿ.ಮಿ.ಡಾಮರೀಕರಣ ಮಾಡಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಕಾಂತಮಂಗಲ-ಅಜ್ಜಾವರ ಮಧ್ಯೆ ಉಳಿದ ಆರೂವರೆ ಕಿ.ಮಿ. ರಸ್ತೆ ಡಾಮರೀಕರಣ ಕಾಣದೇ ಒಂದೂವರೆ ದಶಕ ಸಂದಿತ್ತು.

ಕಾಂತಮಂಗಲ-ಅಜ್ಜಾವರ ರಸ್ತೆ ಅಭಿವೃದ್ಧಿಗೆ ಕೇಂದ್ರ ರಸ್ತೆ ನಿಧಿಯಿಂದ ಆರು ಕೋಟಿ ರೂ ಅನುದಾನ ನಾಲ್ಕು ವರ್ಷದ ಹಿಂದೆಯೇ ಮಂಜೂರುಗೊಂಡಿತ್ತು. ಆದರೆ ಈ ಅನುದಾನದ ಟೆಂಡರ್ ಪ್ರಕ್ರಿಯೆ ನಡೆಯದೆ ಕಾಮಗಾರಿ ಆರಂಭಿಸಲು ವಿಳಂಬ ಆಗಿ ಭಾರೀ ವಿವಾದಕ್ಕೆ ಮತ್ತು ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ನಿರಂತರ ಒತ್ತಡ ಮತ್ತು ಪ್ರತಿಭಟನೆಯ ಬಳಿಕ ರಸ್ತೆ ಕಾಮಗಾರಿ ಆರಂಭಗೊಂಡಿತ್ತು.

ಕೇಂದ್ರ ರಸ್ತೆ ನಿಧಿಯಿಂದ ಕಾಂತಮಂಗಲ-ಅಜ್ಜಾವರ ರಸ್ತೆ ಅಭಿವೃದ್ಧಿ ನಡೆಯುತಿದ್ದು ಅಂತಿಮ ಹಂತದಲ್ಲಿದೆ. ಕಾಮಗಾರಿ ಆರಂಭಗೊಳ್ಳುವುದು ವಿಳಂಬವಾಗಿದ್ದರೂ ಇದೀಗ ಅತ್ಯುತ್ತಮ ರಸ್ತೆ ನಿರ್ಮಾಣಗೊಂಡಿದೆ. ರಸ್ತೆ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಿದ ಕಾರಣ ಸುಂದರ ರಸ್ತೆ ನಿರ್ಮಾಣಗೊಂಡಿದೆ-ನವೀನ್‍ಕುಮಾರ್ ಮೇನಾಲ, ಮಾಜಿ ಸದಸ್ಯ, ದ.ಕ.ಜಿಲ್ಲಾ ಪಂಚಾಯಿತಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಒಡಿಶಾದಲ್ಲಿ ಭಾರಿ ಮಳೆ, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…

6 hours ago

ಭರ್ತಿಯಾಗುವ ಹಂತಕ್ಕೆ ಆಲಮಟ್ಟಿ ಜಲಾಶಯ – 114.896 ಟಿಎಂಸಿ ನೀರು ಸಂಗ್ರಹ, 73 ಸಾವಿರ ಕ್ಯೂಸೆಕ್ ಒಳಹರಿವು

ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…

6 hours ago

ಹವಾಮಾನ ವರದಿ | 28-07-2026 | ಕರಾವಳಿ, ಮಲೆನಾಡಿನಲ್ಲಿ ಸಾಮಾನ್ಯ ಮಳೆ ಮುಂದುವರಿಕೆ

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯುವ…

6 hours ago

ಮಳೆ ಕೊರತೆ ತೀವ್ರ – ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ ಶೇ. 3 ಬಿತ್ತನೆ; ನೀರಿನ ಬಳಕೆಗೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…

11 hours ago

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…

1 day ago

200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ

ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…

1 day ago