ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು ಯಾರು ? ಅಥವಾ ಸುಳ್ಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದಾ ? …ಹೀಗೊಂದು ಪ್ರಶ್ನೆ ಈಗ ಕಲ್ಮಡ್ಕ ಪರಿಸರದಲ್ಲಿ ಕೇಳಿದೆ.
ಕಾರಣ ಇಷ್ಟೇ, ಇಲ್ಲಿ ಪಾಜಪಳ್ಳ -ಕುಕ್ಕುಜಡ್ಕ ರಸ್ತೆ ಅಭಿವೃದ್ದಿಯನ್ನು ಈಚೆಗೆ ಮಾಡಲಾಗಿದೆ. 5.80 ಕಿಮೀ ಉದ್ದದ ರಸ್ತೆಯನ್ನು 1.96 ಕೋಟಿ ರೂಪಾಯಿಯಲ್ಲಿ ಅಭಿವೃದ್ಧಿ ಮಾಡಲಾಗಿದೆ. ಇದಕ್ಕೆ ಮಾಹಿತಿ ನೀಡುವ ಸಲುವಾಗಿ ಫಲಕ ಹಾಕಲಾಗುತ್ತದೆ. ಇದರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಹೆಸರು ಉಲ್ಲೇಖಿಸಲಾಗಿದೆ.
ಕಣ್ತಪ್ಪಿನಿಂದ ಈ ಲೋಪವಾಗಿರಬಹುದು. ಆದರೆ ಕೋಟಿ ಅನುದಾನದ ಮಾಹಿತಿ ಫಲಕದಲ್ಲಿ ಶಾಸಕರ ಹೆಸರೇ ಬದಲಾಗಿರುವುದು ಇಲಾಖೆಯ ನಿರ್ಲಕ್ಷ್ಯ ಸ್ಪಷ್ಟವಾಗಿ ಕಾಣುತ್ತದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಬಹುತೇಕ ಕಾಮಗಾರಿಗಳಲ್ಲಿ, ಕೆಲಸಗಳಲ್ಲಿ ಇಂತಹದ್ದೇ ಲೋಪಗಳು ಕೆಲವು ಇಲಾಖೆಗಳಿಂದ ಕಾಣುತ್ತದೆ. ಇದನ್ನು ಸುಳ್ಯದ ಸಜ್ಜನ ಶಾಸಕ ಅಂಗಾರ ಅವರೂ ಪ್ರಶ್ನೆ ಮಾಡುವುದಿಲ್ಲ. ಹೀಗಾಗಿ ಕಾಮಗಾರಿಗಳೂ ಹೀಗೇ ನಡೆಯುತ್ತದೆ ಎಂದು ಜನರು ಹೇಳುತ್ತಾರೆ.
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…
2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…
ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…