ಸುಳ್ಯ ನ ಪಂ ಫಲಿತಾಂಶ : ಗೆಲುವು ಸಾಧಿಸಿದ ಪ್ರಮುಖರು

May 31, 2019
2:41 PM

ಸುಳ್ಯ:  ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿ ಪ್ರಮುಖರು ಗೆಲುವು ಸಾಧಿಸಿದ್ದಾರೆ. ಕೆ.ಪಿ.ಸಿ.ಸಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಭಟ್ ಕೊಡೆಂಕೇರಿ, ನ.ಪಂ.ಮಾಜಿ ಸದಸ್ಯರಾದ ಕೆ.ಎಸ್.ಉಮ್ಮರ್, ಸರೋಜಿನಿ ಪೆಲ್ತಡ್ಕ, ಮಾಜಿ ನಾಮನಿರ್ದೇಶಿತ ಸದಸ್ಯೆ ಶಶಿಕಲಾ ಎ., ನಿವೃತ್ತ ಶಿಕ್ಷಕ ಬುದ್ಧ ನಾಯ್ಕ ಆಯ್ಕೆಯಾದ ಪ್ರಮುಖರು.

Advertisement
Advertisement

 

ಪರಾಜಿತರಾದ ಪ್ರಮುಖರು:

ನ.ಪಂ.ಚುನಾವಣೆಯಲ್ಲಿ ಪರಾಜಿತರ ಪಟ್ಟಿಯಲ್ಲಿಯೂ ಪ್ರಮುಖರು ಸೇರಿಕೊಂಡಿದ್ದಾರೆ. ಮಾಜಿ ಸದಸ್ಯರಾದ ಕೆ.ಎಂ.ಮುಸ್ತಫಾ, ಕೆ.ಗೋಕುಲ್ ದಾಸ್, ಪ್ರೇಮ ಟೀಚರ್, ಶ್ರೀಲತಾ ಪ್ರಸನ್ನ, ಜೂಲಿಯಾ ಕ್ತಾಸ್ತಾ,, ಬಿಜೆಪಿ ನಗರ ಶಕ್ತಿ ಕೇಂದ್ರದ ಕಾರ್ಯದರ್ಶಿ ಹರೀಶ್ ಬೂಡುಪನ್ನೆ, ಬೂಡು ರಾಧಾಕೃಷ್ಣ ರೈ, ಅಬ್ದುಲ್ ಕಲಾಂ, ಆರ್.ಕೆ.ಮಹಮ್ಮದ್, ಪರಾಭವಗೊಂಡರು.

ಆರನೇ ಬಾರಿಯ ಸ್ಫರ್ಧೆಯಲ್ಲಿ  ಕೆ.ಎಂ. ಮುಸ್ತಫಾ ಗೆ ಸೋಲು:

Advertisement

ಆರನೇ ಬಾರಿ ಸ್ಪರ್ಧೆ ನಡೆಸಿದ ಕೆ.ಎಂ.ಮುಸ್ತಫಾ ಈ ಬಾರಿ 17ನೇ ವಾರ್ಡ್ ನಲ್ಲಿ ಪರಾಜಿತರಾಗಿದ್ದಾರೆ. ಕಳೆದ ಐದು ಬಾರಿ ಗೆದ್ದು ನಗರ ಪಂಚಾಯತ್ ಸದಸ್ಯರಾಗಿದ್ದ ಮುಸ್ತಫಾ ಆರನೇ ಸ್ಪರ್ಧೆಯಲ್ಲಿ ಎಡವಿದರು. ಬಿಜೆಪಿ ಅಭ್ಯರ್ಥಿ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ, ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ನಡೆದ ಚತುಷ್ಕೋನ ಸ್ಪರ್ಧೆಯಲ್ಲಿ ಮುಸ್ತಫಾ 15  ಮತಗಳ ಅಂತರದಲ್ಲಿ ಎರಡನೇ ಸ್ಥಾನಿಯಾದರು.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜೂನ್ 15 ರಂದು ಮಿಥುನ ರಾಶಿಗೆ ಸೂರ್ಯ | 12 ರಾಶಿಗಳ ಫಲಾಫಲ ಹೀಗಿದೆ….
June 1, 2025
6:33 AM
by: ದ ರೂರಲ್ ಮಿರರ್.ಕಾಂ
ಜೂನ್ 1 : ಯಕ್ಷಗುರು ಪಾಲೆಚ್ಚಾರು ಗೋವಿಂದ ನಾಯಕರಿಗೆ ‘ಈಶಾವಾಸ್ಯ ಪ್ರಶಸ್ತಿ’ | ಗೋವಿಂದ ಗಾಥೆ’ ಕೃತಿ ಅನಾವರಣ
May 31, 2025
9:45 PM
by: The Rural Mirror ಸುದ್ದಿಜಾಲ
ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ 315 ಮಿಮೀ ಸಾರ್ವಕಾಲಿಕ ದಾಖಲೆ ಮಳೆ
May 31, 2025
9:31 PM
by: The Rural Mirror ಸುದ್ದಿಜಾಲ
ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಂಚೂಣಿ
May 31, 2025
9:17 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group