Advertisement
ಸುದ್ದಿಗಳು

ಸುಳ್ಯ ವಲಯ ಸುನ್ನೀ ಮಹಲ್ ಫೆಡರೇಶನ್ ರಚನೆ

Share

ಸುಳ್ಯ: ನೈಜ ಅಹ್ಲುಸ್ಸುನ್ನತಿ ವಲ್ ಜಮಾಅತಿನ ತತ್ವ ಹಾಗೂ ಆದರ್ಶಗಳಲ್ಲಿ ತಾಲೂಕಿನ ಪ್ರತಿ ಮೊಹಲ್ಲಾಗಳನ್ನು ಒಗ್ಗೂಡಿಸಿ ಮೊಹಲ್ಲಾಗಳಿಗೆ ಭದ್ರತೆ ಒದಗಿಸುವ ಪ್ರಯತ್ನ ಮಾಡುವುದೇ ಸುನ್ನೀ ಮಹಲ್ ಫೆಡರೇಶನ್ ಇದರ ಮೂಲ ಉದ್ದೇಶ ಎಂದು ಮಂಗಳೂರು ಖಾಝಿಯೂ ದಕ್ಷಿಣ ಕನ್ನಡ ಜಿಲ್ಲಾ ಸುನ್ನೀ ಮಹಲ್ ಫೆಡರೇಶನ್ ಇದರ ಅಧ್ಯಕ್ಷರೂ ಆದ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು.

ಅವರು ಅರಂಬೂರಿನಲ್ಲಿ ನಡೆದ ಸುಳ್ಯ ವಲಯ ಸುನ್ನೀ ಮಹಲ್ ಫೆಡರೇಶನ್ ರಚನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಮುಶಾವರ ಅಧ್ಯಕ್ಷರಾದ ಶೈಖುನಾ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಮಾತನಾಡಿ ಮೊಹಲ್ಲಾಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸುನ್ನೀ ಮಹಲ್ ಫೆಡರೇಶನ್ ಪ್ರತಿ ಮೊಹಲ್ಲಾಗಳಲ್ಲಿ ಅಂಗೀಕರಿಸಬೇಕಾಗಿ ಅವರು ಕರೆ ನೀಡಿದರು.

ಮುಖ್ಯ ಭಾಷಣಗಾರರಾದ ಸುನ್ನಿ ಮಹಲ್ ಫೆಡರೇಶನ್ ಇದರ ಕೇಂದ್ರೀಯ ಸಮಿತಿ ಸದಸ್ಯರಾದ ಉಸ್ತಾದ್ ಅಲಿ ಪರಂಬಿಲ್ ಮಾತನಾಡಿ ಸಂಘಟನೆಯ ಮಹತ್ವ ಹಾಗೂ ಪ್ರತಿ ಮೊಹಲ್ಲಾಗಳಲ್ಲಿ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳನ್ನು  ವಿವರಿಸಿದರು.

ನೂರುಲ್ ಹುದಾ ಎಜುಕೇಷನ್ ಸೆಂಟರ್ ಮಾಡನ್ನೂರು ಇದರ ಪ್ರಾಂಶುಪಾಲರೂ ಪುತ್ತೂರು ತಾಲೂಕು ಸುನ್ನೀ ಮಹಲ್ ಫೆಡರೇಶನ್ ಇದರ ಅಧ್ಯಕ್ಷರೂ ಆದ ಅಡ್ವಕೇಟ್ ಹನೀಫ್ ಹುದವಿ, ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಉಮರ್ ಫೈಝಿ ಅಜ್ಜಾವರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಎಸ್.ಬಿ.ಮುಹಮ್ಮದ್ ದಾರಿಮಿ ಉಪ್ಪಿನಂಗಡಿ, ಕೆ.ಆರ್. ಹುಸೈನ್ ದಾರಿಮಿ ಪುತ್ತೂರು, ತಬೂಕ್ ದಾರಿಮಿ ಮಂಗಳೂರು,  ಮಂಗಳೂರು ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಹನೀಫ್ ಹಾಜಿ, ಸಮಸ್ತ ಕೇರಳ ಇಸ್ಲಾಂ ಮತ ವಿಧ್ಯಾಭ್ಯಾಸ ಬೋರ್ಡ್ ಸದಸ್ಯ ರಶೀದ್ ಹಾಜಿ ಪರ್ಲಡ್ಕ, ರಿಯಾಝ್ ಹಾಜಿ ಬಂದರ್ ಮಂಗಳೂರು,
ದಕ್ಷಿಣ ಕನ್ನಡ ಜಿಲ್ಲಾ ಸುನ್ನೀ ಮಹಲ್ ಫೆಡರೇಶನ್ ಕೋಶಾಧಿಕಾರಿ ಅಬ್ದುಲ್ ರಝಾಕ್ ಹಾಜಿ ಮಂಗಳೂರು, ಮೊದಲಾದ ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಕತ್ತರ್ ಇಬ್ರಾಹಿಮ್ ಹಾಜಿ ಮಂಡೆಕೋಲು
ಅಬೂಬಕ್ಕರ್ ಹಾಜಿ ಬೆಳ್ಳಾರೆ
ಅಲಿ ಹಾಜಿ ಕಲ್ಲುಗುಂಡಿ

ನೂತನ ಸಮಿತಿ ಸದಸ್ಯರು

ಮುಖ್ಯ ರಕ್ಷಾಧಿಕಾರಿ: ಶೈಖುನಾ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ

ರಕ್ಷಾಧಿಕಾರಿಗಳು:
ಇಸಾಕ್ ಹಾಜಿ ಪಾಜಪ್ಪಳ್ಳ,
ಅಬ್ದುಲ್ ಕಾದರ್ ಹಾಜಿ ಪಟೇಲ್ ಅರಂತೋಡು,
ಹಾಜಿ ಬೀರಾ ಮೊಯಿದೀನ್ ಕನಕಮಜಲು,
ಅಬ್ಬಾಸ್ ಹಾಜಿ ಸೆಂಟ್ಯಾರು ಕಲ್ಲುಗುಂಡಿ,
ಟಿ.ಎಂ.ಶಹೀದ್ ಅರಂತೋಡು.

ಅಧ್ಯಕ್ಷರು:
ಕತ್ತರ್ ಇಬ್ರಾಹಿಮ್ ಹಾಜಿ ಮಂಡೆಕೋಲು

ಉಪಾಧ್ಯಕ್ಷರುಗಳು:
ಅಬ್ದುಲ್ ಕಾದರ್ ಹಾಜಿ ಅಜ್ಜಾವರ,
ಅಬ್ದುಲ್ ಕಾದರ್ ಹಾಜಿ ಬಯಂಬಾಡಿ,
ಅಬ್ದುಲ್ಲ ತೋಟುಂಗರ,
ಹಮೀದ್ ಹಾಜಿ ಸುಳ್ಯ.

ಪ್ರಧಾನ ಕಾರ್ಯದರ್ಶಿ:
ಅಬೂಬಕ್ಕರ್ ಹಾಜಿ ಮಂಗಳ ಬೆಳ್ಳಾರೆ

ವರ್ಕಿಂಗ್ ಕಾರ್ಯದರ್ಶಿಗಳು:
ಕೆ.ಎಚ್. ಅಬ್ದುಲ್ ರಝಾಕ್ ಮುಸ್ಲಿಯಾರ್ ಅಜ್ಜಾವರ,
ಸಿ.ಎ. ಅಕ್ಬರ್ ಅಲಿ ಕರಾವಳಿ.

ಸಂಘಟನ ಕಾರ್ಯದರ್ಶಿ:
ತಾಜ್ ಮುಹಮ್ಮದ್ ಕಲ್ಲುಗುಂಡಿ

ಜೊತೆ ಕಾರ್ಯದರ್ಶಿಗಳು:
ಅಶ್ರಫ್ ಗುಂಡಿ ಅರಂತೋಡು,
ಉಮರ್ ಪೇರಡ್ಕ,
ಇಬ್ರಾಹಿಮ್ ನಿಡುಬೆ,
ಉಮರ್ ಫೈಝಿ ಅಜ್ಜಾವರ.

ಕೋಶಾಧಿಕಾರಿ:
ಅಲಿ ಹಾಜಿ ಕಲ್ಲುಗುಂಡಿ

ಕಾನೂನು ಸಲಹೆ:
ಅಡ್ವಕೇಟ್ ಫವಾಝ್ ಕನಕಮಜಲು

ಜಮಾಅತ್ ಸಂದರ್ಶಕರು: ಅಬೂಬಕ್ಕರ್ ಪಾರೆಕ್ಕಲ್ಲು,
ರಫೀಕ್ ಮುಸ್ಲಿಯಾರ್ ಅರಂಬೂರು,
ಎ.ಕೆ.ಹಸೈನಾರ್ ಕಲ್ಲುಗುಂಡಿ,
ಜಮಾಲ್ ಬೆಳ್ಳಾರೆ,
ಶಾಫಿ ಮಕ್ರಿ ಅಜ್ಜಾವರ,
ಹೋನೆಸ್ಟ್ ಅಬ್ದುಲ್ಲ ಕಲ್ಲುಗುಂಡಿ,
ತಾಜ್ ಮುಹಮ್ಮದ್.

ಪತ್ರಿಕಾ ಕಾರ್ಯದರ್ಶಿ:
ಎಂ.ಸಿ. ಅಬೂಬಕ್ಕರ್ ಕಲ್ಲುಗುಂಡಿ,
ಎಸ್.ಕೆ. ಮುಹಮ್ಮದ್ ಹನೀಫ್,
ಯು.ಪಿ.ಬಶೀರ್ ಬೆಳ್ಳಾರೆ.

ಸದಸ್ಯರುಗಳು:
ಶಾಫಿ ದಾರಿಮಿ ಅಜ್ಜಾವರ,
ಎಸ್.ಪಿ.ಅಬ್ದುಲ್ ರಹಿಮಾನ್ ಸಂಪಾಜೆ,
ಹಮೀದ್ ಪಯಶ್ವಿನಿ,
ಮುಹಮ್ಮದ್ ಹಾಮಿದಿಯ್ಯ ಸಂಪಾಜೆ,
ಮುಸ್ತಫಾ ಅರಂತೋಡು,
ಅಬ್ದುಲ್ ಕಾದರ್ ಮೊಟ್ಟಂಗಾರು,
ಜುನೈದ್ ನಿಡುಬೆ,
ಹಸೈನಾರ್ ದರ್ಮತ್ತಣ್ಣಿ,
ಬಾಷಾ ಸಾಹಿಬ್ ಅರಂಬೂರು,
ಹಸೈನಾರ್ ದುಗ್ಗಲಡ್ಕ,
ಯೂಸುಫ್ ಅಂಜಿಕಾರು,
ಸಿ.ಎಚ್.ಮುಹಮ್ಮದ್ ಹಾಜಿ ಪೈಂಬಚ್ಚಾಲು,
ಹಾಜಿ ಬಾಪು ಸಾಹೇಬ್ ಅರಂಬೂರು,
ಅಬ್ದುಲ್ಲ ಮಾರ್ಗ ಮಂಡೆಕೋಲು,
ಅಹ್ಮದ್ ಹಾಜಿ ಸುಪ್ರಿಂ ಸುಳ್ಯ,
ರಾಫಿ ಮಂಡೆಕೋಲು,
ಅಹ್ಮದ್ ಹಾಜಿ ಪಾರೆ ಸುಳ್ಯ,
ಟಿ.ಎಚ್.ಮುಹಮ್ಮದ್ ತುಪ್ಪಕ್ಕಲ್ಲು ಅಡ್ಕ,
ಹಾರಿಸ್ ಮಾವಂಜಿ ಮಂಡೆಕೋಲು,
ಅಝರುದ್ದೀನ್ ಬೆಳ್ಳಾರೆ,
ಕೆ.ಎಂ.ಮುಹಮ್ಮದ್ ಕುಂಞಿ ಹಾಜಿ ಮುಡೂರು,
ಕಲಂದರ್ ಇಂಜಿನಿಯರ್ ಎಲಿಮಲೆ.
ಮೊದಲಾದವರನ್ನು ಆಯ್ಕೆ ಮಾಡಲಾಯಿತು

ಸುಳ್ಯ ರೇಂಜ್ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಲೆ ಸ್ವಾಗತಿಸಿ ಉಮರ್ ಫೈಝಿ ಅಜ್ಜಾವರ ವಂದಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

10 hours ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

11 hours ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

12 hours ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

21 hours ago

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

23 hours ago

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

1 day ago