ಸುಳ್ಯ: ವಿಮಾ ಸಪ್ತಾಹ ಸಮಾರೋಪ

September 9, 2019
4:00 PM

ಸುಳ್ಯ : ಭಾರತೀಯ ಜೀವ ವಿಮಾ ನಿಗಮದ ವಿಮಾ ಸಪ್ತಾಹ ಸಮಾರೋಪ ಸುಳ್ಯದ ಎಲ್ಲೈಸಿ ಉಪಗ್ರಹ ಶಾಖೆಯಲ್ಲಿ ನಡೆಯಿತು.

Advertisement
Advertisement

ಸಭಾಧ್ಯಕ್ಷತೆ ವಹಿಸಿದ್ದ ಶಾಖಾಧಿಕಾರಿ ಜಿ.ಶಶಿಧರ ಹೆಗ್ಡೆ ಅವರು ಮಾತನಾಡಿ ದೇಶದ ಉದ್ದಗಲಕ್ಕೂ ಪಸರಿಸಿರುವ ಪ್ರತಿಷ್ಠಿತ ಸಂಸ್ಥೆಯಾದ ಎಲ್ಲೈಸಿ 63 ಸಂವತ್ಸರಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ವಿಮಾ ಕ್ಷೇತ್ರದ ಉದಾರೀಕರಣ ನೀತಿಯಿಂದಾಗಿ ಉದ್ಭವಿಸಿದ ಹಲವು ಪ್ರಕ್ಷುಬ್ದ ಸನ್ನಿವೇಶಗಳನ್ನು ನಿಗಮವು ಸಮರ್ಥವಾಗಿ ನಿಭಾಯಿಸಿದೆ ಎಂದಾದರೆ ಅದಕ್ಕೆ ಗ್ರಾಹಕರು ಸಂಸ್ಥೆ ಮೇಲಿಟ್ಟಿರುವ ಪ್ರೀತಿ ವಿಶ್ವಾಸವೇ ಕಾರಣ. ನಿಮ್ಮ ಆಶೋತ್ತರಗಳಿಗೆ ಸ್ಪಂದಿಸುತ್ತಾ ಮುಂದೆಯೂ ದಕ್ಷ ಪ್ರಾಮಾಣಿಕ ಸೇವೆಯ ದೀಕ್ಷೆ ನಿರಂತರ ಮುಂದುವರಿಸುವ ಭರವಸೆ ನೀಡುತ್ತೇವೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿಗಮದ ಪ್ರತಿನಿಧಿ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಅವರು ಶುಭ ಹಾರೈಸಿ, ವೃತ್ತಿ ಮೇಲಿನ ಗೌರವ, ಕರ್ತವ್ಯನಿಷ್ಠೆ ನಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ದುಡಿಮೆಯೊಂದಿಗೆ ಸಮಾಜಮುಖಿ ಚಿಂತನೆಯನ್ನು ಮೈಗೂಡಿಸಿಕೊಳ್ಳಿ ಎಂದರು.

ಅಭಿವೃದ್ಧಿ ಅಧಿಕಾರಿಗಳಾದ ಕೆ.ಶ್ರೀನಿವಾಸ, ಗಣೇಶ ಎಂ.ಹೆಗಡೆ, ಜಯಕುಮಾರ್ ಪಿ. ಮತ್ತು ಉಮೇಶ ನಾಯಕ್ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.ವೃತ್ತಿಸಾಧಕ ಪ್ರತಿನಿಧಿಗಳಾದ ಶಂಕರಲಿಂಗಂ ಕೆ., ಮಾಧವ ಕೆ.ಜಾಲ್ಸೂರು ಮತ್ತು ವಸಂತ ಹೊದ್ದೆಟ್ಟಿ ಅವರನ್ನು ಗೌರವಿಸಲಾಯಿತು.

ಉಪ ಆಡಳಿತಾಧಿಕಾರಿ ಲಿಂಗಪ್ಪ ಗೌಡ ಸ್ವಾಗತಿಸಿ, ಪ್ರತಿನಿಧಿ ಪ್ರಭಾಕರ ಎಸ್.ಎನ್. ವಂದಿಸಿದರು. ಆಡಳಿತಾಧಿಕಾರಿ ಮಹಾಲಿಂಗ ನಾಯ್ಕ ಶುಭ ಹಾರೈಸಿದರು. ಪ್ರತಿನಿಧಿ ಪದ್ಮನಾಭ ಶೆಟ್ಟಿ ನಿರೂಪಿಸಿದರು. ಕಚೇರಿ ಸಹಾಯಕರಾದ ಸಂದೀಪ್ ಮತ್ತು ರಾಜೇಶ್ ಸಹಕರಿಸಿದರು.

Advertisement
Advertisement

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇರಳ ಮತ್ತು ಅಸ್ಸಾಂನಲ್ಲಿ ಭಾರಿ ಮಳೆ, ದೆಹಲಿ ಮಾನ್ಸೂನ್ ವಿಳಂಬ
June 29, 2025
7:05 AM
by: The Rural Mirror ಸುದ್ದಿಜಾಲ
ಆಷಾಢ ಶುಕ್ರವಾರ ಈ 4 ತಪ್ಪುಗಳನ್ನು ಮಾಡಲೇಬೇಡಿ..!
June 29, 2025
6:20 AM
by: ದ ರೂರಲ್ ಮಿರರ್.ಕಾಂ
ರಸ್ತೆ ಗುಂಡಿಮುಚ್ಚಲು ಇಕೋಫಿಕ್ಸ್ ತಂತ್ರಜ್ಞಾನ | ಏನಿದು ತಂತ್ರಜ್ಞಾನ ? ಗ್ರಾಮೀಣ ಭಾಗಕ್ಕೂ ಸೂಕ್ತವೇ..?
June 29, 2025
6:07 AM
by: ದ ರೂರಲ್ ಮಿರರ್.ಕಾಂ
ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆಪ್‌ನಲ್ಲಿ ವಿವರ ದಾಖಲಿಸಲು ರೈತರಿಗೆ ಮನವಿ
June 28, 2025
9:16 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group