Advertisement
ಧಾರ್ಮಿಕ

ಸುಳ್ಯ : ಶ್ರೀ ಗುರುರಾಯರ ಆರಾಧನಾ ಮಹೋತ್ಸವ

Share

ಸುಳ್ಯ: ಸುಳ್ಯದ ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ಆಶ್ರಯದ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಶ್ರೀ ಗುರುರಾಯರ ಆರಾಧನಾ ಮಹೋತ್ಸವವು ವೇದಮೂರ್ತಿ ಶ್ರೀಹರಿ ಎಳಚಿತ್ತಾಯ ನೇತೃತ್ವದಲ್ಲಿ  ನಡೆಯಿತು.

Advertisement
Advertisement
Advertisement
Advertisement

ಪೂರ್ವಾಹ್ನ ಮಹಾ ಗಣಪತಿ ಹವನ, ಪವಮಾನ ಹೋಮ, ಅಲಂಕಾರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.ಸಂಜೆ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ, ಮಹಿಳಾ ಪರಿಷತ್ ಸುಳ್ಯ ಮತ್ತು ಪಂಜದ ಶಿವಳ್ಳಿ ಸಂಪನ್ನ ಮಹಿಳಾ ಘಟಕದ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು.ಬಳಿಕ ತೊಟ್ಟಿಲ ಸೇವೆ ನಡೆಯಿತು. ನೂತನವಾಗಿ ಗುರುಗಳಿಗೆ ತೊಟ್ಟಿಲನ್ನು ನೀಡಿದ ಕೃಷ್ಣ ನಾವಡ ಮತ್ತು ರವಿರಾಜ ನಾವಡ ಅವರನ್ನು ಹಾಗೂ ಚಪ್ಪರಕ್ಕೆ ಧನ ಸಹಾಯ ನೀಡಿದ ಕೇಶವ ಕೇಕುಣ್ಣಾಯ ಅವರನ್ನು ಗೌರವಿಸಲಾಯಿತು. ಅಷ್ಟಾವಧಾನ, ಸೇವೆಯಲ್ಲಿ ವೇದ, ವ್ಯಾಕರಣ, ಕಾವ್ಯ, ಜೋತಿಷ್ಯದಲ್ಲಿ ವೇದಮೂರ್ತಿಗಳಾದ ಶ್ರೀಹರಿ ಎಳಚಿತ್ತಾಯ, ಶ್ರೀವರ ಪಾಂಗಾಣ್ಣಾಯ, ಅರಂಬೂರು ಭಾರದ್ವಾಜ ಆಶ್ರಮದ ವೇದಪಾಠ ಶಾಲೆಯ ಪ್ರಾಂಶುಪಾಲ ವೇದಮೂರ್ತಿ ವೆಂಕಟೇಶ ಶಾಸ್ತ್ರಿ ಮತ್ತು ವೇದ ವಿದ್ಯಾರ್ಥಿಗಳು ಸಹಕರಿಸಿದರು.ಸಂಗೀತದಲ್ಲಿ ಕೃತಿಕಾ ಶಗ್ರಿತ್ತಾಯ, ಭಜನೆಯಲ್ಲಿ ಜಯಪ್ರಕಾಶ ಕಾಯರ್ತೋಡಿ, ಭರತನಾಟ್ಯದಲ್ಲಿ ಪೂರ್ವಿಕೃಷ್ಣ , ಚೆಂಡೆವಾದನ ಸುಮಂತ್ ಮತ್ತು ಸಮರ್ಥ ಕಡಂಬಳಿತ್ತಾಯ, ನಾಟಕದಲ್ಲಿ ತುಷಾರ ಗೌಡ ಸುಳ್ಯ ಮತ್ತು ಸಾಯಿ ನಕ್ಷತ್ರ, ಶೇಖರ ಮಣಿಯಾಣಿ ನೇತೃತ್ವದ ಮಹಾವಿಷ್ಣು ಚಿಕ್ಕಮೇಳದಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಅಷ್ಟಾವಧಾನವನ್ನು ಪ್ರಕಾಶ್ ಮೂಡಿತ್ತಾಯ ಸಂಘಟಿಸಿದ್ದು, ಸುಧನ್ವಕೃಷ್ಣ, ಪ್ರಥಮ ಮೂಡಿತ್ತಾಯ, ಅನುಷಾ ಭಾರ್ಗವಿ ಸಹಕರಿಸಿದರು.

Advertisement

ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಟ್ರಸ್ಟಿನ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ ಮತ್ತು ಇತರ ಟ್ರಸ್ಟಿಯವರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೇಂದ್ರ ಬಜೆಟ್‌ | ರೈತರಿಗೆ ಕಿಸಾನ್ ಕಾರ್ಡ್ ನಿಂದ ಪ್ರಯೋಜನ | ಕೃಷಿ ವಲಯಕ್ಕೆ 137757 ಕೋಟಿ ಅನುದಾನ |

ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…

10 hours ago

ಆನೆಗಳ ಚಲನ ವಲನಗಳ ಬಗ್ಗೆ ಸ್ವದೇಶಿ ನಿರ್ಮಿತ ರೇಡಿಯೊ ಕಾಲರ್ ಅಳವಡಿಕೆ | ಅರಣ್ಯ ಸಚಿವ ಈಶ್ವರ್ ಖಂಡ್ರೆ

ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…

10 hours ago

ಹೊಸರುಚಿ | ಪಪ್ಪಾಯ ಹಣ್ಣು ಬರ್ಫಿ

ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…

18 hours ago

ಸೀತೆ ಪುನೀತೆಯೆ ? ಮತ್ತೊಮ್ಮೆ ಅಗ್ನಿ ಪರೀಕ್ಷೆಯೇ?

ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…

21 hours ago

ಎಲ್ಲಾ ಕೃಷಿ ಆದಾಯವನ್ನು ಬ್ಯಾಂಕ್‌ ಉಳಿತಾಯ ಖಾತೆ ಮೂಲಕ ವ್ಯವಹಾರ ಮಾಡಬೇಕು ಏಕೆ..?

ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…

1 day ago

ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…

1 day ago