ಸುಳ್ಯ: ಸುಳ್ಯ ಹವ್ಯಕ ವಲಯದ ವತಿಯಿಂದ ಗಣಪತಿ ಹವನ, ಲಲಿತಾ ಹವನ ಹಾಗೂ ದುರ್ಗಾಪೂಜೆ ಕಾರ್ಯಕ್ರಮಗಳನ್ನು ಸುಳ್ಯದ ” ಶಿವ ಕೃಪಾ” ಕಲಾಮಂದಿರದಲ್ಲಿ ನಡೆಸಲಾಯಿತು.
ಡಾಕ್ಟರ್ ನಾರಾಯಣ ಭಟ್ ಕಲ್ಚಾರ್ ಇವರು ಧ್ವಜಾರೋಹಣವನ್ನು ನಡೆಸಿದರು, ವಲಯದ ಕಾರ್ಯದರ್ಶಿಯಾದ ವಿಷ್ಣು ಕಿರಣ ನೀರಬಿದ್ರೆ ಇವರು ಫಲ ಸಮರ್ಪಿಸಿ ಶಂಖನಾದದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.ವಲಯದ ವತಿಯಿಂದ ದುರ್ಗಾ ಪೂಜೆಯನ್ನು ಡಾಕ್ಟರ್ ನಾರಾಯಣ ಭಟ್ ಕಲ್ಚಾರ್ ದಂಪತಿಗಳು ಗಣಪತಿ ಹವನ, ಲಲಿತಾ ಹವನವನ್ನು ಕುಂಜತ್ತೋಡಿ ರಮೇಶ್ ಭಟ್ ದಂಪತಿಗಳು ನೆರವೇರಿಸಿದರು. ವಲಯ ವೈದಿಕ ಪ್ರಧಾನರಾದ ವೇದಮೂರ್ತಿ ಕೃಷ್ಣ ಭಟ್ ಅರಂಬೂರು ಮತ್ತು ಮಂಡಲ ವೈದಿಕ ಪ್ರಧಾನರಾದ ವೆಂಕಟೇಶ ಶಾಸ್ತ್ರಿಗಳ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ನೆರವೇರಿದವು.
ಮಹಾಮಂಡಲದ ಮಾತೃತ್ವ ವಿಭಾಗದ ಅಧ್ಯಕ್ಷರಾದ ಈಶ್ವರಿ ಶ್ಯಾಂ ಭಟ್ ಬೇರ್ಕಡವು ಇವರು ಮಾತೃತ್ವ ವಿಭಾಗದ ಕಾರ್ಯಾಚರಣೆಗಳ ಬಗ್ಗೆ ಮಾಹಿತಿಗಳನ್ನು ನೀಡಿದರು.
ವಿಷ್ಣು ಗುಪ್ತ ವಿಶ್ವವಿದ್ಯಾಪೀಠ ಮುಳ್ಳೇರಿಯ ಮಂಡಲದ ನಿರ್ದೇಶಕರಾದ ಪ್ರೊ. ಟಿ. ಶ್ರೀಕೃಷ್ಣ ಭಟ್ ಅವರು ವಿಶ್ವವಿದ್ಯಾಪೀಠ ಬಗ್ಗೆ ಮಾಹಿತಿಗಳನ್ನು ನೀಡಿದರು ಈ ಸಂದರ್ಭದಲ್ಲಿ ಮಂಡಲದ ಮಾತೃ ಪ್ರಧಾನೆ ಕುಸುಮ ಪೆರ್ಮುಖ ಅವರು ಉಪಸ್ಥಿತರಿದ್ದರು.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಾವಳದಲ್ಲಿ ಕಡಲಾಮೆ ಮೊಟ್ಟೆಯಿಂದ ಹೊರ ಬಂದ…
ದಕ್ಷಿಣ ಕನ್ನಡದಲ್ಲಿ ಗುಣಮಟ್ಟದ ಮೀನು ಮರಿ ಕೊರತೆ ನೀಗಿಸಲು ಮಂಗಳೂರಿನಲ್ಲಿ Marine Finfish…
ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ನೀಡಬೇಕೆಂದು…
ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ, ಅದು ಗಂಭೀರ ಆರೋಗ್ಯ ಅಪಾಯಗಳಿಗೆ…
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…
ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…