ಸುಳ್ಯ: ಸುಳ್ಯ ತಾಲೂಕು ಸವಿತಾ ಸಮಾಜದ ಯುವ ಘಟಕದ ಆಶ್ರಯದಲ್ಲಿ ಸೆ.10 ರಂದು ಬೆಳಗ್ಗೆ 9 ರಿಂದ ಕಾಯರ್ತೋಡಿಯಲ್ಲಿ ಸವಿತಾ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ. ಕಾರ್ಯಕ್ರಮವನ್ನು ನಪಸಂ ಸದಸ್ಯೆ ಪ್ರವಿತಾ ಪ್ರಶಾಂತ್ ಉದ್ಘಾಟಿಸುವರು.
ಸಭಾಧ್ಯಕ್ಷತೆಯನ್ನು ಸವಿತಾ ಸಮಾಜದ ಯುವಘಟಕದ ಅಧ್ಯಕ್ಷ ಪ್ರಸನ್ನ ಬಿ ಪಂಜ ವಹಿಸುವರು. ವಿವಿಧ ಗಣ್ಯರು ಅತಿಥಿಗಳಾಗಿ ಭಾಗವಹಿಸುವರು. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಸುಳ್ಯ ಸವಿತಾ ಸಮಾಜದ ಗೌರವ ಸಲಹೆಗಾರ ಹರೀಶ್ ಬಂಟ್ವಾಳ ಹಾಗೂ ಬಾರ್ಬರ್ ಎಸೋಸಿಯೇಶನ್ ಅಧ್ಯಕ್ಷ ಪದ್ಮನಾಭ ಬಹುಮಾನ ವಿತರಿಸುವರು ಎಂದು ಸವಿತಾ ಸಮಾಜದ ಯುವಘಟಕದ ಪ್ರಕಟಣೆ ತಿಳಿಸಿದೆ. ಇಡೀ ದಿನ ವಿವಿಧ ಸ್ಫರ್ಧಾ ಕಾರ್ಯಕ್ರಮ ನಡೆಯಲಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel