ಸುಳ್ಯ: ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಪೌರ ಕಾರ್ಮಿಕರ ರಜೆಯ ಹಿನ್ನಲೆಯಲ್ಲಿ ದಿನದ ಸ್ವಚ್ಛತೆಗೆ ತೊಡಕಾಗದಂತೆ ಸುಳ್ಯದ ಸ್ವಚ್ಛ ನಗರ ತಂಡ ಸ್ವಚ್ಛತಾ ಕಾರ್ಯವನ್ನು ನೆರವೇರಿಸಿದರು. ಸುಳ್ಯ ಗಾಂಧೀನಗರದಿಂದ ಹಳೆಗೇಟಿನವರೆಗೆ ಸ್ವಚ್ಛ ನಗರ ಸುಳ್ಯ ತಂಡ ಬೆಳಿಗ್ಗೆ 6.30 ರಿಂದ 9 ಗಂಟೆಯವರೆಗೆ ಸ್ವಚ್ಛತಾ ಕಾರ್ಯ ನಡೆಸಿ ಪೌರ ಸೇವೆ ಮಾಡಿದರು. ಒಂದು ದಿನದ ಕಸವೂ ನಾಳೆಗೆ ಕಾರ್ಮಿಕರಿಗೆ ಹೊರೆಯಾಗಬಾರದು ಎಂಬ ಕಳಕಳಿಯಿಂದ ಈ ಕಾರ್ಯ ನಡೆಸಿದರು. ನಗರ ಪಂಚಾಯತ್ ನ ಅಧಿಕಾರಿಗಳೇ ವಾಹನ ಚಾಲಕರಾಗಿಯೂ ಸ್ವಚ್ಛತೆಯಲ್ಲೂ ತಮ್ಮನ್ನು ತೊಡಗಿಸಿಕೊಂಡರು.
ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ, ಆರೋಗ್ಯ ಅಧಿಕಾರಿ ರವಿ ಕೃಷ್ಣ, ಸ್ವಚ್ಛ ನಗರ ಸುಳ್ಯ ತಂಡದ ವಿನೋದ್ ಲಸ್ರಾದೋ ,ಲೋಕೇಶ್ ಗುಡ್ಡೆಮನೆ, ವಿಖ್ಯಾತ್ ಬಾರ್ಪಣೆ ಲೋಕೇಶ್ ಕೆರೆಮೂಲೆ, ಶರತ್, ನವೀನ ಕರುಂಬಯ್ಯ, ಎ.ಎಂ.ಭಟ್ , ಕೆ.ವಿ ಮನೋಹರ ,ಇಲ್ಯಾಸ್ ಅಜ್ಜಾವರ, ಸಿದ್ದಿಕ್ ಗೂನಡ್ಕ,ಶರೀಪ್ ಜಟ್ಟಿಪಳ್ಳ, ರಾಮಚಂದ್ರ ಪೆಲ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.
ಅಭಿವೃದ್ಧಿ ಸವಾಲುಗಳ ನಡುವೆಯೂ ದೇಶದ ಎಲ್ಲ ತೈಲ ಉತ್ಪಾದನಾ ಕಂಪನಿಗಳು 2045ರ ವೇಳೆಗೆ…
ಕಾಫಿ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ವಿಸ್ತರಣೆ, ಮಾರುಕಟ್ಟೆ ಅಭಿವೃದ್ಧಿಯಲ್ಲಿ ಕಾಫಿ ಮಂಡಳಿ…
ರೈತ ಉತ್ಪಾದಕ ಸಂಸ್ಥೆಗಳು ರೈತರು ಮತ್ತು ಇಲಾಖೆಯ ನಡುವೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ…
ದಕ್ಷಿಣ ಕನ್ನಡದ ಸುಳ್ಯದಲ್ಲಿ 40.4 ಡಿಗ್ರಿ ಸೆಲ್ಸಿಯಸ್, ಉಪ್ಪಿನಂಗಡಿಯಲ್ಲಿ 39.6, ಪಾಣೆ ಮಂಗಳೂರಿನಲ್ಲಿ …
ಕೃಷಿಯಲ್ಲಿ ತೊಡಗಿರುವವರಲ್ಲಿ ಶೇಕಡಾ 80ರಷ್ಟು ಮಂದಿ ಸಣ್ಣ ರೈತರು. ಈ ಸಮುದಾಯ ಮಾರುಕಟ್ಟೆ…
ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಹಾಗೂ ಕಾಡ್ಗಿಚ್ಚು ನಿರ್ವಹಣೆ…