ಜಿಲ್ಲೆ

ಸ್ವತಂತ್ರ ಕಡಬ ತಾಲೂಕು ಪಂಚಾಯತ್ ರಚನೆಗೆ ಸರಕಾರದ ಹಸಿರು ನಿಶಾನೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕಡಬ: ನೂತನ ಕಡಬ ತಾಲೂಕು ಉದ್ಘಾಟನೆಯಾಗಿ ಅನುಷ್ಠಾನ ಕಾರ್ಯಗಳು ಪ್ರಗತಿಯಲ್ಲಿರುವಂತೆಯೇ ಸ್ವತಂತ್ರ ಕಡಬ ತಾಲೂಕು ಪಂಚಾಯತ್ ರಚನೆಗೆ ಸರಕಾರವು ಹಸಿರುನಿಶಾನೆ ನೀಡಿದೆ.
ರಾಜ್ಯದಲ್ಲಿ ರಚನೆಯಾಗಿರುವ 50 ಹೊಸ ತಾಲೂಕುಗಳಲ್ಲಿ ಪ್ರತ್ಯೇಕ ತಾಲೂಕು ಪಂಚಾಯತ್ ವ್ಯವಸ್ಥೆಗಾಗಿ ಪ್ರತೀ ತಾಲೂಕಿಗೆ 14 ಹುದ್ದೆಗಳಂತೆ 700 ಹುದ್ದೆಗಳನ್ನು ಸೃಷ್ಟಿಯಾಗಲಿದ್ದು, ಈ ಕುರಿತು ಜೂ. 12 ರಂದು ಸರಕಾರ ಅಧಿಕೃತ ಆದೇಶ ಹೊರಡಿಸಿದೆ.
ಪ್ರಸ್ತುತ ಪುತ್ತೂರು ಹಾಗೂ ಸುಳ್ಯ ತಾಲೂಕು ಪಂಚಾಯತ್‍ನ ವ್ಯಾಪ್ತಿಯಲ್ಲಿರುವ ಕಡಬ ತಾಲೂಕಿಗೆ ಸೇರ್ಪಡೆಯಾಗಿರುವ ಒಟ್ಟು 42 ಗ್ರಾಮಗಳನ್ನೊಳಗೊಂಡ 13 ತಾಲೂಕು ಪಂಚಾಯತ್ ಕ್ಷೇತ್ರಗಳನ್ನು ಸೇರಿಸಿ ಹೊಸ ಕಡಬ ತಾಲೂಕು ಪಂಚಾಯತ್ ಕಾರ್ಯಾರಂಭಿಸಲಿದೆ. ಹೊಸ ತಾಲೂಕು ಪಂಚಾಯತ್ ಕಚೇರಿ ತೆರೆಯಲು ಲಭ್ಯವಿರುವ ಕಟ್ಟಡ, ಕಾದಿರಿಸಲಾಗಿರುವ ಜಮೀನು ಇತ್ಯಾದಿ ಮಾಹಿತಿಗಳನ್ನು ಈಗಾಗಲೇ ಸರಕಾರಕ್ಕೆ ಕಳುಹಿಸಲಾಗಿದ್ದು, ಹೊಸ ವ್ಯವಸ್ಥೆಗೆ ಕ್ಷೇತ್ರಗಳನ್ನು ವಿಂಗಡಿಸುವ ಸಲುವಾಗಿ ಅಧಿಸೂಚನೆ ಪ್ರಕಟಗೊಳ್ಳಲಿದೆ.

Advertisement
Advertisement

ಕಡಬ ತಾಲೂಕು ಪಂಚಾಯತ್‍ಗೆ ಸೇರ್ಪಡೆಯಾಗಲಿರುವ ಕ್ಷೇತ್ರಗಳು:

ಪುತ್ತೂರು ತಾಲೂಕಿನ ಕಡಬ (ಕಡಬ, ಕೋಡಿಂಬಾಳ), ಕುಟ್ರುಪ್ಪಾಡಿ (ನೂಜಿಬಾಳ್ತಿಲ, ರೆಂಜಿಲಾಡಿ, ಕುಟ್ರುಪ್ಪಾಡಿ), ಐತ್ತೂರು (ಐತ್ತೂರು, ಕೊಣಾಜೆ, ಬಂಟ್ರ, 102 ನೆಕ್ಕಿಲಾಡಿ), ಬಿಳಿನೆಲೆ (ಬಿಳಿನೆಲೆ, ಶಿರಾಡಿ, ಶಿರಿಬಾಗಿಲು, ಕೊಂಬಾರು), ಗೋಳಿತೊಟ್ಟು (ಗೋಳಿತೊಟ್ಟು, ಆಲಂತಾಯ, ಹಳೆನೇರೆಂಕಿ), ಚಾರ್ವಾಕ (ಕಾಣಿಯೂರು, ದೋಳ್ಪಾಡಿ, ಚಾರ್ವಾಕ, ಕಾಯಿಮಣ, ಕುದ್ಮಾರು), ಸವಣೂರು (ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಬೆಳಂದೂರು, ನೆಲ್ಯಾಡಿ (ನೆಲ್ಯಾಡಿ, ಕೊಣಾಲು), ಕೌಕ್ರಾಡಿ (ಕೌಕ್ರಾಡಿ, ಇಚ್ಲಂಪಾಡಿ, ಬಲ್ಯ), ಆಲಂಕಾರು (ಆಲಂಕಾರು, ಪೆರಾಬೆ, ಕುಂತೂರು), ರಾಮಕುಂಜ (ರಾಮಕುಂಜ, ಕೊೈಲ), ಸುಳ್ಯ ತಾಲೂಕಿನ ಸುಬ್ರಹ್ಮಣ್ಯ (ಸುಬ್ರಹ್ಮಣ್ಯ, ಏನೆಕಲ್ಲು, ಐನೆಕಿದು, ಬಲ್ಪ, ಕೇನ್ಯ) ಹಾಗೂ ಎಣ್ಮೂರು (ಎಣ್ಮೂರು, ಎಡಮಂಗಲ) ಕ್ಷೇತ್ರಗಳು ನೂತನ ಕಡಬ ತಾಲೂಕು ಪಂಚಾಯತ್‍ನ ವ್ಯಾಪ್ತಿಗೆ ಬರಲಿದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಕ್ರಮವಾಗಿ ಅಡಿಕೆ ಸಾಗಾಟ | ಮಿಜೋರಾಂನಲ್ಲಿ 386 ಚೀಲ ಅಡಿಕೆ ವಶಕ್ಕೆ ಪಡೆದ ಅಧಿಕಾರಿಗಳು

ಮಿಜೋರಾಂನ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ,…

6 hours ago

ಹವಾಮಾನ ವರದಿ | 13-06-2025 | ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಮುಂಗಾರು ಮಳೆ | ಜೂ.19 ರಿಂದ ಮಳೆಯ ಪ್ರಮಾಣ ಕಡಿಮೆ ಸಾಧ್ಯತೆ |

ಜೂನ್ 14 ರಿಂದ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಮುಂಗಾರು ಮಳೆ ಮುಂದುವರಿಯಲಿದ್ದು, ಜೂನ್…

14 hours ago

ಕರಾವಳಿ ಹಾಗೂ ರಾಜ್ಯದ ಹಲವೆಡೆ ಧಾರಾಕಾರ ಮಳೆ |

ಕರಾವಳಿ ಹಾಗೂ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ.ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಹಾಗೂ…

20 hours ago

ಈ ರಾಶಿಯವರ ಜಾತಕದಲ್ಲಿ ಗುರು ಬಲ | ಗಜಕೇಸರಿ ಯೋಗದಿಂದ ಸಕಲೈಶ್ವರ್ಯ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

21 hours ago

ಅಹಮದಾಬಾದ್​ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ

ಟೇಕ್ ಆಫ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿರುವ  ಘಟನೆ ಗುಜರಾತಿನ ಅಹಮದಾಬಾದ್​​ನಲ್ಲಿ…

2 days ago

ಹವಾಮಾನ ವರದಿ | 12-06-2025 | ಮುಂದೂಡಿದ ಭಾರೀ ಮಳೆ..! | ಜೂ.13 ರಿಂದ ಮುಂದುವರಿಯುವ ಮಳೆ |

ಜೂನ್ 13ರಿಂದ ಗಾಳಿಯ ಚಲನೆಯು ನೈರುತ್ಯದಿಂದ ಈಶಾನ್ಯಕ್ಕೆ ಬದಲಾಗುವ ಸಾಧ್ಯತೆಗಳಿರುವುದರಿಂದ ರಾಜ್ಯದ ವಿವಿದೆಡೆ…

2 days ago