ಹಿಂಗಾರು ಮಳೆ ಆರಂಭ : ಅತ್ಯಂತ ವೇಗವಾಗಿ ಹಿಂದೆ ಸರಿದ ನೈರುತ್ಯ ಮುಂಗಾರು

October 17, 2019
8:31 PM

ಹಿಂಗಾರು ಮಳೆ ಆರಂಭ ಇಡೀ ದೇಶದಿಂದ ನೈರುತ್ಯ ಮುಂಗಾರು ಮಳೆ ಹಿಂದೆ ಸರಿದಿದೆ. ರಾಜಸ್ಥಾನದ ವಾಯುವ್ಯ ಭಾಗದಿಂದ ಹಿಂದೆ ಸರಿಯುವಿಕೆ ಆರಂಭವಾದ ಕೇವಲ ಎಂಟು ದಿನಗಳಲ್ಲೇ ಅತ್ಯಂತ ವೇಗವಾಗಿ ಪೂರ್ತಿಯಾಗಿ ಹಿಂದೆ ಸರಿದಿರುವುದು ಒಂದು ಅಪರೂಪದ ವಿದ್ಯಮಾನವಾಗಿದೆ. ಇದರೊಂದಿಗೆ ಹಿಂಗಾರು ಮಳೆ ಕೂಡಾ ಪ್ರವೇಶಿಸಿದ್ದು , ನಿನ್ನೆ ದಿನ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಕೇರಳದ ಅನೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ನಿಮ್ನತೆಯೂ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮಳೆ ಹೀಗೇ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.

ಮಳೆಯ ಬಗ್ಗೆ ಪಿ ಜಿ ಎಸ್ ಎನ್ ಪ್ರಸಾದ್ ಅವರ ಮಾತುಕತೆ ಹೀಗಿದೆ…

ನಿನ್ನೆಯಿಂದ ಹಿಂಗಾರು ಮಳೆ ಆರಂಭವಾಗಿದೆ.
ಈ ಬಾರಿಯ ನೈರುತ್ಯ ಮುಂಗಾರು 120 ದಿನಗಳ ( ಜೂನ್ 19 – ಅ.15 ) ಅತ್ಯಂತ ಸುದೀರ್ಘ ಅವಧಿಯದ್ದಾಗಿ ಇತಿಹಾಸದ ಪುಟ ಸೇರಿತು.
ಈ ಅವಧಿಯಲ್ಲಿ ಸುರಿದ ಮಳೆ = 3913 ಮಿ.ಮೀ.( ಕಳೆದ ವರ್ಷ 4053 ಮಿ.ಮೀ.)

ಸರಾಸರಿ (ಮಿ.ಮೀ.ಗಳಲ್ಲಿ)
1976 – 2000 = 3390
2001 – 2019 = 3288
1976 – 2019 = 3346

> ಗರಿಷ್ಟ 1980 ರಲ್ಲಿ 4796
> ಕನಿಷ್ಟ 1987 ರಲ್ಲಿ 1741

> ಹಿಂಗಾರು ಮಳೆಯ ಸರಾಸರಿ 784 ಮಿ. ಮೀ ( 1976 -2018 )

> ಗರಿಷ್ಟ 1976 ರಲ್ಲಿ ದಾಖಲಾದ 1475 ಮಿ.ಮೀ.

ಕನಿಷ್ಟ 2017 ರಲ್ಲಿ 166 ಮಿ.ಮೀ.
> ಹೆಚ್ಚು ಕಡಿಮೆ ಈ ವರ್ಷದಷ್ಟೇ ಮುಂಗಾರು ಮಳೆ ಸುರಿದ 1990ರಲ್ಲಿ (3921 ಮಿ.ಮೀ.) ಮುಂಗಾರುಪೂರ್ವ 213 ಮಿ.ಮೀ
ಹಿಂಗಾರು 773 ಮಿ.ಮೀ ನೊಂದಿಗೆ 4907 ಮಿ.ಮಿ.ದಾಖಲಾಗಿತ್ತು.

> ಇನ್ನೊಂದು ಸಂದರ್ಭ 2013
ಮುಂಗಾರು ಪೂರ್ವ 395 ಮಿ.ಮೀ.
ಮುಂಗಾರು 3818 ಮಿ.ಮೀ
ಹಿಂಗಾರು 662 ಮಿ.ಮೀ
ಒಟ್ಟು 4875 ಮಿ ಮೀ.

> ಹಾಗಾದರೆ ಈ ವರ್ಷದ ಹಿಂಗಾರು ಮಳೆ… ಕಾದು ನೋಡೋಣ

 ಪಿ ಜಿ ಎಸ್ ಎನ್ ಪ್ರಸಾದ್ ಬಾಳಿಲ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಾಪುವಿನಲ್ಲಿ ಆಹ್ವಾನಿತರ ಮುಕ್ತ ಚೆಸ್ ಸ್ಪರ್ಧೆ ಯಶಸ್ವಿ – ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಆಯೋಜನೆ
June 9, 2026
11:58 PM
by: ಮಿರರ್‌ ಡೆಸ್ಕ್
ಭಾರತದ 365 ಆಹಾರ ಉತ್ಪನ್ನಗಳಲ್ಲಿ ಕೀಟನಾಶಕ, ಭಾರೀ ಲೋಹಗಳ ಅವಶೇಷ ಪತ್ತೆ..!
June 9, 2026
11:32 PM
by: ದ ರೂರಲ್ ಮಿರರ್.ಕಾಂ
ನೇಪಾಳದಿಂದ ಭಾರತೀಯ ಮಾವಿನ ಹಣ್ಣಿಗೆ ನಿರ್ಬಂಧ – ಕೀಟನಾಶಕ ಅಂಶಗಳು ಪತ್ತೆ ಹಿನ್ನೆಲೆ ಕ್ರಮ
June 9, 2026
11:18 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಹಳದಿ ಎಲೆ, ಎಲೆ ಚುಕ್ಕಿ ರೋಗಕ್ಕೆ ತುರ್ತು ಪರಿಹಾರಕ್ಕೆ ಒತ್ತಾಯ – ಕೇಂದ್ರ ಕೃಷಿ ಸಚಿವರಿಗೆ ಸಂಸದ ಬ್ರಿಜೇಶ್ ಚೌಟ ಮನವಿ
June 9, 2026
10:55 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror