Advertisement
ಸುದ್ದಿಗಳು

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಾಷ್ಟ್ರೀಯ ಹಿಂದೂ ಆಂದೋಲನ

Share
ಪುತ್ತೂರು: ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದೂ ಸಂಘಟನೆಗಳ  ವತಿಯಿಂದ ರಾಷ್ಟ್ರೀಯ ಹಿಂದೂ ಆಂದೋಲನ ಪುತ್ತೂರಿನ  ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದೂ ಸಂಘಟನೆಗಳ ವತಿಯಿಂದ ರಾಷ್ಟ್ರೀಯ ಹಿಂದೂ ಆಂದೋಲನವನ್ನು ನಡೆಯಿತು.
ಹಿಂದೂ ಮುಖಂಡ ಜನಾರ್ದನ ಗೌಡ  ಮಾತನಾಡಿ ದೇಶದ ಅಖಂಡತೆಯಲ್ಲಿ ಅಡೆತಡೆಯಾಗಿದ್ದ ಮತ್ತು ವಿಭಜನೆಯ ಬೀಜವನ್ನು ಬಿತ್ತಿದ ಜಮ್ಮೂ-ಕಾಶ್ಮೀರದ ‘ನಿಯಮ 370′ ಮತ್ತು ’35-ಅ’ ರದ್ದುಪಡಿಸುವ ಐತಿಹಾಸಿಕ ನಿರ್ಣಯವನ್ನು ಕೇಂದ್ರದ ಭಾಜಪ ಸರಕಾರವು ತೆಗೆದುಕೊಂಡಿದೆ.ಇದಕ್ಕಾಗಿ ಅಭಿನಂದನೆಗಳು. ಕನ್ನಡ ವಿರೋಧಿ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರನ್ನು ಬದಲಾಯಿಸಿ  ಶ್ರೀ ಕೃಷ್ಣರಾಜ ಒಡೆಯರ್  ಹೆಸರನ್ನು ಇಡಬೇಕು ಎಂದು ಒತ್ತಾಯಿಸಿದರು. ಹಿಂದೂ ಸಮಾಜದ ವಿರುದ್ಧ ದ್ವೇಷದ ಭಾವನೆಯನ್ನು ಈಚೆಗೆ  ಹರಡಲಾಗುತ್ತಿದೆ. ರಾಷ್ಟ್ರದ ಔರಂಗಾಬಾದ, ಉತ್ತರಪ್ರದೇಶದ ಚಂದೌಲಿ ಮತ್ತು ಉನ್ನಾವದಲ್ಲಿ ಸ್ಥಳೀಯ ಪೊಲೀಸರ ಮೂಲಕ ನಡೆಸಲಾದ ವಿಚಾರಣೆಯಲ್ಲಿ  ಈ ದೂರುಗಳು ಸುಳ್ಳಾಗಿವೆಯೆಂದು ಬಹಿರಂಗವಾಗಿದೆ.  ಈ ಪ್ರಕರಣದಲ್ಲಿ ಉತ್ತರಪ್ರದೇಶದ ಪೊಲೀಸ ಮಹಾಅಧೀಕ್ಷಕರಾದ ಒ.ಪಿ.ಸಿಂಗ್ ಇವರು ‘ಉತ್ತರಪ್ರದೇಶದಲ್ಲಿ ಮತೀಯ ಗಲಭೆಯನ್ನು  ಹರಡಲು ಮತಾಂಧರು ‘ಜಯ ಶ್ರೀರಾಮ’ ಘೋಷಣೆಯನ್ನು ಹೇಳದ ಸುಳ್ಳು ಕಾರಣವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಅದಕ್ಕಾಗಿ ಇಂತಹವರ ವಿರುದ್ಧ ರಾಷ್ಟ್ರಮಟ್ಟದಲ್ಲಿ ಒಂದು ವಿಶೇಷ ತನಿಖಾದಳವನ್ನು  ರಚಿಸಬೇಕು ಮತ್ತು ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು” ಎಂದು ವಿಷಯವನ್ನು ಮಂಡಿಸಿದರು.
ಪುತ್ತೂರು ವಿಶ್ವಹಿಂದೂ ಪರಿಷತ್ತಿನ ಪ್ರಖಂಡ ಅಧ್ಯಕ್ಷರು  ಜನಾರ್ದನ ಲಕ್ಷ್ಮೀ ದೇವೀ ಬೆಟ್ಟ ಇವರು ಮಾತನಾಡಿ 370 ಮತ್ತು 35 ಅ ಇದು ಭಾರತಾಂಬೆಯ 70ವರ್ಷಗಳಿಂದ ಕೊರಳಿಗೆ ಕಟ್ಟಿದ ಹಗ್ಗವಾಗಿತ್ತು. ಶ್ರೀ ರಾಮ ಮತ್ತು ಶ್ರೀ ಕೃಷ್ಣನ ಆದರ್ಶವನ್ನು ಇಟ್ಟುಕೊಂಡ ಸರಕಾರವು  ಅದನ್ನು ತೆಗೆದು ಹಾಕಿದ್ದು ಇದು ದೇಶಕ್ಕೆ ಸಿಕ್ಕ ಐತಿಹಾಸಿಕ  ಗೆಲುವಾಗಿದೆ..
ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಆದರ್ಶವನ್ನು ಇಟ್ಟು ಮೈಸೂರು- ಬೆಂಗಳೂರು ನಡುವೆ ರೈಲಿಗೆ ಸ್ವಾತಂತ್ರ್ಯ ಹೋರಾಟಗಾರರ  ಹೆಸರನ್ನು ಇಡಬೇಕು..ಹಾಗೆಯೇ ನಿರಾಶ್ರಿತ ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಬೇಕು.ಹಗರಣಗಳು ಮತ್ತು ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ಚರ್ಚ್ ಗಳನ್ನು ಸರಕಾರೀಕರಣಗೊಳಿಸಬೇಕು” ಎಂದು ವಿಷಯವನ್ನು ಮಂಡಿಸಿದರು.
ಆಂದೋಲನವನ್ನು .ದಯಾನಂದ ಹೆಗ್ಡೆ ಇವರು ಶಂಖನಾದ ಮಾಡುವ ಮೂಲಕ ಪ್ರಾರಂಭಿಸಿದರು. ಕು.ಚೇತನಾ ಇವರು ಆಂದೋಲನವನ್ನು ನಿರೂಪಿಸಿದರು.
ಆಂದೋಲನದ ವಿಷಯದ ಕುರಿತು ಮಾನ್ಯ ಉಪವಿಭಾಗಾಧಿಕಾರಿಗಳಾದ ಹೆಚ್.ಕೆ.ಕೃಷ್ಣಮೂರ್ತಿ, ಇವರ ಮೂಲಕ ಕೇಂದ್ರ ಗೃಹಸಚಿವರು ಮತ್ತು ಪ್ರಧಾನಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಚಂದ್ರಶೇಖರ , ಧರ್ಮಪ್ರೇಮಿಗಳಾದ ಲಕ್ಷ್ಮಣ ಬೆಳ್ಳಿಪಾಡಿ,ಮಾಧವ ಎಸ್.ರೈ ಕುಂಬ್ರ, ಸೀತಾರಾಮ ಆಳ್ವ,  ಗಣೇಶ್ ನಾಯಕ್, ಸುರೇಶ್ ಪ್ರಭು, ಗೋಪಾಲ ನಾಯಕ್ ,ಕೃಷ್ಣ ಶೆಟ್ಟಿ ಇವರು ಉಪಸ್ಥಿತಿತರಿದ್ದರು.
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…

7 hours ago

ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…

7 hours ago

ಹವಾಮಾನ ವರದಿ | 24-02-2025 | ಫೆ.28 ರಂದು ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ |

ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

7 hours ago

ಹವಾಮಾನ ವರದಿ | 23-02-2025 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

1 day ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

3 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

4 days ago