Advertisement
ಅನುಕ್ರಮ

*ಹುಚ್ಚನು ನಾನಲ್ಲ…*

Share
ಹುಟ್ಟಿದಾಗ ಹುಚ್ಚನು ನಾನಲ್ಲ..
ನನ್ನಂತ ಸುಖಿ ಬೇರಾರು ಇರಲಿಲ್ಲ..
ಕಣ್ಣಿಗೆ ಕಂಡದ್ದನ್ನೇ ಸತ್ಯ ಅಂದುಕೊಂಡೆ ನಾನು
ಸುಖವೂ ಹೋಗಿ ದುಃಖ ಬಂತು ಮೋಸ ಹೋದೆ ನಾನು ||1||
ಜನರಾರು ಸೇರಿಸಲಿಲ್ಲ ಅವರ ಹತ್ತಿರ ನನ್ನನು
ಬೀದಿಯಲ್ಲಿ ಹುಚ್ಚನಾಗಿ ಅಲೆದಾಡಿದೆ ನಾನು
ನಾಯಿತಿಂದುಳಿದ ಆಹಾರವೇ ಮೃಷ್ಟಾನ್ನವೆಂದುಕೊಂಡೆ
ಹರಕಲು‌‌ಗೋಣಿಯಿಂದ ಮಾನ ಮುಚ್ಚಿಕೊಂಡೆ ||2||
ಹುಟ್ಟುತ್ತಾ ನಾನು ಹುಚ್ಚನಲ್ಲ,ಜನ ನನ್ನ ಹುಚ್ಚ ಅಂದ್ರು
ನನ್ನವರೇ ನನ್ನ ಬೀದಿಗಟ್ಟಿ, ಇದೇ ನಿನ್ನ ಜಾಗ ಅಂದ್ರು
ಪುಟಾಣಿ ಮಕ್ಕಳು‌‌ ನನ್ನ ನೋಡಿ ಕಲ್ಲು ಹೊಡೆದು ಬಿಟ್ರು
ಹಣೇಲಿ ಸುರಿದ ರಕ್ತ ನೋಡಿ,ಜನ ಕೇಕೇ ಹಾಕಿ ನಕ್ರು ||3||
ಹುಟ್ಟುತ್ತಾ ನಾನು ಹುಚ್ಚನಲ್ಲ,ನಿಮ್ಮಂತೆ ನಾನಿದ್ದೆ ಅಂದೆ
ಯಾರಿಗೂ ನನ್ನ ಮಾತು ಕೇಳಲೇ ಇಲ್ಲ
ಧಾರಕಾರ ಸುರಿದ  ಮಳೆಯಲಿ ಕಣ್ಣೀರು ಕೂಡಿ ಹೋಯ್ತು
ಒಂದಿಬ್ಬರು ಸಾಂತ್ವಾನ ಕೇಂದ್ರ ಸೇರಿಸಿ ಬಿಟ್ರು ||4||
ಹುಚ್ಚನಾದ ನಾನು ಮತ್ತೆ ಎಲ್ಲರಂತಾಗಿ ಬಿಟ್ಟೆ
ಜನ ಮತ್ತೆ ನನ್ನ ಸೇರಿಸ್ಕೋತಾರೆ ಅಂದುಕೊಂಡು ಬಿಟ್ಟೆ
ಎಲ್ರೂ ಮತ್ತೆ ಹುಚ್ಚ ಎಂದು ಕರೆದು ಬಿಟ್ರು
ಹುಚ್ಚ ಅನ್ನೋ ಹೆಸರೇ ನನಗೆ ಖಾಯಂ ಆಗೋಯ್ತು… ||5||
‌‌
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಬಿ.ಎಸ್‌ಸಿ. ಕೃಷಿ ನಂತರ ಏನು ? ಉದ್ಯೋಗ, ಉದ್ಯಮ ಮತ್ತು ಉನ್ನತ ಶಿಕ್ಷಣದ ಅತ್ಯುತ್ತಮ ಅವಕಾಶಗಳು ಇಲ್ಲಿವೆ

ಬಿ.ಎಸ್‌ಸಿ. ಕೃಷಿ ಪದವೀಧರರಿಗೆ ಸರ್ಕಾರಿ ಉದ್ಯೋಗ, ಖಾಸಗಿ ಕಂಪನಿಗಳು, ಬ್ಯಾಂಕಿಂಗ್, ಸಂಶೋಧನೆ ಮತ್ತು…

2 hours ago

ಅಡಿಕೆ–ಕಾಳುಮೆಣಸು ಬೆಳೆ ವಿಮೆ: ರೈತರ ನೋಂದಣಿಗೆ ಆ.17 ಅಂತಿಮ ದಿನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆ…

2 hours ago

ಹವಾಮಾನ ವರದಿ | 10.08.2026 | ಕರ್ನಾಟಕದಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆ; ಆಗಸ್ಟ್‌ 12ರಂದು ಕರಾವಳಿಯಲ್ಲಿ ಮಳೆ ಹೆಚ್ಚಳ ಸಾಧ್ಯತೆ

ಮಧ್ಯಪ್ರದೇಶದಲ್ಲಿ ಹೊಸ ತಿರುವಿಕೆ ಪರಿಣಾಮ: ಕರಾವಳಿ, ಮಲೆನಾಡಿನಲ್ಲಿ ಮಳೆ ಚುರುಕು ಸಾಧ್ಯತೆ ಕರ್ನಾಟಕದ…

17 hours ago

ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ

ಕಡಿಮೆ ಸಂಪನ್ಮೂಲ ಬಳಸಿ ಹೆಚ್ಚು ಉತ್ಪಾದನೆ ಪಡೆಯಲು ಸ್ಮಾರ್ಟ್ ಸಂಪನ್ಮೂಲ ನಿರ್ವಹಣೆ ಅಗತ್ಯವಾಗಿದೆ.…

1 day ago

ಬರದತ್ತ ಇಂಗ್ಲೆಂಡ್‌ – ಆಹಾರ ಕೊರತೆ, ಕಾಡ್ಗಿಚ್ಚಿನ ಎಚ್ಚರಿಕೆ – ಕೃಷಿಗೆ ಭಾರಿ ಹೊಡೆತ – ರೈತರಿಗೆ ₹4,400 ಕೋಟಿ ನಷ್ಟದ ಅಂದಾಜು

ತೀವ್ರ ಬರ ಮತ್ತು ಉಷ್ಣಾಂಶದಿಂದ ಇಂಗ್ಲೆಂಡ್‌ನಲ್ಲಿ ಕೃಷಿ ಉತ್ಪಾದನೆ ಕುಸಿದಿದ್ದು, ಆಹಾರ ಕೊರತೆ…

1 day ago

ಹವಾಮಾನ ವರದಿ | 09.08.2026 | ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ ಕ್ಷೀಣ; ಆಗಸ್ಟ್‌ 11ರಿಂದ ಮಲೆನಾಡಿನಲ್ಲೂ ಮಳೆ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಸಣ್ಣ ಅವಧಿಯ ಸಾಮಾನ್ಯ ಮಳೆ ಮಾತ್ರ; ಮಲೆನಾಡಿನಲ್ಲಿ ಮಳೆ ಕಡಿಮೆಯಾಗುವ…

2 days ago