ಯಕ್ಷಗಾನ : ಮಾತು-ಮಸೆತ

ಹುಟ್ಟಿದವರು ಸಾಯ್ತಾರೆ….. ಈ ತತ್ವದಿಂದ ಬದುಕಿದರೆ ಅದು ಬದುಕಾಗುವುದಿಲ್ಲ…..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶೂರಪದ್ಮ’)
ಪ್ರಸಂಗ : ಕುಮಾರ ವಿಜಯ

Advertisement
Advertisement

(ಸಂದರ್ಭ : ಷಣ್ಮುಖ ಮತ್ತು ಶೂರಪದ್ಮ ಯುದ್ಧದ ಸನ್ನಿವೇಶ)

“.. ಮರಣವೇನು? ಸಾಮಾನ್ಯ. ಹುಟ್ಟಿದವರು ಸಾಯ್ತಾರೆ. ಈ ತತ್ವದಿಂದ ಬದುಕಿದರೆ ಅದು ಬದುಕಾಗುವುದಿಲ್ಲ. ಯುದ್ಧ…. ಯುದ್ಧದಲ್ಲಿ ಸತ್ತವನೂ ಸೋತವನಲ್ಲ. ಯುದ್ಧದಲ್ಲಿ ಬದುಕಿದವನು ಮಾತ್ರ ಗೆದ್ದವನೂ ಅಲ್ಲ. ಹೋರಾಟ…. ಆನುವಂಶಿಕತೆಯಿಂದ ಬಂದದ್ದದು. ರಕ್ತಗತವಾದ ದೇವತೆಗಳಲ್ಲಿ ದ್ವೇಷ. ಇಲ್ಲದಿದ್ದರೆ ‘ಸುರ-ಅಸುರ’ ಎಂಬ ವಿರುದ್ಧವಾದ ಸಂಘರ್ಷಾತ್ಮಕವಾದಂತಹ ಪದ ಹುಟ್ಟುತ್ತಲೇ ಇರಲಿಲ್ಲ. ಅವರಿದ್ದಲ್ಲಿ ನಾವಿಲ್ಲ ಎಂದರ್ಥ….

ಭಾಪುರೇ… ಕುಮಾರನೆಂದು ನಿನ್ನ ಹೆಸರು. ಆಕೃತಿಯೂ ಕುಮಾರನದ್ದು. ಅಯ್ಯಾ…. ಕೌಮಾರ, ಇಷ್ಟು ವಿಜೃಂಭಿಸಿದರೆ ಬಹುಶಃ ಮುಂದಿನದ್ದು ಕಳೆಗುಂದುತ್ತದೋ ಎಂಬ ಸಂದೇಹ ನನಗಿದೆ. ಬಾಲ್ಯ, ಕೌಮಾರ – ಇದು ಮುಂದಿನದ್ದಾದಂತಹ ಜೀವನದ ಯೌವನ, ವಾರ್ಧಕ್ಯಕ್ಕೆ ಪೋಷಕವಾಗಬೇಕು, ಪೂರಕವಾಗಬೇಕು. ಅವಾಗ ಮಾಡಬೇಕಾದ್ದು ಸಂಗ್ರಹ, ನಿಗ್ರಹವಲ್ಲ. ಚಿಂತಿಲ್ಲ. ಎಳೆಯ ವಯಸ್ಸಿನಲ್ಲಿ ನೀನು ಮಾಡಿದಂತಹ ಅದ್ಭುತ ಪರಾಕ್ರಮಗಳನ್ನೆಲ್ಲಾ ಕಂಡಾಗ ನನ್ನ ವಿರೋಧಿ ಸ್ಥಾನದಲ್ಲಿ ನೀನು ನಿಂತರೂ ಕೂಡಾ ವೀರರಸ ಪ್ರಧಾನವಾದಂತಹ ಯಾವುದೇ ಕಥಾನಕವನ್ನು ತಾಳಿ ರೋಮಾಂಚನಗೊಳ್ಳುವ ನನ್ನ ಜಾಯಮಾನದಿಂದ ನಿನ್ನನ್ನು ನಾನು ಮೆಚ್ಚುತ್ತೇನೆ.

ಏನಯ್ಯಾ… ಈ ಮರಣ ಎನ್ನುವುದು ನನ್ನಂತಹ ಜೀವರಿಗೆ ಮಹಾನವಮಿ, ಉತ್ಸವ! ‘ಹೇಗಾದರೂ ಸಾಯಕೂಡದು’ ಎಂಬುದು ನನ್ನ ಹಠ. ನಮ್ಮಂತಹ ಯೋಧರಿಗೆ ಜೀವನವೇ ಒಂದು ಸಂಗ್ರಾಮ. ಭೂಮಿಯಾದ್ದರಿಂದ, ಆ ಸಂಗ್ರಾಮ ಭೂಮಿ ಕೊನೆಯ ಉಸಿರಿನಲ್ಲಿ ಈ ರೀತಿಯ ಹೋರಾಟ ಭೂಮಿಯಾಗಿ, ರಕ್ತದಲ್ಲಿ ವಿರೋಧಿಯ ಆಯುಧದಿಂದ ಗತಪ್ರಾಣನಾದರೆ, ಶಾಸ್ತ್ರ ಹೌದಾಗಿದ್ದರೆ ಯುದ್ಧದಲ್ಲಿ ಸತ್ತವರು ಮರಳಿ ಹುಟ್ಟುವುದಿಲ್ಲ. ಜೈಸಿದರಂತೂ ‘ಇಹ’ ಉಂಟು. ಸತ್ತರೆ ‘ಪರ’ ಮಾತ್ರ. ಇಹ-ಪರ ಎರಡನ್ನೂ ಸಾಧಿಸುವ ಸಾಧನೆ ನನ್ನದು….”

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ರಾಜ್ಯದಲ್ಲಿ 15 ಬಗೆಯ ಔಷಧಗಳು, ಸೌಂದರ್ಯ ವರ್ಧಕಗಳ ಬಳಕೆಗೆ ನಿಷೇಧ

ರಾಜ್ಯದಲ್ಲಿ ಮಾರಾಟವಾಗುವ 15 ಬಗೆಯ ಔಷಧಗಳು ಹಾಗೂ ಸೌಂದರ್ಯ ವರ್ಧಕಗಳು ಪ್ರಾಮಾಣಿಕೃತ ಗುಣಮಟ್ಟದಲ್ಲಿ…

55 minutes ago

ಬಾಹ್ಯಾಕಾಶ ಕೇಂದ್ರ ತಲುಪಿದ ಶುಭಾಂಶು ಶುಕ್ಲ | ಬಾಹ್ಯಾಕಾಶದಲ್ಲಿ ಧಾರವಾಡದ ಹೆಸರು, ಮೆಂತೆಕಾಳು

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್-4 ಮಿಷನ್…

1 hour ago

ರಾಜ್ಯದ ವಿವಿಧೆಡೆ ಧಾರಾಕಾರ ಮಳೆ | ಕೊಡಗಿನಲ್ಲಿ ವ್ಯಾಪಕ ಮಳೆ | ಕೆ ಆರ್ ಎಸ್ ಅಣೆಕಟ್ಟು ಭರ್ತಿ | ಶಿರಾಡಿ ಸಂಚಾರ ಸಂಕಷ್ಟ |

ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕೊಡಗಿನಲ್ಲಿ…

1 hour ago

ಅಮ್ಮನ ಪ್ರೀತಿಗೆ ಎಣೆಯುಂಟೇ?

ಭಾರತದ ವೈಜ್ಞಾನಿಕ ಸಾಧನೆಯ ಗೌರವವನ್ನು ಮತ್ತಷ್ಟು ಎತ್ತರಕ್ಕೇರಿಸುವ ಮಾನವ ಸಹಿತವಾದ ಗಗನಯಾನದ ನೌಕೆ…

1 hour ago

ಬೆಳಗಾವಿಯಲ್ಲಿ ಧಾರಾಕಾರ ಮಳೆ | ವ್ಯಾಪಕವಾಗಿ ಕೃಷಿಗೆ ಹಾನಿ

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಹಾರಾಷ್ಟ್ರದ…

15 hours ago

ಪುತ್ತೂರಿನಲ್ಲಿ ಜೂನ್ 30 ರಿಂದ ಜುಲೈ 6 ರ ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ | ‘ಕುರಿಯ ಪ್ರಶಸ್ತಿ’ ಪ್ರದಾನ

ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ …

16 hours ago