Advertisement
ಯಕ್ಷಗಾನ : ಮಾತು-ಮಸೆತ

ಹುಟ್ಟಿದವರು ಸಾಯ್ತಾರೆ….. ಈ ತತ್ವದಿಂದ ಬದುಕಿದರೆ ಅದು ಬದುಕಾಗುವುದಿಲ್ಲ…..

Share

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶೂರಪದ್ಮ’)
ಪ್ರಸಂಗ : ಕುಮಾರ ವಿಜಯ

(ಸಂದರ್ಭ : ಷಣ್ಮುಖ ಮತ್ತು ಶೂರಪದ್ಮ ಯುದ್ಧದ ಸನ್ನಿವೇಶ)

“.. ಮರಣವೇನು? ಸಾಮಾನ್ಯ. ಹುಟ್ಟಿದವರು ಸಾಯ್ತಾರೆ. ಈ ತತ್ವದಿಂದ ಬದುಕಿದರೆ ಅದು ಬದುಕಾಗುವುದಿಲ್ಲ. ಯುದ್ಧ…. ಯುದ್ಧದಲ್ಲಿ ಸತ್ತವನೂ ಸೋತವನಲ್ಲ. ಯುದ್ಧದಲ್ಲಿ ಬದುಕಿದವನು ಮಾತ್ರ ಗೆದ್ದವನೂ ಅಲ್ಲ. ಹೋರಾಟ…. ಆನುವಂಶಿಕತೆಯಿಂದ ಬಂದದ್ದದು. ರಕ್ತಗತವಾದ ದೇವತೆಗಳಲ್ಲಿ ದ್ವೇಷ. ಇಲ್ಲದಿದ್ದರೆ ‘ಸುರ-ಅಸುರ’ ಎಂಬ ವಿರುದ್ಧವಾದ ಸಂಘರ್ಷಾತ್ಮಕವಾದಂತಹ ಪದ ಹುಟ್ಟುತ್ತಲೇ ಇರಲಿಲ್ಲ. ಅವರಿದ್ದಲ್ಲಿ ನಾವಿಲ್ಲ ಎಂದರ್ಥ….

ಭಾಪುರೇ… ಕುಮಾರನೆಂದು ನಿನ್ನ ಹೆಸರು. ಆಕೃತಿಯೂ ಕುಮಾರನದ್ದು. ಅಯ್ಯಾ…. ಕೌಮಾರ, ಇಷ್ಟು ವಿಜೃಂಭಿಸಿದರೆ ಬಹುಶಃ ಮುಂದಿನದ್ದು ಕಳೆಗುಂದುತ್ತದೋ ಎಂಬ ಸಂದೇಹ ನನಗಿದೆ. ಬಾಲ್ಯ, ಕೌಮಾರ – ಇದು ಮುಂದಿನದ್ದಾದಂತಹ ಜೀವನದ ಯೌವನ, ವಾರ್ಧಕ್ಯಕ್ಕೆ ಪೋಷಕವಾಗಬೇಕು, ಪೂರಕವಾಗಬೇಕು. ಅವಾಗ ಮಾಡಬೇಕಾದ್ದು ಸಂಗ್ರಹ, ನಿಗ್ರಹವಲ್ಲ. ಚಿಂತಿಲ್ಲ. ಎಳೆಯ ವಯಸ್ಸಿನಲ್ಲಿ ನೀನು ಮಾಡಿದಂತಹ ಅದ್ಭುತ ಪರಾಕ್ರಮಗಳನ್ನೆಲ್ಲಾ ಕಂಡಾಗ ನನ್ನ ವಿರೋಧಿ ಸ್ಥಾನದಲ್ಲಿ ನೀನು ನಿಂತರೂ ಕೂಡಾ ವೀರರಸ ಪ್ರಧಾನವಾದಂತಹ ಯಾವುದೇ ಕಥಾನಕವನ್ನು ತಾಳಿ ರೋಮಾಂಚನಗೊಳ್ಳುವ ನನ್ನ ಜಾಯಮಾನದಿಂದ ನಿನ್ನನ್ನು ನಾನು ಮೆಚ್ಚುತ್ತೇನೆ.

ಏನಯ್ಯಾ… ಈ ಮರಣ ಎನ್ನುವುದು ನನ್ನಂತಹ ಜೀವರಿಗೆ ಮಹಾನವಮಿ, ಉತ್ಸವ! ‘ಹೇಗಾದರೂ ಸಾಯಕೂಡದು’ ಎಂಬುದು ನನ್ನ ಹಠ. ನಮ್ಮಂತಹ ಯೋಧರಿಗೆ ಜೀವನವೇ ಒಂದು ಸಂಗ್ರಾಮ. ಭೂಮಿಯಾದ್ದರಿಂದ, ಆ ಸಂಗ್ರಾಮ ಭೂಮಿ ಕೊನೆಯ ಉಸಿರಿನಲ್ಲಿ ಈ ರೀತಿಯ ಹೋರಾಟ ಭೂಮಿಯಾಗಿ, ರಕ್ತದಲ್ಲಿ ವಿರೋಧಿಯ ಆಯುಧದಿಂದ ಗತಪ್ರಾಣನಾದರೆ, ಶಾಸ್ತ್ರ ಹೌದಾಗಿದ್ದರೆ ಯುದ್ಧದಲ್ಲಿ ಸತ್ತವರು ಮರಳಿ ಹುಟ್ಟುವುದಿಲ್ಲ. ಜೈಸಿದರಂತೂ ‘ಇಹ’ ಉಂಟು. ಸತ್ತರೆ ‘ಪರ’ ಮಾತ್ರ. ಇಹ-ಪರ ಎರಡನ್ನೂ ಸಾಧಿಸುವ ಸಾಧನೆ ನನ್ನದು….”

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಹವಾಮಾನ ವರದಿ | 06-06-2026 | ಮುಂಗಾರು ಬಂದರೂ ಮಳೆ ಇಲ್ಲ! – ಕರ್ನಾಟಕದಲ್ಲಿ ಮುಂದಿನ ವಾರದ ಹವಾಮಾನ ಹೇಗಿರಲಿದೆ?

ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದರೂ ಅದರ ಬಲ ಇನ್ನೂ ದುರ್ಬಲವಾಗಿದೆ. ಕರಾವಳಿಯಲ್ಲಿ ಜೂನ್ 8ರಿಂದ…

7 hours ago

ಭಾರತದ ಚೆಸ್ ಇತಿಹಾಸದಲ್ಲಿ ಹೊಸ ಅಧ್ಯಾಯ – ನಾರ್ವೆ ಚೆಸ್ ಕಿರೀಟ ಗೆದ್ದ ಮೊದಲ ಭಾರತೀಯ ಪ್ರಜ್ಞಾನಂದ

ನಾರ್ವೆ ಚೆಸ್ 2026 ಟೂರ್ನಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಇತಿಹಾಸವನ್ನು…

11 hours ago

ಜೇನುಗೂಡುಗಳ ಕೊರತೆಯಿಂದ ಪರಾಗಸ್ಪರ್ಶ ವ್ಯವಸ್ಥೆ ಮೇಲೆ ಪರಿಣಾಮ ; ಕೃಷಿ ಕ್ಷೇತ್ರದಲ್ಲಿ ಆತಂಕ – ಆಹಾರ ಬೆಳೆ ಉತ್ಪಾದನೆಗೆ ಸಂಕಷ್ಟದ ಎಚ್ಚರಿಕೆ

ಆಸ್ಟ್ರೇಲಿಯಾದಲ್ಲಿ ವರೋವಾ ಮೈಟ್ ಹಾವಳಿಯಿಂದ ಜೇನುನೊಣಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದ್ದು, ಆಹಾರ ಬೆಳೆಗಳ…

22 hours ago

ಕಾಸರಗೋಡು ಜಿಲ್ಲೆಯಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ – ರೆಡ್ ಅಲರ್ಟ್ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮ

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜೂನ್ 6ರಂದು ಕಾಸರಗೋಡು ಜಿಲ್ಲೆಯ ಎಲ್ಲಾ ಶಿಕ್ಷಣ…

23 hours ago

ಮಲೆನಾಡಿನ ಸಂಕಷ್ಟವೇ ಅವಕಾಶವಾಗಬಹುದೇ? : ‘ನಿರಪೇಕ್ಷಿತ ಕಾಡು ಕೃಷಿ’ ಹೊಸ ಪರಿಕಲ್ಪನೆ

ಮಲೆನಾಡಿನ ಕೃಷಿ ಸಮಸ್ಯೆಗಳನ್ನು ಪ್ರವಾಸೋದ್ಯಮದ ಅವಕಾಶಗಳಾಗಿ ಪರಿವರ್ತಿಸುವ ಹೊಸ ಪರಿಕಲ್ಪನೆಯನ್ನು ಪ್ರಬಂಧ ಅಂಬುತೀರ್ಥ…

24 hours ago

ನಿಷೇಧಿತ ಗುಟ್ಕಾ ಮಾರಾಟಕ್ಕೆ ಕಡಿವಾಣ | FDA ದಾಳಿ, 14 ಮಂದಿ ಬಂಧನ – ₹32 ಲಕ್ಷ ಮೌಲ್ಯದ ವಸ್ತು ವಶ

ಮಹಾರಾಷ್ಟ್ರ FDA ದಾಳಿಯಲ್ಲಿ 14 ಮಂದಿ ಬಂಧನವಾಗಿದ್ದು, ₹32 ಲಕ್ಷ ಮೌಲ್ಯದ ನಿಷೇಧಿತ…

1 day ago