Advertisement
ಯಕ್ಷಗಾನ : ಮಾತು-ಮಸೆತ

ಹುಟ್ಟಿದವರು ಸಾಯ್ತಾರೆ….. ಈ ತತ್ವದಿಂದ ಬದುಕಿದರೆ ಅದು ಬದುಕಾಗುವುದಿಲ್ಲ…..

Share

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶೂರಪದ್ಮ’)
ಪ್ರಸಂಗ : ಕುಮಾರ ವಿಜಯ

(ಸಂದರ್ಭ : ಷಣ್ಮುಖ ಮತ್ತು ಶೂರಪದ್ಮ ಯುದ್ಧದ ಸನ್ನಿವೇಶ)

“.. ಮರಣವೇನು? ಸಾಮಾನ್ಯ. ಹುಟ್ಟಿದವರು ಸಾಯ್ತಾರೆ. ಈ ತತ್ವದಿಂದ ಬದುಕಿದರೆ ಅದು ಬದುಕಾಗುವುದಿಲ್ಲ. ಯುದ್ಧ…. ಯುದ್ಧದಲ್ಲಿ ಸತ್ತವನೂ ಸೋತವನಲ್ಲ. ಯುದ್ಧದಲ್ಲಿ ಬದುಕಿದವನು ಮಾತ್ರ ಗೆದ್ದವನೂ ಅಲ್ಲ. ಹೋರಾಟ…. ಆನುವಂಶಿಕತೆಯಿಂದ ಬಂದದ್ದದು. ರಕ್ತಗತವಾದ ದೇವತೆಗಳಲ್ಲಿ ದ್ವೇಷ. ಇಲ್ಲದಿದ್ದರೆ ‘ಸುರ-ಅಸುರ’ ಎಂಬ ವಿರುದ್ಧವಾದ ಸಂಘರ್ಷಾತ್ಮಕವಾದಂತಹ ಪದ ಹುಟ್ಟುತ್ತಲೇ ಇರಲಿಲ್ಲ. ಅವರಿದ್ದಲ್ಲಿ ನಾವಿಲ್ಲ ಎಂದರ್ಥ….

ಭಾಪುರೇ… ಕುಮಾರನೆಂದು ನಿನ್ನ ಹೆಸರು. ಆಕೃತಿಯೂ ಕುಮಾರನದ್ದು. ಅಯ್ಯಾ…. ಕೌಮಾರ, ಇಷ್ಟು ವಿಜೃಂಭಿಸಿದರೆ ಬಹುಶಃ ಮುಂದಿನದ್ದು ಕಳೆಗುಂದುತ್ತದೋ ಎಂಬ ಸಂದೇಹ ನನಗಿದೆ. ಬಾಲ್ಯ, ಕೌಮಾರ – ಇದು ಮುಂದಿನದ್ದಾದಂತಹ ಜೀವನದ ಯೌವನ, ವಾರ್ಧಕ್ಯಕ್ಕೆ ಪೋಷಕವಾಗಬೇಕು, ಪೂರಕವಾಗಬೇಕು. ಅವಾಗ ಮಾಡಬೇಕಾದ್ದು ಸಂಗ್ರಹ, ನಿಗ್ರಹವಲ್ಲ. ಚಿಂತಿಲ್ಲ. ಎಳೆಯ ವಯಸ್ಸಿನಲ್ಲಿ ನೀನು ಮಾಡಿದಂತಹ ಅದ್ಭುತ ಪರಾಕ್ರಮಗಳನ್ನೆಲ್ಲಾ ಕಂಡಾಗ ನನ್ನ ವಿರೋಧಿ ಸ್ಥಾನದಲ್ಲಿ ನೀನು ನಿಂತರೂ ಕೂಡಾ ವೀರರಸ ಪ್ರಧಾನವಾದಂತಹ ಯಾವುದೇ ಕಥಾನಕವನ್ನು ತಾಳಿ ರೋಮಾಂಚನಗೊಳ್ಳುವ ನನ್ನ ಜಾಯಮಾನದಿಂದ ನಿನ್ನನ್ನು ನಾನು ಮೆಚ್ಚುತ್ತೇನೆ.

ಏನಯ್ಯಾ… ಈ ಮರಣ ಎನ್ನುವುದು ನನ್ನಂತಹ ಜೀವರಿಗೆ ಮಹಾನವಮಿ, ಉತ್ಸವ! ‘ಹೇಗಾದರೂ ಸಾಯಕೂಡದು’ ಎಂಬುದು ನನ್ನ ಹಠ. ನಮ್ಮಂತಹ ಯೋಧರಿಗೆ ಜೀವನವೇ ಒಂದು ಸಂಗ್ರಾಮ. ಭೂಮಿಯಾದ್ದರಿಂದ, ಆ ಸಂಗ್ರಾಮ ಭೂಮಿ ಕೊನೆಯ ಉಸಿರಿನಲ್ಲಿ ಈ ರೀತಿಯ ಹೋರಾಟ ಭೂಮಿಯಾಗಿ, ರಕ್ತದಲ್ಲಿ ವಿರೋಧಿಯ ಆಯುಧದಿಂದ ಗತಪ್ರಾಣನಾದರೆ, ಶಾಸ್ತ್ರ ಹೌದಾಗಿದ್ದರೆ ಯುದ್ಧದಲ್ಲಿ ಸತ್ತವರು ಮರಳಿ ಹುಟ್ಟುವುದಿಲ್ಲ. ಜೈಸಿದರಂತೂ ‘ಇಹ’ ಉಂಟು. ಸತ್ತರೆ ‘ಪರ’ ಮಾತ್ರ. ಇಹ-ಪರ ಎರಡನ್ನೂ ಸಾಧಿಸುವ ಸಾಧನೆ ನನ್ನದು….”

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

2 hours ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

3 hours ago

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…

5 hours ago

ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…

8 hours ago