Advertisement
ಯಕ್ಷಗಾನ : ಮಾತು-ಮಸೆತ

ಹುಟ್ಟಿದವರು ಸಾಯ್ತಾರೆ….. ಈ ತತ್ವದಿಂದ ಬದುಕಿದರೆ ಅದು ಬದುಕಾಗುವುದಿಲ್ಲ…..

Share

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶೂರಪದ್ಮ’)
ಪ್ರಸಂಗ : ಕುಮಾರ ವಿಜಯ

(ಸಂದರ್ಭ : ಷಣ್ಮುಖ ಮತ್ತು ಶೂರಪದ್ಮ ಯುದ್ಧದ ಸನ್ನಿವೇಶ)

“.. ಮರಣವೇನು? ಸಾಮಾನ್ಯ. ಹುಟ್ಟಿದವರು ಸಾಯ್ತಾರೆ. ಈ ತತ್ವದಿಂದ ಬದುಕಿದರೆ ಅದು ಬದುಕಾಗುವುದಿಲ್ಲ. ಯುದ್ಧ…. ಯುದ್ಧದಲ್ಲಿ ಸತ್ತವನೂ ಸೋತವನಲ್ಲ. ಯುದ್ಧದಲ್ಲಿ ಬದುಕಿದವನು ಮಾತ್ರ ಗೆದ್ದವನೂ ಅಲ್ಲ. ಹೋರಾಟ…. ಆನುವಂಶಿಕತೆಯಿಂದ ಬಂದದ್ದದು. ರಕ್ತಗತವಾದ ದೇವತೆಗಳಲ್ಲಿ ದ್ವೇಷ. ಇಲ್ಲದಿದ್ದರೆ ‘ಸುರ-ಅಸುರ’ ಎಂಬ ವಿರುದ್ಧವಾದ ಸಂಘರ್ಷಾತ್ಮಕವಾದಂತಹ ಪದ ಹುಟ್ಟುತ್ತಲೇ ಇರಲಿಲ್ಲ. ಅವರಿದ್ದಲ್ಲಿ ನಾವಿಲ್ಲ ಎಂದರ್ಥ….

ಭಾಪುರೇ… ಕುಮಾರನೆಂದು ನಿನ್ನ ಹೆಸರು. ಆಕೃತಿಯೂ ಕುಮಾರನದ್ದು. ಅಯ್ಯಾ…. ಕೌಮಾರ, ಇಷ್ಟು ವಿಜೃಂಭಿಸಿದರೆ ಬಹುಶಃ ಮುಂದಿನದ್ದು ಕಳೆಗುಂದುತ್ತದೋ ಎಂಬ ಸಂದೇಹ ನನಗಿದೆ. ಬಾಲ್ಯ, ಕೌಮಾರ – ಇದು ಮುಂದಿನದ್ದಾದಂತಹ ಜೀವನದ ಯೌವನ, ವಾರ್ಧಕ್ಯಕ್ಕೆ ಪೋಷಕವಾಗಬೇಕು, ಪೂರಕವಾಗಬೇಕು. ಅವಾಗ ಮಾಡಬೇಕಾದ್ದು ಸಂಗ್ರಹ, ನಿಗ್ರಹವಲ್ಲ. ಚಿಂತಿಲ್ಲ. ಎಳೆಯ ವಯಸ್ಸಿನಲ್ಲಿ ನೀನು ಮಾಡಿದಂತಹ ಅದ್ಭುತ ಪರಾಕ್ರಮಗಳನ್ನೆಲ್ಲಾ ಕಂಡಾಗ ನನ್ನ ವಿರೋಧಿ ಸ್ಥಾನದಲ್ಲಿ ನೀನು ನಿಂತರೂ ಕೂಡಾ ವೀರರಸ ಪ್ರಧಾನವಾದಂತಹ ಯಾವುದೇ ಕಥಾನಕವನ್ನು ತಾಳಿ ರೋಮಾಂಚನಗೊಳ್ಳುವ ನನ್ನ ಜಾಯಮಾನದಿಂದ ನಿನ್ನನ್ನು ನಾನು ಮೆಚ್ಚುತ್ತೇನೆ.

ಏನಯ್ಯಾ… ಈ ಮರಣ ಎನ್ನುವುದು ನನ್ನಂತಹ ಜೀವರಿಗೆ ಮಹಾನವಮಿ, ಉತ್ಸವ! ‘ಹೇಗಾದರೂ ಸಾಯಕೂಡದು’ ಎಂಬುದು ನನ್ನ ಹಠ. ನಮ್ಮಂತಹ ಯೋಧರಿಗೆ ಜೀವನವೇ ಒಂದು ಸಂಗ್ರಾಮ. ಭೂಮಿಯಾದ್ದರಿಂದ, ಆ ಸಂಗ್ರಾಮ ಭೂಮಿ ಕೊನೆಯ ಉಸಿರಿನಲ್ಲಿ ಈ ರೀತಿಯ ಹೋರಾಟ ಭೂಮಿಯಾಗಿ, ರಕ್ತದಲ್ಲಿ ವಿರೋಧಿಯ ಆಯುಧದಿಂದ ಗತಪ್ರಾಣನಾದರೆ, ಶಾಸ್ತ್ರ ಹೌದಾಗಿದ್ದರೆ ಯುದ್ಧದಲ್ಲಿ ಸತ್ತವರು ಮರಳಿ ಹುಟ್ಟುವುದಿಲ್ಲ. ಜೈಸಿದರಂತೂ ‘ಇಹ’ ಉಂಟು. ಸತ್ತರೆ ‘ಪರ’ ಮಾತ್ರ. ಇಹ-ಪರ ಎರಡನ್ನೂ ಸಾಧಿಸುವ ಸಾಧನೆ ನನ್ನದು….”

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

8 hours ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

12 hours ago

ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ

ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…

14 hours ago

ಪಿಒಪಿ ಗಣಪತಿಗೆ ಬ್ರೇಕ್..? ಕರಾವಳಿಯ 90–95% ಪರಿಸರ ಸ್ನೇಹಿ ಮಾದರಿ ರಾಜ್ಯಕ್ಕೆ ಪಾಠ

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವಂತೆ…

16 hours ago

ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕೃಷಿಕರಿಗೆ ನಿರ್ಬಂಧ ಬೇಡ – ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಆಗ್ರಹ

ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕೃಷಿಕರ ಜೀವನೋಪಾಯಕ್ಕೆ ನಿರ್ಬಂಧ ಹೇರಬಾರದು, ಕಸ್ತೂರಿ ರಂಗನ್…

16 hours ago

ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?

ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…

1 day ago