ಮತ್ತೆ ಕೊರೋನಾ ಭಯ ಹೆಚ್ಚಾಗಿದೆ. ಅದರ ಜೊತೆಗೇ ಒಮಿಕ್ರಾನ್ ಕೂಡಾ ಹಬ್ಬುತ್ತಿದೆ. ಸರ್ಕಾರಿ ದಾಖಲೆಗಳ ಪ್ರಕಾರ ಪ್ರತೀ ದಿನ ರೋಗದ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರವಾಗಿ ಈ ರೋಗ ನಿಯಂತ್ರಣ ಮಾಡಲೇಬೇಕಿದೆ. ಮತ್ತೆ ಲಾಕ್ಡೌನ್ ಆದರೆ ಜನ ಅದರಲ್ಲೂ ಸಾಮಾನ್ಯ ಜನರು ಸಂಕಷ್ಟ ಅನುಭವಿಸುವುದು ಖಚಿತ. ಹೀಗಾಗಿ ಲಾಕ್ಡೌನ್ ಬದಲಾಗಿ ಪರ್ಯಾಯ ದಾರಿಗಳು ಏನಿದೆ ? ರೋಗ ಹರಡುವುದು ತಪ್ಪಿಸಲು ಏನು ಮಾಡಬಹುದು ? ಗ್ರಾಮೀಣ ಭಾಗದಿಂದ ತೊಡಗಿ ನಗರದವರೆಗೆ ಏನು ಮಾಡಬಹುದು ? ಇಂತಹದ್ದೊಂದು ಯೋಚನೆ ಇದ್ದರೆ ಹೇಳಿ ಸರ್ಕಾರಕ್ಕೆ ನಾವೆಲ್ಲರೂ ಸೇರಿ ಗಮನಕ್ಕೆ ತರೋಣ.
ಏಕೆಂದರೆ ಸರ್ಕಾರಕ್ಕೂ, ಆಡಳಿತಕ್ಕೂ ಕೊರೋನಾ ಲಾಕ್ಡೌನ್ ಈಗ ಬೇಕಾಗಿಲ್ಲ. ಆದರೆ ಜವಾಬ್ದಾರಿ ಹಾಗೂ ನಾಗರಿಕರ ಹಿತದೃಷ್ಟಿಯಿಂದ ಅನಿವಾರ್ಯ ಸ್ಥಿತಿ ಇದೆ. ಅಂತರಾಷ್ಟ್ರೀಯ ಮಟ್ಟದಲ್ಲೂ ರೋಗ ಹರಡದಂತೆ ಲಾಕ್ಡೌನ್ ಮಾತ್ರವೇ ಪರಿಹಾರ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ಲಾಕ್ಡೌನ್ ಹೊರತಾದ ಯಾವ ಮಾರ್ಗ ಇದ್ದರೂ ಸರ್ಕಾರ ಪರಿಗಣಿಸುವುದು ಕಷ್ಟವಾದರೂ ಸಡಿಲಿಕೆ ಮಾಡಬಹುದು. ಅಂತಹ ಯೋಚನೆಗಳು ಇದ್ದರೆ ಎಲ್ಲರೂ ಸರ್ಕಾರದ ಗಮನಕ್ಕೆ ತರಬಹುದು. ಪ್ರತಿಭಟನೆಗಳ ಬದಲಾಗಿ ರಚನಾತ್ಮಕ ಸಲಹೆ, ಯೋಚನೆಗಳನ್ನು ಹೇಳುವ ಅವಕಾಶ ಪ್ರಜಾಪ್ರಭುತ್ವದಲ್ಲಿ ಇದೆ. ಈಗ ಈ ಪ್ರಯತ್ನ ನಾವೆಲ್ಲರೂ ಮಾಡೋಣ, ಏಕೆಂದರೆ ನಮ್ಮೆಲ್ಲರ ಹಿತಕ್ಕಾಗಿ…
ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ…
ಬಹುನಿರೀಕ್ಷಿತ ಆಕ್ಸಿಯಮ್ ಮಿಷನ್-4 ಇಂದು ಭಾರತೀಯ ಕಾಲಮಾನ ಮಧ್ಯಾಹ್ನ 12 ಗಂಟೆ 1ನಿಮಿಷಕ್ಕೆ…
ಕಳೆದ 11 ವರ್ಷಗಳಲ್ಲಿ ದೇಶದ ಬಡತನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದು ಕೇಂದ್ರ…
ಗದಗ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಸಾಕಷ್ಟು ಮಳೆಯಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಈ…
ರಾಜ್ಯದ ಮಾವು ಬೆಳೆಗಾರರ ಹಿತ ಕಾಪಾಡುವಂತೆ ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ…
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ, ಒಡಿಶಾ ಕರಾವಳಿಗೆ ತಲುಪಿರುವ ತಿರುವಿಕೆಯು ಇನ್ನೆರಡು ದಿನಗಳಲ್ಲಿ ಶಿಥಿಲಗೊಳ್ಳುವ…