1 ಲೀಟರ್ ನೀರು ಪಡೆಯಲು ಹೋದರೆ 6 ಲೀಟರ್ ನೀರು ಪೋಲು…!

June 3, 2019
3:01 PM

ಎಲಿಮಲೆ :  1 ಲೀಟರ್ ಶುದ್ಧ ನೀರು ಪಡೆಯಲು ಹೋದರೆ 6 ಲೀಟರ್ ನೀರು ಪೋಲಾಗುತ್ತಿದೆ. ನೋಡಿದರೆ ಇದರ ವ್ಯವಸ್ಥೆಯೇ ಹಾಗೆ. ಬೇಕೋ ಬೇಡವೋ 2 ರೂಪಾಯಿಗೆ 6 ನೀರು ಬರುತ್ತದೆ. ಇಂತಹದ್ದೊಂದು ವ್ಯವಸ್ಥೆ ಈಗ ಚರ್ಚೆಗೆ ಕಾರಣವಾಗಿದೆ.

Advertisement
Advertisement

ಬರದಿಂದ ಕಂಗೆಟ್ಟಿರುವಾಗ ನೀರಿನ ದಾಹ ತೀರಿಸಲು ನಿರ್ಮಿಸಲಾದ ಶುದ್ದ ನೀರಿನ ಘಟಕವೊಂದು ಜೀವಜಲದ ಪೋಲಿಗೆ ಕಾರಣವಾಗುತ್ತಿದೆ. ರಾಷ್ಟ್ರೀಯ ಗ್ರಾಮೀಣ ಗುಡಿಯುವ ನೀರಿನ ಯೋಜನೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ದೇವಚಳ್ಳ ಗ್ರಾಮ ಪಂಚಾಯತ್ ಆವರಣದಲ್ಲಿ ನಿರ್ಮಿಸಲಾದ ಶುದ್ಧ ನೀರಿನ ಘಟಕದಲ್ಲಿ 1 ಲೀಟರ್ ಶುದ್ಧ ನೀರು ಪಡೆಯಬೇಕೆಂದರೆ 6 ಲೀಟರ್ ನೀರು ಪೋಲಾಗುತ್ತಿದೆ. ದೇವಚಳ್ಳ ಪರಿಸರದಲ್ಲಿ ನೀರಿಗೆ ಹಾಹಾಕಾರ ಇರುವಾಗ ಇಂತದ್ದೊಂದು ವ್ಯವಸ್ಥೆ ಪಂಚಾಯತ್‍ಗೆ ತಲೆನೋವಾಗಿ ಪರಿಣಮಿಸಿದೆ.

ವಿವಿಧ ಕಡೆಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು ಯಾವೊಂದು ಕಾಮಗಾರಿಗಳೂ ಪೂರ್ಣಗೊಂಡಿಲ್ಲ. ಆದರೆ ದೇವಚಳ್ಳ ಗ್ರಾ.ಪಂ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಮುತುವರ್ಜಿಯಿಂದ ನೀರಿನ ಘಟಕ 2 ರೂ.ಗೆ 20 ಲೀಟರ್ ನೀರು ಪೂರೈಸುವ ಕಾರ್ಯ ಮಾಡಿದೆ. ಆದರೆ 1 ಲೀಟರ್ ನೀರನ್ನು ಶುದ್ದೀಕರಿಸಲು 6.ಲೀ ನಷ್ಟು ನೀರನ್ನು ಘಟಕಕ್ಕೆ ಪೂರೈಸಬೇಕಾಗು ತ್ತದೆ. ತಾಂತ್ರಿಕ ದೋಷದಿಂದಾದ ಈ ಅಚಾತುರ್ಯಕ್ಕೆ ಗ್ರಾ.ಪಂ ಬೆಚ್ಚಿ ಬಿದ್ದಿದೆ. ಅಷ್ಟಕ್ಕಷ್ಟೇ ಇರುವ ನೀರು ಈ ರೀತಿ ಪೋಲಾದರೆ ಘಟಕಕ್ಕೆ ನೀರು ಪೂರೈಸುವುದು ಹೇಗೆ? ಎಂಬ ಪ್ರಶ್ನೆ ಸಿಬ್ಬಂದಿಯವರದ್ದು.

ಅದೂ ಅಲ್ಲದೆ 2 ರೂಪಾಯಿ ಹಾಕಿ 1 ಲೀಟರ್ ಬೇಕು ಎಂದರೂ 6 ಲೀಟರ್ ನೀರು ಪೋಲಾಗುತ್ತಿದೆ. ಹೀಗಾಗಿ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಿತರು ಗಮನಹರಿಸಬೇಕಿದೆ.

ಪೋಲಾಗಲು ಕಾರಣವೇನು?:

Advertisement

ನೀರು ಶುದ್ಧೀಕರಣ ಘಟಕಕ್ಕೆ ಪೂರೈಸಲಾಗುವ ನೀರಿನಲ್ಲಿ ಹೆಚ್ಚು ಉಪ್ಪು ನೀರು ಕರಗಿದ್ದಾಗ ಪೋಲಾಗು ವ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆ. ಸಮುದ್ರ ತೀರ ಪ್ರದೇಶಗಳಲ್ಲಿ ಶುದ್ಧ ನೀರನ್ನು ಪಡೆಯುವಾಗ ಈ ರೀತಿ ನೀರು ಪೋಲಾಗುವ ಸಾಧ್ಯತೆಗಳಿದೆ. ಆದರೆ ಸುಳ್ಯ ತಾಲೂಕಿನಲ್ಲಿ ಲಭ್ಯವಿರುವ ನೀರಿನಲ್ಲಿ ಉಪ್ಪಿನಾಂಶ ಹೆಚ್ಚಾಗಿರುವ ಸಾಧ್ಯತೆ ಕಡಿಮೆ ಇದ್ದು ನೀರು ಪೋಲಾಗಲು ಅಪೂರ್ಣ ತಾಂತ್ರಿಕ ರಚನೆಯೇ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಾರೆ.

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರೆಂಟ್ ಹೊದ ಕೂಡ್ಲೆ ಬೊಬ್ಬೆ ಹೊಡೆಯೋದು ಯಾಕೆ..!?
May 25, 2025
9:29 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಮಳೆ Update | ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆ | ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆ | ಉಡುಪಿಯಲ್ಲಿ 164 ಮಿಮೀ ಮಳೆ |
May 25, 2025
9:07 AM
by: ದ ರೂರಲ್ ಮಿರರ್.ಕಾಂ
ಬಿತ್ತನೆ ಬೀಜ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ
May 25, 2025
6:13 AM
by: The Rural Mirror ಸುದ್ದಿಜಾಲ
ರೈತರು ಉತ್ತಮ ಇಳುವರಿ ಪಡೆಯಲು ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸೂಚನೆ
May 25, 2025
6:05 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group