ಸುಳ್ಯ:ರಕ್ತ ದಾನ ಮಹಾದಾನ ಎಂಬ ದ್ಯೇಯವನ್ನು ಮನದಲ್ಲಿಟ್ಟು ಸುಮಾರು 105 ಬಾರಿ ರಕ್ತದಾನ ಮಾಡಿ ರಾಜ್ಯಾದ್ಯಂತ ತನ್ನ ಸಮಾಜ ಸೇವೆ ಛಾಪನ್ನು ಪಸರಿಸಿರುವ ಸುಳ್ಯ ತಾಲೂಕಿನ ಚಿರಪರಿಚಿತ ವ್ಯಕ್ತಿಯಾಗಿರುವ ಪಿ.ಬಿ ಸುಧಾಕರ ರೈ ಅವರಿಗೆ ಕರ್ನಾಟಕ ರಾಜ್ಯ ಶಾಖಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಸನ್ಮಾನ ನಡೆಯಲಿದೆ.
ದಕ್ಷಿಣ ಕನ್ನಡದಲ್ಲಿ ನೂರಕ್ಕಿಂತಲೂ ಮಿಗಿಲಾಗಿ ರಕ್ತದಾನ ಮಾಡಿರುವ ಇವರು ಹಲವಾರು ಸಂಘಸಂಸ್ಥೆಗಳ ಚುಕ್ಕಾಣಿ ಹಿಡಿದು ಸದ್ದಿಲ್ಲದೆ ಸಮಾಜ ಸೇವೆ ಮಾಡಿ ನಾಡಿನಾದ್ಯಂತ ಸೈ ಎನಿಸಿದವರು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೆಡ್ ಕ್ರಾಸ್ ಭವನದಲ್ಲಿ ಜೂನ್ 14 ರಂದು ವಿಶ್ವ ರಕ್ತದಾನಿಗಳ ಕಾರ್ಯಕ್ರಮದಂದು ಜಿಲ್ಲೆಯ ಪ್ರತಿನಿದಿಯಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಲಿದ್ದಾರೆ. ಪ್ರಸ್ತುತ ಸುಧಾಕರ ರೈ ಅವರು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಗಿರಿಯನ್ನು ಹೊತ್ತಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel