Advertisement
MIRROR FOCUS

15 ವರ್ಷಗಳಿಂದ ಮನೆಯಿಂದ ದೂರವಾಗಿದ್ದ ವ್ಯಕ್ತಿಯನ್ನು ಮತ್ತೆ ಮನೆಗೆ ಸೇರಿಸಿದ ಸಾಯಿನಿಕೇತನ ಸೇವಾಶ್ರಮ

Share
ರಸ್ತೆ ಬದಿ ಯಾರೋ ಅಲೆದಾಟ ಮಾಡುತ್ತಿರುತ್ತಾರೆ. ಅನೇಕರಿಗೆ ಅದೊಂದು ತುಚ್ಛ ಜೀವದಾರೆ, ದೈಗೋಳಿಯ ಸಾಯಿನಿಕೇತನ ಸೇವಾಶ್ರಮಕ್ಕೆ ಅಂತಹವರ ಸೇವೆಯೇ ದೇವರ ಕಾರ್ಯ. ಅಲ್ಲಿಗೆ ಸೇರಿದ ಬಳಿಕ ಚಿಕಿತ್ಸೆ ನೀಡಿ ನೆನಪು ಮರುಕಳಿಸಿದ ನಂತರ ಮತ್ತೆ ಸಂತಸದ ವಾತಾವರಣ ಕಂಡುಬರುತ್ತದೆ. ಅಂತಹದ್ದೇ ಒಂದು ಘಟನೆ ಇದು. ಸೇವಾಶ್ರಮದ  ಮಾನವೀಯ  ಕಾರ್ಯಕ್ಕೆ ಇದೊಂದು ಅಳಿಲ ಸೇವೆಯ ಫೋಕಸ್…

ಸೆಪ್ಟೆಂಬರ್ 20, 2019. ಪಂಜಾಬ್ ನ ಫೈಸಲಾಬಾದ್ ನ  ಗ್ರಾಮವೊಂದರಲ್ಲಿ  ಮೀರಾಬಾಯಿ ಅವರ ಮನೆಯಲ್ಲಿ ಹಬ್ಬದ ವಾತಾವರಣ.  ಕಳೆದ 15 ವರ್ಷಗಳಿಂದ ಮನೆಯಿಂದ ದೂರವಾಗಿ ಕಾಣೆಯಾಗಿದ್ದ ಮನೆ ಯಜಮಾನ  ವಿಂದುಪ್ರಸಾದ್ ಯಾದವ್ ಪುನಃ ಮನೆ ಸೇರಿದ ಸಂತಸದ ದಿನವದು. ಈ ಸಂದರ್ಭದಲ್ಲಿ  ಮನೆ ಮಂದಿಯೆಲ್ಲ ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸುತ್ತಿರುವುದು ದೈಗೋಳಿಯ ಸಾಯಿನಿಕೇತನ ಸೇವಾಶ್ರಮವನ್ನು.
15 ವರ್ಷಗಳ ಹಿಂದೆ ಕೃಷಿಕರಾಗಿದ್ದ ವಿಂದೂ ಪ್ರಸಾದ್ ಯಾದವ್ ಮಾನಸಿಕ ವಿಕಲಚೇತನರಾದ  ಕಾರಣದಿಂದ  ತಮ್ಮ ಊರನ್ನು ಬಿಟ್ಟು ಹೋಗಿದ್ದರು.ಅವರ‌ ಕುಟುಂಬಸ್ಥರು ಪೋಲಿಸ್ ಠಾಣೆಯಲ್ಲಿ ದೂರು ನೀಡಿ ಸಾಕಷ್ಟು ಹುಡುಕಿದರೂ ಪ್ರಯೋಜನವಾಗಲಿಲ್ಲ. ಇದೀಗ ಒಂದು ತಿಂಗಳ ಹಿಂದೆ ದಿಢೀರನೆ ಪೋಲೀಸ್ ಸ್ಟೇಷನ್ ನಿಂದ  ಬಂದ ಫೋನ್ ಕಾಲ್ ಆಧರಿಸಿ ಕಾಣಚ್ಚೂರು ಆಸ್ಪತ್ರೆಯ ಮಾನಸಿಕ ವಿಭಾಗಕ್ಕೆ ಬಂದ ಅವರ ಮಗ ಮಿಸ್ರೀಲಾಲರಿಗೆ ತಮ್ಮ ತಂದೆಯನ್ನು ಕಂಡು ಅತೀವ ಸಂತಸ. ಆದರೆ 15 ವರ್ಷಗಳ ಹಿಂದೆ ನೋಡಿದ್ದ ಮಾನಸಿಕ ರೋಗಿ ತತ್‍ಕ್ಷಣ ತನ್ನ ಮಗನನ್ನು ಗುರುತಿಸಲಿಲ್ಲ. ಮುಂದಿನ ಒಂದು ತಿಂಗಳ‌ ಚಿಕಿತ್ಸೆಯ ನಂತರ ಇದೀಗ ವಿಂದುಪ್ರಸಾದ್  ತನ್ನ ಮನೆಗೆ ಹೋಗಲು ಸಮ್ಮತಿಸಿದ್ದು ದಿಲ್ಲಿಯಲ್ಲಿ ಕೆಲಸ ಮಾಡುತ್ತಿರುವ ಮಿಸ್ರೀಲಾಲ್ ತನ್ನ ತಂದೆ ಯನ್ನು ಮನೆಗೆ ಕರೆದೊಯ್ದಿದ್ದಾರೆ.
ಹೀಗಾಯಿತು ಇದು :ಊರು ಬಿಟ್ಟು ಎಲ್ಲೆಲ್ಲೋ ಅಲೆದಾಡುತ್ತಿದ್ದ ವಿಂದೂ ಪ್ರಸಾದ್ ಕಳೆದ ಆರು ತಿಂಗಳ ಹಿಂದೆ ಮಂಜೇಶ್ದರ ಅಸುಪಾಸಿನಲ್ಲಿ ತಿರುಗಾಡುತ್ತಿದ್ದ ವಿಚಾರ ತಿಳಿದು ದೈಗೋಳಿಯ ಸಾಯಿ ನಿಕೇತನ ಸೇವಾಶ್ರಮದ ಮುಖ್ಯಸ್ಥ ಡಾ. ಉದಯಕುಮಾರ್ ಅವರನ್ನು ಕರೆತಂದು, ಆರೈಕೆ, ಔಷಧೋಪಚಾರ ನೀಡಿ ಸಲಹಿದರು.
ಹೆಚ್ಚಿನ ಮಾನಸಿಕ ಚಿಕಿತ್ಸೆಗಾಗಿ ಅವರನ್ನು ಕಾಣಚ್ಚೂರು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿಯ ಡಾ.ಪ್ರದ್ಯುಮ್ನ ಹಾಗೂ ತಂಡದವರ ಚಿಕಿತ್ಸಾ ಸಮಯದಲ್ಲಿ ಅವರು ನೀಡಿದ ಮಾಹಿತಿಯನುಸಾರ ಪೋಲಿಸರ ಸಹಕಾರದಿಂದ ಮನೆ ಮಂದಿಯನ್ನು ಪತ್ತೆ ಹಚ್ಚಲಾಯಿತು.
ಇಂತಹ ಮಾನವೀಯ ಕಾರ್ಯದ ಕಡೆಗೆ ಬೆಳಕು ನೀಡುತ್ತಿರುವ ಸಾಯಿನಿಕೇತನ ಸೇವಾಶ್ರಮ ಈಗ ಮಾದರಿ ಎನಿಸಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ

ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…

17 minutes ago

ಹವಾಮಾನ ವರದಿ | 08-09-2026 | ಕರಾವಳಿಯಲ್ಲಿ ಮೋಡ ಹೆಚ್ಚಳ – ಸೆ.12ರ ಬಳಿಕ ಬಂಗಾಳಕೊಲ್ಲಿ ಬದಲಾವಣೆ?

ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…

7 hours ago

‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?

“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…

12 hours ago

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!

ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…

1 day ago

ಹಸು ಕರು ಹಾಕಿದ ಬಳಿಕದ “ಪ್ಲಾಸೆಂಟಾ” ದಿಂದ ತಯಾರಿಸಬಹುದೇ ನೈಸರ್ಗಿಕ ದ್ರಾವಣ?

ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…

1 day ago

ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?

ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…

1 day ago