ಹಿಮಾಚಲದಲ್ಲಿ188 ವರ್ಷಗಳ ನಂತರ ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದಗಳು ಪತ್ತೆ

July 1, 2022
9:27 PM

ಡೆಹ್ರಾಡೂನ್‌ನ ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಶಿಮ್ಲಾದ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದ ಸಂಶೋಧಕರು ಗುರುವಾರದಂದು 188 ವರ್ಷಗಳ  ಅಪರೂಪದ, ಮತ್ತು ಅಳಿವಿನಂಚಿನಲ್ಲಿರುವ ಪ್ರಬೇಧವಾದ ಬ್ರಾಕಿಸ್ಟೆಲ್ಮಾ ಅಟೆನ್ಯೂಟಮ್ ವನ್ನು ಮರುಶೋಧಿಸಿದ್ದಾರೆ.

Advertisement

ಈ ಜಾತಿಯನ್ನು ಮೊದಲು 1835 ರಲ್ಲಿ ಬ್ರಿಟಿಷ್ ಸಸ್ಯಶಾಸ್ತ್ರಜ್ಞರು  ಹಿಮಾಚಲ ಪ್ರದೇಶದ ಹಮೀರ್‌ಪುರದಲ್ಲಿ ಕಂಡುಹಿಡಿದು ವಿವರಿಸಿದ್ದರು. ಅದರ ಮೊದಲ ಸಂಗ್ರಹದ ನಂತರ, ಜಾತಿಗಳನ್ನು ಗಮನಿಸಲಾಗಿಲ್ಲ ಹೀಗಾಗಿ ವಿಜ್ಞಾನಿಗಳು ಅಳಿವಿನಂಚಿನಲ್ಲಿದೆ ಎಂದು ಭಾವಿಸಿದ್ದರು. ಆದರೆ, 2020 ರಲ್ಲಿ, ಪಶ್ಚಿಮ ಹಿಮಾಲಯದಲ್ಲಿ ಕ್ಷೇತ್ರ ಸಮೀಕ್ಷೆಯನ್ನು ಮಾಡುವಾಗ, ಹಮೀರ್‌ಪುರದ ಭೋರಂಜ್ ಪ್ರದೇಶದಲ್ಲಿ ನಿಶಾಂತ್ ಚೌಹಾನ್ ಅವರು ಕೆಲವು ಆಸಕ್ತಿದಾಯಕ ಟ್ಯೂಬರಸ್ ಸಸ್ಯಗಳನ್ನು ವೀಕ್ಷಿಸಿದ್ದರು.ಈ ಸಸ್ಯಗಳನ್ನು ಭಾರತದ ಬೊಟಾನಿಕಲ್ ಸರ್ವೇ ಆಫ್ ಇಂಡಿಯಾಕ್ಕೆ ತರಲಾಗಿತ್ತು ಮತ್ತು ಅಲ್ಲಿ ಇದನ್ನು ಅಂಬರ್ ಶ್ರೀವಾಸ್ತವ ಅವರು ಬ್ರಾಕಿಸ್ಟೆಲ್ಮಾ ಪರ್ವಿಫ್ಲೋರಮ್ ಎಂದು ಗುರುತಿಸಿದ್ದಾರೆ.

ಕಳೆದ ವರ್ಷ ಆಗಸ್ಟ್ 2021 ರಲ್ಲಿ ಈ ಜಾತಿಯನ್ನು ಮೊದಲ ಬಾರಿಗೆ ಗಮನಿಸಲಾಯಿತು, ಆದರೆ ಆ ಸಮಯದಲ್ಲಿ ಸಸ್ಯಗಳು ತಮ್ಮ ಬೆಳವಣಿಗೆಯ ಕೊನೆಯ ಹಂತದಲ್ಲಿದ್ದವು ಮತ್ತು ಹೂಬಿಡುವ ಅವಧಿಯು ಮುಗಿದಿತ್ತು.  ಇದರಿಂದಾಗಿ ಅವುಗಳ ಗುರುತನ್ನು ದೃಢೀಕರಿಸಲು ಕಷ್ಟವಾಯಿತು ಎಂದು ಚೌಹಾನ್ ವಿವರಿಸಿದರು.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 11-07-2025 | ಮುಂದಿನ 10 ದಿನಗಳವರೆಗೂ ಕರಾವಳಿ-ಮಲೆನಾಡು ಭಾಗದಲ್ಲಿ ಸಾಮಾನ್ಯ ಮಳೆ | ಜುಲೈ 16ರಿಂದ ಎಲ್ಲೆಲ್ಲಾ ಮಳೆ ಹೆಚ್ಚಾಗಬಹುದು ?
July 11, 2025
4:50 PM
by: ಸಾಯಿಶೇಖರ್ ಕರಿಕಳ
ಕೇತುವಿನ ಕಾಟ: ಈ ರಾಶಿಗಳಿಗೆ ಆರೋಗ್ಯದಲ್ಲಿ ಎಚ್ಚರಿಕೆ ಬೇಕು..!
July 11, 2025
7:33 AM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ವರದಾ, ತುಂಗಭದ್ರಾ ನದಿ
July 11, 2025
7:14 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group