ದೆಹಲಿಯು ತೀವ್ರ ವಾಯು ಮಾಲಿನ್ಯ ಮತ್ತು ದಟ್ಟವಾದ ಮಂಜಿನಿಂದ ಬಳಲುತ್ತಿದ್ದು, ನಗರದ ಅರ್ಧಕ್ಕಿಂತ ಹೆಚ್ಚು ವಾಯು ಗುಣಮಟ್ಟದ ಮೇಲ್ವಿಚಾರಣಾ ಕೇಂದ್ರಗಳು ಆತಂಕಕಾರಿ ಮಟ್ಟವನ್ನು ದಾಖಲಿಸಿದೆ. ಅದೇ ಸಮಯವನ್ನು ಶೀತ ಅಲೆಯನ್ನು ಕೂಡಾ ದಾಖಲಿಸುತ್ತಿದೆ.
39 ಮೇಲ್ವಿಚಾರಣಾ ಕೇಂದ್ರಗಳಲ್ಲಿ 22 ವಾಯು ಗುಣಮಟ್ಟದ ಸೂಚ್ಯಂಕ (AQI) 400 ಕ್ಕಿಂತ ಹೆಚ್ಚಿದ್ದು, ಅವುಗಳನ್ನ ತೀವ್ರ ವರ್ಗಕ್ಕೆ ಸೇರಿಸಿದೆ. ಇದನ್ನು ತೀವ್ರ ಮಾಲಿನ್ಯವು ನಗರಾದ್ಯಂತದ ವಿದ್ಯಮಾನವಾಗಿದೆ ಎಂಬುದನ್ನು ತೋರಿಸುತ್ತದೆ. ಕಳೆದ 24 ಗಂಟೆಗಳ ಸರಾಸರಿ AQI 398 ಆಗಿತ್ತು.
ತೀವ್ರ ವಾಯು ಮಾಲಿನ್ಯ ಜೊತೆಗೆ, ಹವಾಮಾನ ಪರಿಸ್ಥಿತಿ ಹದಗೆಟ್ಟಿತು. ಕನಿಷ್ಠ ತಾಪಮಾನ 6.10ಸೆಲ್ಸಿಯಸ್ ಗೆ ಇಳಿದಿದೆ. ಮೋಡ ಕವಿದ ವಾತಾವರಣದೊಂದಿಗೆ ಸೇರಿ ಮಧ್ಯಾಹ್ನದವರೆಗೂ ಮಂಜಿನ ವಾತಾವರಣ ಮುಂದುವರೆದಿತ್ತು. ಭಾರತೀಯ ಹವಾಮಾನ ಇಲಾಖೆ ಮಂಜಿನ ವಾತಾವರಣ ಮುಂದುವರಿಯುವ ಬಗ್ಗೆ ಎಚ್ಚರಿಕೆ ನೀಡಿದೆ, ಪ್ರತಿಕೂಲ ಹವಮಾನ ಮುಂದುವರಿಯುವ ಸೂಚನೆ ನೀಡಿದೆ. ದಟ್ಟವಾದ ಮಂಜುಗಡ್ಡೆಯಿಂದ ಉಂಟಾದ ಕಡಿಮೆ ಗೋಚರತೆ ವಿಮಾನ ಪ್ರಯಾಣದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತಿದೆ.
ತೆಂಗು ಬೆಳೆಗಾರರು ಕಾರ್ಮಿಕ ಕೊರತೆ ಮತ್ತು ಹೆಚ್ಚುತ್ತಿರುವ ಕೂಲಿ ವೆಚ್ಚದಿಂದ ಸಂಕಷ್ಟ ಎದುರಿಸುತ್ತಿದ್ದಾರೆ.…
ಕರಾವಳಿ ಕರ್ನಾಟಕದಲ್ಲಿ ಜೂನ್ 26ರವರೆಗೆ ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ…
ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಕಾಪರ್ ಸಲ್ಫೇಟ್ ಕೊರತೆ, ಬೆಳೆ ವಿಮೆ ವಿಳಂಬ, ಕಳಪೆ…
ಜೂನ್ 25ರಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಳ್ಳುವ ಸಾಧ್ಯತೆ ಇದೆ. ಕರಾವಳಿ ಮತ್ತು…
ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಕೃಷಿ ಹಾಗೂ ಆರೋಗ್ಯಕ್ಕೆ ಹಾನಿಯಾಗುತ್ತಿದೆ…
ದೇಶದ 13 ರಾಜ್ಯಗಳಿಗೆ ಐಎಂಡಿ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಕರಾವಳಿ ಕರ್ನಾಟಕ…