ಪೈಲಾರು: ಯುವಜನ ಸಂಯುಕ್ತ ಮಂಡಳಿ ಸುಳ್ಯ ,ಫ್ರೆಂಡ್ಸ್ ಕ್ವಬ್ ಪೈಲಾರು, ಶೌರ್ಯ ಯುವತಿ ಮಂಡಲ ಪೈಲಾರು, ಮಿತ್ರ ಕ್ರೀಡಾ ಮತ್ತು ಕಲಾ ಸಂಘ ರಾಗಿಯಡ್ಕ ಇದರ ಜಂಟಿ ಆಶ್ರಯದಲ್ಲಿ 3 ನೇ ಹಂತದ ವೃಕ್ಷಾರೋಹಣ ಕಾರ್ಯಕ್ರಮ ಪಂಜ ವಲಯ ರಕ್ಷಿತಾರಣ್ಯದ ರಾಗಿಯಡ್ಕ ಪರಿಸರದಲ್ಲಿ ನಡೆಯಿತು.
ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಶಂಕರ್ ಪೆರಾಜೆ ಗಿಡ ನೆಟ್ಟು ಕಾರ್ಯಕ್ರಮ ಕ್ಕೆ ಚಾಲನೆ ನೀಡಿ “ಪರಿಸರ ಸಂರಕ್ಷಣೆ ಗೆ ನಾವೆಲ್ಲ ಕಟಿಬದ್ಧರಾಗಬೇಕು.ಅನಾಹುತ ಸಂಭವಿಸುವ ನಾವೆಲ್ಲ ಎಚ್ಚೆತ್ತುಕೊಳ್ಳಬೇಕು” ಎಂದರು.
ಮಿತ್ರ ಕ್ರೀಡಾ ಸಂಘದ ಸ್ಥಾಪಕಾಧ್ಯಕ್ಷ ಯತೀಶ್ ಹಿರಿಯಡ್ಕ, ಅಧ್ಯಕ್ಷ ಪುನೀತ್ ಕೆರೆಗದ್ದೆ, ಶೌರ್ಯ ಯುವತಿ ಮಂಡಲದ ಅಧ್ಯಕ್ಷೆ ಯಕ್ಷಿತಾ ಪಾರೆ,ಕಾರ್ಯದರ್ಶಿ ಜಯಶ್ರೀ
ಕುಳ್ಳಂಪಾಡಿ,ಫ್ರೆಂಡ್ಸ್ ಕ್ಲಬ್ ನ ಕೋಶಾಧಿಕಾರಿ ಸಾತ್ವಿಕ್ ಮಡಪ್ಪಾಡಿ ಉಪಸ್ಥಿತರಿದ್ದರು.
ಯಕ್ಷಿತಾ ಪಾರೆ ಸ್ವಾಗತಿಸಿ ,ಯತೀಶ್ ಹಿರಿಯಡ್ಕ ಧನ್ಯವಾದಗೈದರು.ತೇಜಸ್ವಿ ಕಡಪಳ ನಿರೂಪಿಸಿದರು. ಸಾಗುವಾನಿ,ಪುನರ್ಪುಳಿ,ನೇರಳೆ,ಮಾಗುವಾನಿ,ರಾಮಪತ್ರೆ ಮುಂತಾದ ಬಹುಪಯೋಗಿ ಗಿಡಗಳನ್ನು ನೆಡಲಾಯಿತು.
2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…
ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…
ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…
ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…
ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…
“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…