ಪೈಲಾರು: ಯುವಜನ ಸಂಯುಕ್ತ ಮಂಡಳಿ ಸುಳ್ಯ ,ಫ್ರೆಂಡ್ಸ್ ಕ್ವಬ್ ಪೈಲಾರು, ಶೌರ್ಯ ಯುವತಿ ಮಂಡಲ ಪೈಲಾರು, ಮಿತ್ರ ಕ್ರೀಡಾ ಮತ್ತು ಕಲಾ ಸಂಘ ರಾಗಿಯಡ್ಕ ಇದರ ಜಂಟಿ ಆಶ್ರಯದಲ್ಲಿ 3 ನೇ ಹಂತದ ವೃಕ್ಷಾರೋಹಣ ಕಾರ್ಯಕ್ರಮ ಪಂಜ ವಲಯ ರಕ್ಷಿತಾರಣ್ಯದ ರಾಗಿಯಡ್ಕ ಪರಿಸರದಲ್ಲಿ ನಡೆಯಿತು.
ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಶಂಕರ್ ಪೆರಾಜೆ ಗಿಡ ನೆಟ್ಟು ಕಾರ್ಯಕ್ರಮ ಕ್ಕೆ ಚಾಲನೆ ನೀಡಿ “ಪರಿಸರ ಸಂರಕ್ಷಣೆ ಗೆ ನಾವೆಲ್ಲ ಕಟಿಬದ್ಧರಾಗಬೇಕು.ಅನಾಹುತ ಸಂಭವಿಸುವ ನಾವೆಲ್ಲ ಎಚ್ಚೆತ್ತುಕೊಳ್ಳಬೇಕು” ಎಂದರು.
ಮಿತ್ರ ಕ್ರೀಡಾ ಸಂಘದ ಸ್ಥಾಪಕಾಧ್ಯಕ್ಷ ಯತೀಶ್ ಹಿರಿಯಡ್ಕ, ಅಧ್ಯಕ್ಷ ಪುನೀತ್ ಕೆರೆಗದ್ದೆ, ಶೌರ್ಯ ಯುವತಿ ಮಂಡಲದ ಅಧ್ಯಕ್ಷೆ ಯಕ್ಷಿತಾ ಪಾರೆ,ಕಾರ್ಯದರ್ಶಿ ಜಯಶ್ರೀ
ಕುಳ್ಳಂಪಾಡಿ,ಫ್ರೆಂಡ್ಸ್ ಕ್ಲಬ್ ನ ಕೋಶಾಧಿಕಾರಿ ಸಾತ್ವಿಕ್ ಮಡಪ್ಪಾಡಿ ಉಪಸ್ಥಿತರಿದ್ದರು.
ಯಕ್ಷಿತಾ ಪಾರೆ ಸ್ವಾಗತಿಸಿ ,ಯತೀಶ್ ಹಿರಿಯಡ್ಕ ಧನ್ಯವಾದಗೈದರು.ತೇಜಸ್ವಿ ಕಡಪಳ ನಿರೂಪಿಸಿದರು. ಸಾಗುವಾನಿ,ಪುನರ್ಪುಳಿ,ನೇರಳೆ,ಮಾಗುವಾನಿ,ರಾಮಪತ್ರೆ ಮುಂತಾದ ಬಹುಪಯೋಗಿ ಗಿಡಗಳನ್ನು ನೆಡಲಾಯಿತು.
ಮಧ್ಯಪ್ರದೇಶದಲ್ಲಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು…
ಗೋಕರ್ಣದ ಅಶೋಕೆಯ ಮೂಲಮಠದಲ್ಲಿ 'ಅನ್ನಬ್ರಹ್ಮ ಚಾತುರ್ಮಾಸ್ಯ' ಆರಂಭಗೊಂಡಿದ್ದು, ಸಮಾಜಕ್ಕೆ ಸರಿಯಾದ ದಾರಿ ತೋರಿಸುವುದು…
ಅಪೊಲೊ ಫಾರ್ಮಸಿ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಆಗಸ್ಟ್ 1ರಂದು ಪುತ್ತೂರಿನಲ್ಲಿ ನೇರ…
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…
ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಭಾಗದಲ್ಲಿ ಅಡಿಕೆ ಬೆಳೆ ವೇಗವಾಗಿ ವಿಸ್ತರಿಸುತ್ತಿದ್ದು, ಉತ್ತಮ ಆದಾಯದ…