3.26 ಕ್ಕೆ ಭೂ ಕಕ್ಷೆಯ ಸಮೀಪ ಹಾದುಹೋಗಲಿದೆ ಕ್ಷುದ್ರ ಗ್ರಹ…!

April 29, 2020
3:06 PM

1998 OR2 ಎಂಬ ಹೆಸರಿನ ಕ್ಷುದ್ರ ಗ್ರಹವೊಂದು ಭಾರತೀಯ ಕಾಲಮಾನ ಪ್ರಕಾರ ಈ ಮಧ್ಯಾಹ್ನ 3.26 ಕ್ಕೆ ಭೂಮಿಯ ಸಮೀಪ ಹಾದು ಹೋಗಲಿದೆ ಎಂದು ನಾಸಾ ತಿಳಿಸಿದೆ.

Advertisement

ವಿಶ್ವದಾದ್ಯಂತ ಕೊರೊನಾ ಸೋಂಕು ಬಾಧಿಸಿರುವ ಈ ಸಮಯದಲ್ಲಿ ವಿಚಿತ್ರವೆಂದರೆ ಮುಖಕವಚ ಧರಿಸಿದಂತೆ ದೂರದರ್ಶಕದಲ್ಲಿ ಮಾತ್ರ ಕಾಣಬಹುದಾದ ಈ ಕ್ಷುದ್ರ ಗ್ರಹ ಭೂಕಕ್ಷೆಗಿಂತ 6.2 ಮಿಲಿಯನ್ ಕಿ.ಮೀ.ದೂರದಲ್ಲಿ ಹಾದುಹೋಗಲಿದ್ದು , ಭೂಮಿಗೆ ಯಾವುದೇ ಹಾನಿ ತಂದೊಡ್ಡದು ಎಂದು ನಾಸಾ ತಿಳಿಸಿದೆ.

 

ಎವರೆಸ್ಟ್ ಶಿಖರದಷ್ಟು ಅಂದರೆ ಹೆಚ್ಚು ಕಡಿಮೆ 1.5 ಕಿ.ಮೀ.ನಷ್ಟು ದೊಡ್ಡದಾದ ಈ ಕ್ಷುದ್ರ ಗ್ರಹದ ಪಥವನ್ನು ಅಮೇರಿಕಾದ ಬಾಹ್ಯಾಕಾಶದಿಂದ ಸಂಸ್ಥೆ – ನಾಸಾ ಅನೇಕ ದಿನಗಳಿಂದ ಗಮನಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಭೂಕಕ್ಷೆಯ ಸಮೀಪ ಹಾದುಹೋಗುತ್ತಿರುವ ದೊಡ್ಡಮಟ್ಟಿನ ಕ್ಷುದ್ರ ಗ್ರಹ ಇದೆಂದು ಹೇಳಲಾಗುತ್ತಿದೆ. ಸಹಸ್ರಾರು ವರ್ಷಗಳ ಹಿಂದೆ ಭೂಮಿಯ ಮೇಲೆ ಕ್ಷುದ್ರ ಗ್ರಹ ಪತನದಿಂದಾಗಿ ಡೈನೋಸಾರ್ ನಂತಹ ಬೃಹತ್ ಜೀವಿಗಳ ನಾಶ ಆಗಿರಹುದು ಎಂದು ಅಂದಾಜಿಸಲಾಗಿದೆ. ಇಷ್ಟೊಂದು ದೊಡ್ಡಪ್ರಮಾಣದ ಕ್ಷುದ್ರ ಗ್ರಹ ಪತನವಾದರೆ ಅಣುಬಾಂಬಿಗಿಂತಲೂ ಅದಷ್ಟೋ ಅಧಿಕ ಪ್ರಮಾಣದ ಹಾನಿ ಸಂಭವಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

Advertisement

 ಮಾಹಿತಿ :

ಪಿ ಜಿ ಎಸ್ ಎನ್ ಪ್ರಸಾದ್ 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆ.5-7 ಉತ್ತಮ ಮಳೆ – ಹವಾಮಾನ ಇಲಾಖೆ ಮಾಹಿತಿ
August 4, 2025
7:55 AM
by: The Rural Mirror ಸುದ್ದಿಜಾಲ
ಪ್ರೇಮ ಸಂಬಂಧದಲ್ಲಿ ಈ ರಾಶಿಯವರಿಗೆ ವಿಶ್ವಾಸದ ಕೊರತೆಯ ಸಮಸ್ಯೆ
August 4, 2025
7:38 AM
by: ದ ರೂರಲ್ ಮಿರರ್.ಕಾಂ
ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯ ಹೊಸ ಮಾದರಿಯ 6 ಕಾರು ಧರ್ಮಸ್ಥಳಕ್ಕೆ ಕೊಡುಗೆ
August 4, 2025
7:26 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಕೊಳೆರೋಗ | ಶೇ.95 ರಷ್ಟು ಕೃಷಿಕರ ತೋಟದಲ್ಲಿ ಅಡಿಕೆ ಕೊಳೆರೋಗ | ಸಮೀಕ್ಷಾ ವರದಿಯ ಮಾಹಿತಿ
August 3, 2025
12:10 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group