ರಾಜ್ಯದಲ್ಲಿ ವಿವಿಧ ಸಕ್ಕರೆ ಕಾರ್ಖಾನೆಗಳಿಂದ 3.49 ಕೋಟಿ ರೂಪಾಯಿ ಬಾಕಿ ಇದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ವಿಧಾನ ಪರಿಷತ್ನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಎನ್. ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೀದರ್ ಸಹಕಾರಿ ಕಾರ್ಖಾನೆಯಿಂದ 89 ಲಕ್ಷ ರೂಪಾಯಿ, ಬೀದರ್ ಭವಾನಿ ಶುಗರ್ಸ್ 1.80 ಕೋಟಿ ರೂಪಾಯಿ, ವಿಜಯಪುರ ಧ್ಯಾನಯೋಗಿ ಶಿವಕುಮಾರ್ ಸ್ವಾಮೀಜಿ ಶುಗರ್ಸ್ 1.25 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಈ ಮೂರೂ ಕಾರ್ಖಾನೆಗಳು ಸ್ಥಗಿತವಾಗಿದ್ದು, ವಸೂಲಾತಿ ಜವಾಬ್ದಾರಿ ನೀಡಲಾಗಿದೆ. 80 ಕಾರ್ಖಾನೆಗಳ ಪೈಕಿ ಕೇವಲ 3 ಕಾರ್ಖಾನೆಗಳು ಮಾತ್ರ ಬಾಕಿ ಉಳಿಸಿಕೊಂಡಿವೆ ಎಂದು ಮಾಹಿತಿ ನೀಡಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel