ಭಾರತದಲ್ಲಿ ಜಾನುವಾರು ಸಾಕಾಣಿಕೆ ಎಂದರೆ ಕೇವಲ ಹಾಲು ಉತ್ಪಾದನೆ ಮಾತ್ರವಲ್ಲ, ಗ್ರಾಮೀಣ ಬದುಕಿನ ಬಹುಮುಖ ಜೀವನೋಪಾಯ ವ್ಯವಸ್ಥೆಯಾಗಿದೆ ಎಂಬುದನ್ನು ಅಧ್ಯಯನೊಂದು ಬಹಿರಂಗಪಡಿಸಿದೆ.
ಇಂಧನ, ಪರಿಸರ ಮತ್ತು ನೀರಿನ ಮಂಡಳಿ (CEEW) ಬಿಡುಗಡೆ ಮಾಡಿದ ವರದಿ ಪ್ರಕಾರ, ದೇಶದ ಸುಮಾರು 38% ಜಾನುವಾರು ಸಾಕಣೆದಾರರು , ಅಂದರೆ ಸುಮಾರು 30 ಮಿಲಿಯನ್ ಕುಟುಂಬಗಳು ಹಾಲು ಮಾರಾಟ ಮಾಡುವುದಿಲ್ಲ..!. ಅಧ್ಯಯನದ ಪ್ರಕಾರ, ಈ ಕುಟುಂಬಗಳು ಹಾಲು ಮಾರಾಟಕ್ಕಿಂತಲೂ ಸಗಣಿ, ಗೊಬ್ಬರ ಮತ್ತು ಪ್ರಾಣಿಗಳ ಮಾರಾಟದಿಂದ ಸಿಗುವ ಆದಾಯದಂತಹ ಮಾರುಕಟ್ಟೆಯೇತರ ಪ್ರಯೋಜನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ.
ಹಾಲು ಮಾರಾಟಕ್ಕೆ ಆದ್ಯತೆ ನೀಡದ ಸಾಕಣೆದಾರರ ಪ್ರಮಾಣ ಜಾರ್ಖಂಡ್ನಲ್ಲಿ ಅತ್ಯಧಿಕವಾಗಿದ್ದು, ಅಲ್ಲಿನ 71% ಸಾಕಣೆದಾರರು ಹಾಲು ಮಾರಾಟವನ್ನೇ ಪ್ರಾಥಮಿಕ ಉದ್ದೇಶವಾಗಿಸಿಲ್ಲ. ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಈ ಪ್ರಮಾಣ 50% ಕ್ಕಿಂತ ಹೆಚ್ಚು ಎಂದು ವರದಿ ಹೇಳುತ್ತದೆ.
ಹಾಲು ಮಾರಾಟ ಮಾಡದ ಕುಟುಂಬಗಳಲ್ಲಿ 31% ಜನರು ಕುಟುಂಬ ಬಳಕೆಯ ಹಾಲನ್ನು ಮುಖ್ಯವಾಗಿ ನೋಡುತ್ತಾರೆ. ಆದರೆ, ಉಳಿದವರು ಸುಮಾರು 5.6 ಮಿಲಿಯನ್ ಕುಟುಂಬಗಳು ಹಾಲು ಉತ್ಪಾದನೆಗೂ ಸಂಬಂಧವಿಲ್ಲದ ಉದ್ದೇಶಕ್ಕಾಗಿ ಸಂಪೂರ್ಣವಾಗಿ ದನಗಳನ್ನು ಸಾಕುತ್ತಾರೆ ಎಂದು ಅಧ್ಯಯನ ತಿಳಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಅಧ್ಯಯನವು 15 ರಾಜ್ಯಗಳ 7,300ಕ್ಕೂ ಅಧಿಕ ಕುಟುಂಬಗಳ ಸಮೀಕ್ಷೆಯನ್ನು ಮಾಡಿದ್ದು, ಭಾರತದ ಗೋವಿನ ಸಂಖ್ಯೆಯ 91% ಇದೆ(ಹಸುಗಳು, ಎಮ್ಮೆಗಳು, ಎತ್ತುಗಳು ). ವರದಿ ಪ್ರಕಾರ, ಬಹುತೇಕ ಮನೆಗಳಲ್ಲಿ ಕೇವಲ ಒಂದು ಅಥವಾ ಎರಡು ಸ್ಥಳೀಯ ದನಗಳು ಇದ್ದು, ಇವು ಸಮಗ್ರ ಕೃಷಿ ವ್ಯವಸ್ಥೆಯಲ್ಲಿ ಸಗಣಿ ಮತ್ತು ಗೊಬ್ಬರದ ಪ್ರಮುಖ ಪಾತ್ರ ವಹಿಸುತ್ತಿವೆ. ಒಟ್ಟಾರೆಯಾಗಿ, 15 ರಾಜ್ಯಗಳಲ್ಲಿ ಒಂಬತ್ತು ರಾಜ್ಯಗಳಲ್ಲಿ, ಅರ್ಧಕ್ಕಿಂತ ಕಡಿಮೆ ಜಾನುವಾರು ಸಾಕಣೆದಾರರು ಹಾಲು ಮಾರಾಟವನ್ನು ತಮ್ಮ ಸಾಕಣೆಗೆ ಪ್ರಾಥಮಿಕ ಪ್ರೇರಣೆಯಾಗಿ ಉಲ್ಲೇಖಿಸಿದ್ದಾರೆ.
ಡೈರಿ ನೀತಿಗಳು ಹೆಚ್ಚಾಗಿ ಉತ್ಪಾದಕತೆ ಮತ್ತು ಹಾಲಿನ ಪ್ರಮಾಣ ಹೆಚ್ಚಿಸುವತ್ತ ಗಮನಹರಿಸುತ್ತಿವೆ. ಆದರೆ, ಗ್ರಾಮೀಣ ಜೀವನೋಪಾಯದಲ್ಲಿ ಜಾನುವಾರುಗಳ ಪಾತ್ರವು ಹಾಲಿನ ಹೊರತಾಗಿಯೂ ಬಹುಮುಖವಾಗಿರುವುದರಿಂದ, ಅದನ್ನು ಪ್ರತಿಬಿಂಬಿಸುವ ಹಾಗೂ ಸ್ಪಂದಿಸುವ ನೀತಿಗಳು ಅಗತ್ಯವೆಂದು CEEW ನಿರ್ದೇಶಕ ಅಭಿಷೇಕ್ ಜೈನ್ ವರದಿಯಲ್ಲಿ ಹೇಳಿದ್ದಾರೆ.
ಮೇವು ಮತ್ತು ಆಹಾರ ಕೊರತೆ ದೊಡ್ಡ ಸವಾಲು : ಅಧ್ಯಯನದಂತೆ, ನಾಲ್ಕರಲ್ಲಿ ಮೂವರು ಸಾಕಣೆದಾರರಿಗೆ ಕೈಗೆಟುಕುವ ಮೇವು ಮತ್ತು ಮೇವಿನ ಲಭ್ಯತೆ ಪ್ರಮುಖ ಸಮಸ್ಯೆಯಾಗಿದೆ. ಆದರೆ, ಸೈಲೇಜ್ ಹಾಗೂ ಸಮತೋಲಿತ ಪೋಷಣಾ ಯೋಜನೆಗಳಂತಹ ವ್ಯವಸ್ಥೆ ಅಳವಡಿಕೆ ಕೇವಲ 5% ಮಾತ್ರ ಇರುವುದೂ ಗಮನಾರ್ಹವಾಗಿದೆ. ಹವಾಮಾನ ಬದಲಾವಣೆಯಿಂದ ಜಾನುವಾರುಗಳಲ್ಲಿ ರೋಗ ಪ್ರಮಾಣ, ಸಾವು, ಹೆಚ್ಚಾಗುತ್ತಿದೆ ಎಂದು ಸಾಕಣೆದಾರರು ಹೇಳಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಜಾನುವಾರು ಸಾಕಾಣಿಕೆಯು ಜೀವನೋಪಾಯದ ಮೇಲೆ ಮತ್ತಷ್ಟು ಒತ್ತಡ ತರುವ ಸಾಧ್ಯತೆ ಇದೆ. ಹಾಲು 80 ದಶಲಕ್ಷಕ್ಕೂ ಹೆಚ್ಚು ಜೀವನೋಪಾಯಕ್ಕೆ ಕಾರಣವಾಗಿದೆ ಮತ್ತು ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ ಶೇಕಡಾ 5 ರಷ್ಟು ಕೊಡುಗೆ ನೀಡುತ್ತದೆ. ಗ್ರಾಮೀಣ ಜೀವನೋಪಾಯದಲ್ಲಿ ಜಾನುವಾರು ವಹಿಸುವ ಪಾತ್ರಗಳು ಕಡೆಗಣಿಸಲ್ಪಟ್ಟಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ




