Advertisement
ಪ್ರಮುಖ

ಭಾರತದಲ್ಲಿ 3 ಕೋಟಿ ಕುಟುಂಬಗಳು ಹಾಲು ಮಾರಾಟವೇ ಮಾಡಲ್ಲ…!

Share

ಭಾರತದಲ್ಲಿ ಜಾನುವಾರು ಸಾಕಾಣಿಕೆ ಎಂದರೆ ಕೇವಲ ಹಾಲು ಉತ್ಪಾದನೆ ಮಾತ್ರವಲ್ಲ, ಗ್ರಾಮೀಣ ಬದುಕಿನ ಬಹುಮುಖ ಜೀವನೋಪಾಯ ವ್ಯವಸ್ಥೆಯಾಗಿದೆ ಎಂಬುದನ್ನು ಅಧ್ಯಯನೊಂದು ಬಹಿರಂಗಪಡಿಸಿದೆ.

ಇಂಧನ, ಪರಿಸರ ಮತ್ತು ನೀರಿನ ಮಂಡಳಿ (CEEW) ಬಿಡುಗಡೆ ಮಾಡಿದ ವರದಿ ಪ್ರಕಾರ, ದೇಶದ ಸುಮಾರು 38% ಜಾನುವಾರು ಸಾಕಣೆದಾರರು , ಅಂದರೆ ಸುಮಾರು 30 ಮಿಲಿಯನ್ ಕುಟುಂಬಗಳು  ಹಾಲು ಮಾರಾಟ ಮಾಡುವುದಿಲ್ಲ..!.  ಅಧ್ಯಯನದ ಪ್ರಕಾರ, ಈ ಕುಟುಂಬಗಳು ಹಾಲು ಮಾರಾಟಕ್ಕಿಂತಲೂ ಸಗಣಿ, ಗೊಬ್ಬರ ಮತ್ತು ಪ್ರಾಣಿಗಳ ಮಾರಾಟದಿಂದ ಸಿಗುವ ಆದಾಯದಂತಹ ಮಾರುಕಟ್ಟೆಯೇತರ ಪ್ರಯೋಜನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ.

ಹಾಲು ಮಾರಾಟಕ್ಕೆ ಆದ್ಯತೆ ನೀಡದ ಸಾಕಣೆದಾರರ ಪ್ರಮಾಣ ಜಾರ್ಖಂಡ್‌ನಲ್ಲಿ ಅತ್ಯಧಿಕವಾಗಿದ್ದು, ಅಲ್ಲಿನ 71% ಸಾಕಣೆದಾರರು ಹಾಲು ಮಾರಾಟವನ್ನೇ ಪ್ರಾಥಮಿಕ ಉದ್ದೇಶವಾಗಿಸಿಲ್ಲ. ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಈ ಪ್ರಮಾಣ 50% ಕ್ಕಿಂತ ಹೆಚ್ಚು ಎಂದು ವರದಿ ಹೇಳುತ್ತದೆ.

ಹಾಲು ಮಾರಾಟ ಮಾಡದ ಕುಟುಂಬಗಳಲ್ಲಿ 31% ಜನರು ಕುಟುಂಬ ಬಳಕೆಯ ಹಾಲನ್ನು ಮುಖ್ಯವಾಗಿ ನೋಡುತ್ತಾರೆ. ಆದರೆ, ಉಳಿದವರು ಸುಮಾರು 5.6 ಮಿಲಿಯನ್ ಕುಟುಂಬಗಳು  ಹಾಲು ಉತ್ಪಾದನೆಗೂ ಸಂಬಂಧವಿಲ್ಲದ ಉದ್ದೇಶಕ್ಕಾಗಿ ಸಂಪೂರ್ಣವಾಗಿ ದನಗಳನ್ನು ಸಾಕುತ್ತಾರೆ ಎಂದು ಅಧ್ಯಯನ ತಿಳಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಅಧ್ಯಯನವು 15 ರಾಜ್ಯಗಳ 7,300ಕ್ಕೂ ಅಧಿಕ ಕುಟುಂಬಗಳ ಸಮೀಕ್ಷೆಯನ್ನು ಮಾಡಿದ್ದು,  ಭಾರತದ ಗೋವಿನ ಸಂಖ್ಯೆಯ 91% ಇದೆ(ಹಸುಗಳು, ಎಮ್ಮೆಗಳು, ಎತ್ತುಗಳು ). ವರದಿ ಪ್ರಕಾರ, ಬಹುತೇಕ ಮನೆಗಳಲ್ಲಿ ಕೇವಲ ಒಂದು ಅಥವಾ ಎರಡು ಸ್ಥಳೀಯ ದನಗಳು ಇದ್ದು, ಇವು ಸಮಗ್ರ ಕೃಷಿ ವ್ಯವಸ್ಥೆಯಲ್ಲಿ ಸಗಣಿ ಮತ್ತು ಗೊಬ್ಬರದ ಪ್ರಮುಖ ಪಾತ್ರ ವಹಿಸುತ್ತಿವೆ. ಒಟ್ಟಾರೆಯಾಗಿ, 15 ರಾಜ್ಯಗಳಲ್ಲಿ ಒಂಬತ್ತು ರಾಜ್ಯಗಳಲ್ಲಿ, ಅರ್ಧಕ್ಕಿಂತ ಕಡಿಮೆ ಜಾನುವಾರು ಸಾಕಣೆದಾರರು ಹಾಲು ಮಾರಾಟವನ್ನು ತಮ್ಮ ಸಾಕಣೆಗೆ ಪ್ರಾಥಮಿಕ ಪ್ರೇರಣೆಯಾಗಿ ಉಲ್ಲೇಖಿಸಿದ್ದಾರೆ.

ಡೈರಿ ನೀತಿಗಳು ಹೆಚ್ಚಾಗಿ ಉತ್ಪಾದಕತೆ ಮತ್ತು ಹಾಲಿನ ಪ್ರಮಾಣ ಹೆಚ್ಚಿಸುವತ್ತ ಗಮನಹರಿಸುತ್ತಿವೆ. ಆದರೆ, ಗ್ರಾಮೀಣ ಜೀವನೋಪಾಯದಲ್ಲಿ ಜಾನುವಾರುಗಳ ಪಾತ್ರವು ಹಾಲಿನ ಹೊರತಾಗಿಯೂ ಬಹುಮುಖವಾಗಿರುವುದರಿಂದ, ಅದನ್ನು ಪ್ರತಿಬಿಂಬಿಸುವ ಹಾಗೂ ಸ್ಪಂದಿಸುವ ನೀತಿಗಳು ಅಗತ್ಯವೆಂದು CEEW ನಿರ್ದೇಶಕ ಅಭಿಷೇಕ್ ಜೈನ್ ವರದಿಯಲ್ಲಿ ಹೇಳಿದ್ದಾರೆ.

ಮೇವು ಮತ್ತು ಆಹಾರ ಕೊರತೆ ದೊಡ್ಡ ಸವಾಲು : ಅಧ್ಯಯನದಂತೆ, ನಾಲ್ಕರಲ್ಲಿ ಮೂವರು ಸಾಕಣೆದಾರರಿಗೆ ಕೈಗೆಟುಕುವ ಮೇವು ಮತ್ತು ಮೇವಿನ ಲಭ್ಯತೆ ಪ್ರಮುಖ ಸಮಸ್ಯೆಯಾಗಿದೆ. ಆದರೆ, ಸೈಲೇಜ್ ಹಾಗೂ ಸಮತೋಲಿತ ಪೋಷಣಾ ಯೋಜನೆಗಳಂತಹ ವ್ಯವಸ್ಥೆ ಅಳವಡಿಕೆ ಕೇವಲ 5% ಮಾತ್ರ ಇರುವುದೂ ಗಮನಾರ್ಹವಾಗಿದೆ. ಹವಾಮಾನ ಬದಲಾವಣೆಯಿಂದ ಜಾನುವಾರುಗಳಲ್ಲಿ ರೋಗ ಪ್ರಮಾಣ, ಸಾವು, ಹೆಚ್ಚಾಗುತ್ತಿದೆ ಎಂದು ಸಾಕಣೆದಾರರು ಹೇಳಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಜಾನುವಾರು ಸಾಕಾಣಿಕೆಯು ಜೀವನೋಪಾಯದ ಮೇಲೆ ಮತ್ತಷ್ಟು ಒತ್ತಡ ತರುವ ಸಾಧ್ಯತೆ ಇದೆ. ಹಾಲು 80 ದಶಲಕ್ಷಕ್ಕೂ ಹೆಚ್ಚು ಜೀವನೋಪಾಯಕ್ಕೆ ಕಾರಣವಾಗಿದೆ ಮತ್ತು ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ ಶೇಕಡಾ 5 ರಷ್ಟು ಕೊಡುಗೆ ನೀಡುತ್ತದೆ. ಗ್ರಾಮೀಣ ಜೀವನೋಪಾಯದಲ್ಲಿ ಜಾನುವಾರು ವಹಿಸುವ ಪಾತ್ರಗಳು ಕಡೆಗಣಿಸಲ್ಪಟ್ಟಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

58 minutes ago

ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ

ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…

2 hours ago

ಪಿಒಪಿ ಗಣಪತಿಗೆ ಬ್ರೇಕ್..? ಕರಾವಳಿಯ 90–95% ಪರಿಸರ ಸ್ನೇಹಿ ಮಾದರಿ ರಾಜ್ಯಕ್ಕೆ ಪಾಠ

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವಂತೆ…

4 hours ago

ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕೃಷಿಕರಿಗೆ ನಿರ್ಬಂಧ ಬೇಡ – ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಆಗ್ರಹ

ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕೃಷಿಕರ ಜೀವನೋಪಾಯಕ್ಕೆ ನಿರ್ಬಂಧ ಹೇರಬಾರದು, ಕಸ್ತೂರಿ ರಂಗನ್…

5 hours ago

ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?

ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…

18 hours ago

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ

ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…

1 day ago