Advertisement
ಸುದ್ದಿಗಳು

#TreePark | ನಿರ್ಮಾಣವಾಗುತ್ತಿದೆ 3,000 ಎಕರೆ ಟ್ರೀ ಪಾರ್ಕ್ | ರಾಜ್ಯದ ಅರಣ್ಯ ಜಾಗ ಬಳಕೆಗೆ ನಿರ್ಧಾರ |

Share

ಜಗತ್ತು ಆಧುನೀಕರಣಕ್ಕೆ ಒಡ್ಡಿಕೊಳ್ಳುತ್ತಿದ್ದಂತೆ ಪ್ರಕೃತಿ, ಪರಿಸರ ಕ್ಷೀಣವಾಗುತ್ತಿದೆ. ಭೂಮಿ ತಾಯನ್ನು ನಿಕೃಷ್ಟವಾಗಿ ಕಂಡು ತಮ್ಮ ಏಳಿಗೆಯನ್ನು ಮಾಡ ಹೊರಟಿದ್ದಾನೆ ಮಾನವ. ದಿನದಿಂದ ದಿನಕ್ಕೆ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಉಷ್ಣತೆ, ಬರಗಾಲ, ನೆರೆ, ಪ್ರಕೃತಿ ವಿಕೋಪಗಳು ತಾರಕ್ಕೇರುತ್ತಿದೆ. ಇದನ್ನು ಮನಗಂಡ ಕರ್ನಾಟಕ ಅರಣ್ಯ ಇಲಾಖೆ ಮಹತ್ ಕಾರ್ಯಕ್ಕೆ ಕೈ ಹಾಕಿದೆ.

Advertisement
Advertisement

ಕರ್ನಾಟಕದಲ್ಲಿ ಮರಗಿಡಗಳ ಉದ್ಯಾನವನ #TreePark ಅನ್ನು ಸ್ಥಾಪಿಸಲು 3,000 ಎಕರೆಗಿಂತಲೂ ಹೆಚ್ಚಿನ ಅರಣ್ಯ ಪ್ರದೇಶವನ್ನು ಮೀಸಲಿರಿಸಲಾಗಿದೆ. ಅಟಲ್ ಬಿಹಾರಿ ವಾಜಪೇಯಿ ಬೊಟಾನಿಕಲ್ ಉದ್ಯಾನ ನಿರ್ಮಾಣಕ್ಕೆ ಜರಕಬಂಡೆ ಕಾವಲ್‌ ಅರಣ್ಯ ಭಾಗದ 305 ಎಕರೆಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಈ ಕುರಿತು ಮಾಹಿತಿ ನೀಡಿರುವ ಇಲಾಖೆ, ಟ್ರೀ ಪಾರ್ಕ್ ಸ್ಥಾಪಿಸಲು  2556.68 ಎಕರೆ ಅರಣ್ಯ ಭೂಮಿಯನ್ನು ಮಾರ್ಪಡಿಸಲಾಗಿದೆ ಎಂದು ತಿಳಿಸಿದ್ದು, ಮೀಸಲು ಅರಣ್ಯವು 1275.543 ಎಕರೆಗಳನ್ನು ಹೊಂದಿದೆ, ನಂತರ ಘೋಷಿತ (ವಿಭಾಗ 4) ಅರಣ್ಯ (401.69 ಎಕರೆ), ಜಿಲ್ಲಾ ಅರಣ್ಯ (337 ಎಕರೆ) ಮತ್ತು ಉಳಿದವುಗಳನ್ನು ಇತರ ಭೂಪ್ರದೇಶವಾಗಿ ಘೋಷಿಸಲಾಗಿದೆ ಎಂದು ತಿಳಿಸಿದೆ. 711 ಎಕರೆಯಲ್ಲಿ ಹರಡಿರುವ ಕಾಡುಗೋಡಿ ಟ್ರೀ ಪಾರ್ಕ್ ಕುರಿತು ಇಲಾಖೆ ಮಾಹಿತಿ ಹಂಚಿಕೊಂಡಿಲ್ಲ.

Advertisement

ನೈಸರ್ಗಿಕ ಕಾಡುಗಳಿಗಿಂತ ಭಿನ್ನವಾಗಿ, #TreePark ಗಳು ಸಾಮಾನ್ಯವಾಗಿ ಮೂಲಭೂತ ಸೌಕರ್ಯಗಳ ಸ್ಥಾಪನೆಯನ್ನು ಒಳಗೊಂಡಿರುತ್ತವೆ, ಇದು ವಿರಾಮಕ್ಕಾಗಿ ಬರುವ ಜನರಿಗೆ ಅನುಕೂಲತೆ ಮತ್ತು ಸೌಕರ್ಯಗಳನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಅಂದರೆ ಶೌಚಾಲಯಗಳು ಮತ್ತು ಸೈಕಲ್ ಟ್ರ್ಯಾಕ್‌ಗಳ ವ್ಯವಸ್ಥೆ ಇರುತ್ತದೆ.

Advertisement
ಸರ್ಕಾರವು ಅರಣ್ಯವನ್ನು ಶೋಷಣೆ ಮಾಡುತ್ತಿದೆ ಏಕೆಂದರೆ ಅದು ಕಾರ್ಯಗತಗೊಳಿಸಲು ವಿಫಲವಾಗಿದೆ. ಲೇಔಟ್ ಅಭಿವೃದ್ಧಿಗೆ ಸಂಬಂಧಿಸಿದ ನಿಯಮಗಳು” ಪರಿಸರ ಸಂರಕ್ಷಣೆಯ ಭಾಗವಾಗಿ ಉಳಿದಿಲ್ಲ.  ಉದ್ದೇಶಿತ ಜಾರಕಬಂಡೆ ಕಾವಲ್ ಮೀಸಲು ಅರಣ್ಯದ ವಿಷಯದಲ್ಲಿ ಕಂಡಂತೆ ಕಂದಾಯ ಇಲಾಖೆ ಇಂತಹ ಯೋಜನೆಗಳಿಗೆ ಭೂಮಿಯನ್ನು ಬಿಟ್ಟುಕೊಡಲು ಪರ್ಮಿಷನ್ ಕೊಡುತ್ತಿಲ್ಲ ಈ ರೀತಿಯ ಸಮ್ಯಸೆಗಳು ಜಾಗ ವಶಮಾಡಿಕೊಳ್ಳುವಾಗ ಉಂಟಾಗುತ್ತವೆ ಎಂದು ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಅರಣ್ಯ ಜಾಗದಲ್ಲಿ ಬಿಡಿಎ ಕಾಂಪ್ಲೆಕ್ಸ್:”ವಾಸ್ತವವಾಗಿ ಇಂತಹ ಯೋಜನೆಗಳ ವಿರುದ್ಧ ಆರೋಪ ಕೇಳಿ ಬರುತ್ತಿದ್ದು, ಅರಣ್ಯ ಇಲಾಖೆಯ ಆಕ್ಷೇಪದ ನಡುವೆಯೂ ಬಿಡಿಎ ಉತ್ತರಹಳ್ಳಿಯ ಮಾನವತೆ ಕಾವಲ್‌ನಲ್ಲಿ 41 ಎಕರೆ ಗುಂಟಾ ಅರಣ್ಯದಿಂದ 15 ಎಕರೆ ಜಾಗದಲ್ಲಿ ಬಡಾವಣೆ ನಿರ್ಮಿಸಿತ್ತು, ಈ ಕುರಿತು ಹೈಕೋರ್ಟ್‌ ಮೆಟ್ಟಿಲೇರಬೇಕಿತ್ತು. ನ್ಯಾಯಾಲಯದ ಆದೇಶ ನಮ್ಮ ಪರವಾಗಿದ್ದು, ಭೂಮಿಯನ್ನು ಬಿಡಿಎ ಅರಣ್ಯಕ್ಕೆ ಹಿಂತಿರುಗಿಸಬೇಕಿತ್ತು,’’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದದಾರೆ.

ಭೂ ಬಳಕೆಯಲ್ಲಿನ ಬದಲಾವಣೆ, ವಿಶೇಷವಾಗಿ ನೈಸರ್ಗಿಕ ಪರಿಸರದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಪ್ರಾಥಮಿಕ ಕಾರಣವಾಗಿದೆ ಎಂದು ಅಧ್ಯಯನಗಳು ಸೂಚಿಸಿವೆ. ಮತ್ತು ಸಂಘರ್ಷ ಪೀಡಿತ ಜಿಲ್ಲೆಗಳಲ್ಲಿಯೂ ಸಹ, ನಾಲ್ಕು ಟ್ರೀ ಪಾರ್ಕ್‌ಗಳನ್ನು ರಚಿಸಲು ಅರಣ್ಯ ಭೂಮಿಯನ್ನು ಬಳಸಲಾಗಿದೆ. ಚಾಮರಾಜನಗರ, ಹಾಸನ ಮತ್ತಿತರ ಜಿಲ್ಲೆಗಳಲ್ಲಿ ಇದೇ ರೀತಿ ಅರಣ್ಯ ಪ್ರದೇಶಗಳು ಬಳಕೆಯಾಗಿವೆ ಎಂದು ಇಲಾಖೆಯ  ತಿಳಿಸಿದೆ. ದರು. ನೈಸರ್ಗಿಕ ಅರಣ್ಯವನ್ನು ನಾವು ಸೃಷ್ಟಿಸಲು ಸಾಧ್ಯವಿಲ್ಲ. ಅರಣ್ಯ ಇಲಾಖೆ ಟ್ರೀ ಪಾರ್ಕ್‌ನಂತಹ ಯೋಜನೆಗಳನ್ನು ಕೊನೆಗೊಳಿಸಬೇಕಾಗಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

 

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |

ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.

13 hours ago

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್

''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…

13 hours ago

ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು

ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…

13 hours ago

ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..

ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.

14 hours ago

ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?

 ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್‌ ಇಂಡಸ್ಟ್ರೀಸ್‌(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…

14 hours ago

ಕೃಷಿಯಲ್ಲಿ ಯುವ ರೈತನ ಸಾಧನೆ | 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ |

ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…

14 hours ago