#GlobalWarming| ಸಮುದ್ರ ಮಟ್ಟಕ್ಕಿಂತ ಕೆಳಕ್ಕೆ ಹೋಗಲಿವೆಯಂತೆ ಕೇರಳದ 4 ಜಿಲ್ಲೆಗಳು…!? | 2050ರ ವೇಳೆಗೆ ಹಲವು ಪ್ರದೇಶಗಳು ಮುಳುಗಡೆಯಾಗುವ ಎಚ್ಚರಿಕೆ ನೀಡಿದ ವರದಿ.. |

July 30, 2023
9:18 PM
ಜಾಗತಿಕ ತಾಪಮಾನದ ಕಾರಣ 2050ರ ವೇಳೆಗೆ ಕೇರಳದ 4 ಜಿಲ್ಲೆಗಳು ಸಮುದ್ರ ಮಟ್ಟಕ್ಕಿಂತ ಕೆಳಕ್ಕೆ ಹೋಗಬಹುದು ಎಂದು ನ್ಯೂಜೆರ್ಸಿ ಮೂಲದ ವಿಜ್ಞಾನ ಸಂಸ್ಥೆಯಾದ ಕ್ಲೈಮೇಟ್ ಸೆಂಟ್ರಲ್ ನಿರ್ಮಿಸಿದ ಹೊಸ ಡಿಜಿಟಲ್ ಎಲಿವೇಶನ್ ಮಾಡೆಲ್ (DEM) ಮೊದಲ ವರದಿಯಲ್ಲಿ ಎಚ್ಚರಿಸಿದೆ.

ಜಾಗತಿಕ ತಾಪಮಾನದ ಬಗ್ಗೆ ಎಚ್ಚರಿಕೆ ಕೇಳಿ ಬರುತ್ತಲೇ ಇದೆ. ಇದಕ್ಕೆ ಕಾರಣ ಜಾಗತಿಕ ತಾಪಮಾನದಿಂದಾಗಿ ಉಂಟಾಗುವ ಸಮಸ್ಯೆಗಳು. ಸಮದ್ರ ಮಟ್ಟ ಏರಿಕೆ, ಹವಾಮಾನಬದಲಾವಣೆ, ಅತಿಯಾದ ತಾಪಮಾನ ಹೀಗೆ ಇವುಗಳು ಗ್ಲೋಬಲ್‌ ವಾರ್ಮಿಂಗ್‌ ಜೊತೆ ನೇರವಾದ ಸಂಬಂಧ ಹೊಂದಿವೆ. ಈ ಹಿಂದೆ ಬಂದ ಸುಮಾರು ಅಧ್ಯಯನಗಳು ಜಾಗತಿಕ ತಾಪಮಾನದಿಂದಾಗಿ ಸಮುದ್ರಗಳ ಮಟ್ಟ ಏರಿಕೆ ಆಗುತ್ತಿದೆ, ಇದರಿಂದ 2050ರ ವೇಳೆಗೆ ಹಲವು ಪ್ರದೇಶಗಳು ಮುಳುಗಡೆಯಾಗಬಹುದು ಎಂದು ಸೂಚಿಸಿವೆ. ಭಾರತದಲ್ಲಿ ಮುಂಬೈ, ಮಹಾರಾಷ್ಟ್, ಕೇರಳ#Kerala, ಗುಜರಾತ್‌ ಕರಾವಳಯಂತಹ ಪ್ರದೇಶಗಳು ಅಪಾಯದಲ್ಲಿವೆ ಎಂದು ತಿಳಿಸಿವೆ.

Advertisement
Advertisement

ಕೇರಳದ ನಾಲ್ಕು ಜಿಲ್ಲೆಗಳಿಗೆ ಹೆಚ್ಚಿನ ಅಪಾಯ: ಇದೇ ರೀತಿಯ ಮತ್ತೊಂದು ವರದಿ ಬಹಿರಂಗವಾಗಿದ್ದು, ಜಾಗತಿಕ ತಾಪಮಾನದ ಕಾರಣ 2050ರ ವೇಳೆಗೆ ಕೇರಳದ 4 ಜಿಲ್ಲೆಗಳು ಸಮುದ್ರ ಮಟ್ಟಕ್ಕಿಂತ ಕೆಳಕ್ಕೆ ಹೋಗಬಹುದು ಎಂದು ಎಚ್ಚರಿಸಿದೆ. ನ್ಯೂಜೆರ್ಸಿ ಮೂಲದ ವಿಜ್ಞಾನ ಸಂಸ್ಥೆಯಾದ ಕ್ಲೈಮೇಟ್ ಸೆಂಟ್ರಲ್ ನಿರ್ಮಿಸಿದ ಹೊಸ ಡಿಜಿಟಲ್ ಎಲಿವೇಶನ್ ಮಾಡೆಲ್#DEM ಮೊದಲ ವರದಿಯಲ್ಲಿ ಮಧ್ಯ ಕೇರಳದ ಭಾಗಗಳು ಸಮುದ್ರ ಮಟ್ಟ ಏರಿಕೆಯ ಹೆಚ್ಚಿನ ಅಪಾಯದ ವಲಯಗಳು ಎಂದು ತಿಳಿಸಿತ್ತು. ಆದರೆ ಇದೀಗ ಮತ್ತೊಂದು ವರದಿಯನ್ನು ಬಿಡುಗಡೆ ಮಾಡಿದ್ದು, 2050 ರ ವೇಳೆಗೆ ಜಿಲ್ಲೆಯ ಹಲವು ಭಾಗಗಳು ಮುಳುಗಡೆಯಾಗಬಹುದು ಎಂದು ತಿಳಿಸಿದೆ.

Advertisement
ವರದಿಯು 2050 ರ ವೇಳೆಗೆ 1 ಮೀ ಸಮುದ್ರ ಮಟ್ಟ ಏರಿಕೆಯ ಸಂದರ್ಭದಲ್ಲಿ ಅದರೊಳಗೆ ಮುಳುಗಡೆಯಾಗಬಹುದಾದ ಹೆಚ್ಚಿನ ಪ್ರದೇಶಗಳು ಸೇರಲಿವೆ ಎಂದು ತಿಳಿಸಿದ್ದು ಅದರ ಹೊಸ ಆವೃತ್ತಿ ಕೇರಳದ ಕೊಟ್ಟಾಯಂ ಮತ್ತು ತ್ರಿಸೂರ್‌ನ ಒಳಭಾಗಗಳ ಮೇಲೆ ಭೀಕರವಾದ ಪರಿಣಾಮ ಬೀರಬಹುದು ಎಂದಿದೆ. ಮೊದಲ ವರದಿಗಳು ಕುಟ್ಟನಾಡ್, ಕೊಚ್ಚಿ ದ್ವೀಪಗಳು ಮತ್ತು ವೈಕೋಂನ ಕರಾವಳಿ ಪ್ರದೇಶಗಳ ಬಗ್ಗೆ ಎಚ್ಚರಿಕೆ ನೀಡಿತ್ತು, ಆದರೆ ಈಗಿನ ವರದಿಗಳು ಪೆರಮಂಗಲಂ, ಪುರನಾಟ್ಟುಕರ, ಅರಿಂಬೂರ್, ಪರಕ್ಕಾಡ್, ಮಣಕ್ಕೋಡಿ ಮತ್ತು ತ್ರಿಶೂರ್‌ನ ಕೂರ್ಕೆಂಚೇರಿ ಮತ್ತು ಕೊಟ್ಟಾಯಂನ ಕೆಲವು ಪ್ರದೇಶಗಳು, ತಲಯಾಜಂ, ಚೆಮ್ಮನಾತುಕರ, ಅಚಿನಕಂ ಮತ್ತು ಬ್ರಹ್ಮಮಂಗಲಂ ಸೇರಿದಂತೆ ಹೆಚ್ಚಿನ ಆಂತರಿಕ ಸ್ಥಳಗಳಿಗೆ ಅಪಾಯವಿದೆ ಎಂದು ತಿಳಿಸಿದೆ.
ಸಮುದ್ರ ಮಟ್ಟ ಏರಿಕೆ : ಈಗಾಗಲೇ ಅಸಾಮಾನ್ಯ ಮತ್ತು ವಿಪರೀತ ಮಳೆಯ ಘಟನೆಗಳನ್ನು ಕಾಣುತ್ತಿರುವ ಮಧ್ಯ ಕೇರಳ, ಅಂಟಾರ್ಕ್ಟಿಕಾದಲ್ಲಿ ಮಂಜುಗಡ್ಡೆಯ ಕರಗುವಿಕೆಯಿಂದ ಉಂಟಾದ ಸಮುದ್ರ ಮಟ್ಟ ಏರಿಕೆಯ ಹಿನ್ನೆಲೆಯಲ್ಲಿ, ದೊಡ್ಡ ಪರಿಣಾಮ ಎದುರಿಸಬೇಕಾಗಬಹುದು. ಎರ್ನಾಕುಲಂ, ಕೊಟ್ಟಾಯಂ ಮತ್ತು ಅಲಪ್ಪುಳದ ದೊಡ್ಡ ಭಾಗಗಳನ್ನು ಒಳಗೊಂಡಂತೆ ನಾಲ್ಕು ಜಿಲ್ಲೆಗಳು ಮತ್ತು ತ್ರಿಶೂರ್‌ನ ಕೆಲವು ಭಾಗಗಳು 2050 ರ ವೇಳೆಗೆ ಸಮುದ್ರ ಮಟ್ಟಕ್ಕಿಂತ ಕೆಳಗಿರಬಹುದು ಎಂದು ಸಮುದ್ರ ಮಟ್ಟ ಏರಿಕೆಯ ಅಂದಾಜನ್ನು ವರದಿ ತೋರಿಸಿದೆ. ಈ ವರದಿಗಳ ಪ್ರಕಾರ ಜಿಲ್ಲೆಯ ಮುನಂಬಂ, ಕುಜಿಪ್ಪಿಳ್ಳಿ, ಚೆರೈ, ನಾಯರಂಬಲಂ, ಚೆಂದಮಂಗಲಂ, ಪುಥೆನ್‌ವೇಲಿಕ್ಕಾರ, ಕಡಮಕುಡಿ, ಪುತ್ತುವೈಪೆ, ಫೋರ್ಟ್ ಕೊಚ್ಚಿ, ವರಪುಳ, ಬೊಲ್ಗಟ್ಟಿ, ಚೆಲ್ಲಾನಂ, ಉದಯನಪುರಂ, ತಲಯೋಲಪರಂಬು, ಚೇರ್ತಲ, ಕುಮಾರಕೊಂ, ಮುಹಮ್ಮ, ಕೊತ್ತಂಚೇರಿ, ತನ್ನೀ ಪ್ರದೇಶಗಳು ಸಂಪೂರ್ಣವಾಗಿ ಮುಳಗಡೆಯಾಗುವ ಸಾಧ್ಯತೆಗಳಿವೆ.

ಪ್ರಮುಖ ಕರಾವಳಿ ನಗರಗಳಿಗೆ ಸಂಬಂಧಿಸಿದ ಇಂಟರ್‌ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್#IPCC ವರದಿಯು ಸಮುದ್ರ ಮಟ್ಟವು 2050 ರ ವೇಳೆಗೆ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಸೂಚಿಸಿದೆ. ಉತ್ತರ ಹಿಂದೂ ಮಹಾಸಾಗರದಲ್ಲಿ#NIO ಸಮುದ್ರ ಮಟ್ಟ ಏರಿಕೆಯು ವರ್ಷಕ್ಕೆ 1.06-1.75mm ದರದಲ್ಲಿ ಸಂಭವಿಸಿದೆ. 1874 ರಿಂದ 2004 ರವರೆಗೆ ಮತ್ತು 25 ವರ್ಷಗಳಲ್ಲಿ ವರ್ಷಕ್ಕೆ 3mm ಗಿಂತ ಹೆಚ್ಚಾಗಿದೆ. ಈ ಬಗ್ಗೆ ಮಾತನಾಡಿದ ಹಿರಿಯ ಪರಿಸರ ವಿಜ್ಞಾನಿ ಕೆ ಕೆ ರಾಮಚಂದ್ರನ್ “1m ಏರಿಕೆಯ ಪ್ರಕ್ಷೇಪಣವನ್ನು ಈಗಾಗಲೇ ಮಾಡಲಾಗಿದೆ ಮತ್ತು ರಾಜ್ಯ ಹವಾಮಾನ ಕ್ರಿಯಾ ಯೋಜನೆಯು ಈ ಪ್ರಕ್ಷೇಪಣೆಯ ಆಧಾರದ ಮೇಲೆ ಈ ಸ್ಥಳಗಳ ಬಗ್ಗೆ ಎಚ್ಚರಿಕೆ ವಹಿಸಿದೆ. ಹವಮಾನವನ್ನು ಸುಧಾರಿಸುವ ಅನಿವಾರ್ಯತೆ ಈಗ ಬಂದಿದೆ. ರಾಜ್ಯ ಸರ್ಕಾರ ಹವಮಾನಕ್ಕೆ ಸಂಬಂಧಿಸಿದ ಗ್ರೀನ್ ಕ್ರೆಡಿಟ್ ಕಾರ್ಯಕ್ರಮವನ್ನು ಬೇಗ ಕೈಗೆತ್ತಿಕೊಳ್ಳಬೇಕು ಎಂದು ಕೆ ಕೆ ರಾಮಚಂದ್ರನ್ ಹೇಳಿದ್ದಾರೆ.

– ಆಂತರ್ಜಾಲ ಮಾಹಿತಿ

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕರ್ನಾಟಕದಾದ್ಯಂತ ಗೋಕೃಪಾಮೃತ ವಿತರಣೆ : ಗೋಕೃಪಾಮೃತ ಇರುವಾಗ ಮಾರುಕಟ್ಟೆಯಲ್ಲಿನ ದುಬಾರಿ ಕೃಷಿ ಗೊಬ್ಬರ & ಕ್ರಿಮಿನಾಶಕಗಳ ಹಂಗೇಕೆ?
May 12, 2024
11:53 AM
by: The Rural Mirror ಸುದ್ದಿಜಾಲ
ಪುತ್ತೂರಿನಲ್ಲಿ ಹಲಸು ಹಣ್ಣು ಮೇಳದ ಏಳನೇ ಆವೃತ್ತಿ : ಸಮಗ್ರ ಕೃಷಿ ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶ
May 12, 2024
11:34 AM
by: The Rural Mirror ಸುದ್ದಿಜಾಲ
ರಾಜ್ಯದ ಹಲವು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆ : ರೈತರ ಮೊಗದಲ್ಲಿ ಸಂತಸ : ಕೆಲವೆಡೆ ಹಾನಿ
May 12, 2024
11:10 AM
by: The Rural Mirror ಸುದ್ದಿಜಾಲ
ಇಂದು ದೇಶ್ಯಾದ್ಯಂತ ಕಾಮೆಡ್-ಕೆ ಪರೀಕ್ಷೆ : ವಿದ್ಯಾರ್ಥಿಗಳ ಭವಿಷ್ಯದ ಮೆಟ್ಟಿಲು
May 12, 2024
10:47 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror