ಸೌದಿ ಅರೇಬಿಯಾದಲ್ಲಿ ಒಂಟೆಗಳಿಗಾಗಿಯೇ ಪಂಚತಾರಾ ಹೋಟೆಲ್ನ್ನು ತೆರೆಯಲಾಗಿದೆ. ಒಂಟೆಗಳಿಗಾಗಿಯೇ ತೆರೆಯಲಾಗಿರುವ ಟ್ಯಾಟ್ಮ್ಯಾನ್ ಎಂಬ ಹೆಸರಿನ ಪಂಚತಾರಾ ಹೋಟೆಲ್ ಇದು ವಿಶದಲ್ಲೇ ಮೊದಲು ನಿರ್ಮಾಣಗೊಂಡ ಯೋಜನೆಯಾಗಿದೆ. ಸೌದಿ ಅರೇಬಿಯಾದಲ್ಲಿ 6ನೇ ಕಿಂಗ್ ಅಬ್ದುಲ್ ಅಜೀಜ್ ಒಂಟೆ ಉತ್ಸವಕ್ಕಾಗಿ ಹೋಟೆಲ್ನ್ನು ತೆರೆಯಲಾಗಿದೆ.
ಒಂಟೆಗಳು ವಿಶ್ರಾಂತಿ ಪಡೆಯಲು ಸುಮಾರು 120 ಕ್ಕೂ ಹೆಚ್ಚು ಕೊಠಡಿಗಳಿವೆ. ಇಲ್ಲಿ ಒಂಟೆಗಳಿಗಾಗಿ ರೂಂ ಸರ್ವೀಸ್, ಹೌಸ್ ಕೀಪಿಂಗ್, ಒಂಟೆಗಳ ಆರೈಕೆ, ಕಾವಲು ಮತ್ತು ಭದ್ರತೆ ಇನ್ನೂ ಮೊದಲಾದ ಸೇವಗಳನ್ನು ನೀಡಲಾಗಿದೆ. ಮಾತ್ರವಲ್ಲ ಪ್ರಸ್ತುತ 50ಕ್ಕೂ ಹೆಚ್ಚು ಜನರು ಇಲ್ಲಿ ತಮ್ಮ ಒಂಟೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದರ ಕಾರ್ಯಶೈಲಿ ವಿಭಿನ್ನ ಮತ್ತು ನವೀನವಾಗಿದೆ. ಸ್ವಚ್ಛಗೊಳಿಸುವ ಕೊಠಡಿಗಳಿಂದ ಹಿಡಿದು ಬೆಚ್ಚಗಿನ ಹವಾನಿಯಂತ್ರಣ ಸೌಲಭ್ಯಗಳವರೆಗೆ ಎಲ್ಲವೂ ಇಲ್ಲಿ ಲಭ್ಯವಿದೆ. ಅದು ಅಲ್ಲದೇ ಕೊಠಡಿಗಳಿಗೆ ಪ್ರವೇಶಿಸುವ ಮೊದಲು ಒಂಟೆಗಳನ್ನು ಅಗತ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ.
ಕಿಂಗ್ ಅಬ್ದುಲ್ ಅಜೀಜ್ ಒಂಟೆ ಉತ್ಸವದಲ್ಲಿ ಸಾವಿರಕ್ಕೂ ಹೆಚ್ಚು ಒಂಟೆಗಳು ಪಾಲ್ಗೊಳ್ಳುತ್ತದೆ.ಇಲ್ಲಿ ಒಂಟೆ ಓಟ, ಒಂಟೆ ಸೌಂದರ್ಯ ಸ್ಪರ್ಧೆ ಮತ್ತು ಮಾರಾಟವಾಗಿದೆ. ಮಾತ್ರವಲ್ಲದೆ ಅತ್ಯಂತ ಸುಂದರವಾದ ಒಂಟೆಯ ಮಾಲೀಕರು $ 66 ಮಿಲಿಯನ್ ಬಹುಮಾನವನ್ನು ಸ್ವೀಕರಿಸುತ್ತಾರೆ.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…