ಸುಳ್ಯ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಗ್ರಾಮ ಸಮಿತಿ ಚೊಕ್ಕಾಡಿ ಪದವು ಮತ್ತು ಪಂಚಶ್ರೀ ಫ್ರೆಂಡ್ಸ್ ಕ್ಲಬ್ ಅಕ್ಕೊಜಿಪಾಲ್ ಸುಳ್ಯ ಇದರ ವತಿಯಿಂದ “ಸ್ವಚ್ಛ ಬೇಂಗಮಲೆ” ಕಾರ್ಯಕ್ರಮ ನಡೆಯಿತು. ಬೇಂಗಮಲೆ ಪರಿಸರದಲ್ಲಿ ಪ್ಲಾಸ್ಟಿಕ್,ಕೋಳಿ ತ್ಯಾಜ್ಯ ಎಸೆಯುದನ್ನು ವಿರೊಧಿಸಿ ಸುಳ್ಯ ಕ್ಷೇತ್ರದ ಶಾಸಕರಿಗೆ ಮತ್ತು ಸುಳ್ಯ ತಹಶೀಲ್ದಾರಿಗೆ ಮನವಿ ಮಾಡಲಾಗಿತ್ತು. ಈ ಬಗ್ಗೆ ಪ್ಲಾಸ್ಟಿಕ್ ತ್ಯಾಜ್ಯ,ಕೋಳಿ ತ್ಯಾಜ್ಯ ಎಸೆದ ಸ್ಥಳ ಪರಿಶೀಲಿಸಿದ ಅಧಿಕಾರಿಗಳು ಚರ್ಚಿಸಿ ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕಿದ್ದು ಗಮನಕ್ಕೆ ಬಂದರೆ ಅವರ ಮೇಲೆ
133 ಸೆಕ್ಷನ್ ಹಾಕಿ ಬಂಧಿಸುದಾಗಿ ಈಗ ಅಧಿಕಾರಿಗಳು ತಿಳಿಸಿದ್ದಾರೆ. ಇದು ರಾತ್ರಿ ಹಗಲು ಬೇಂಗಮಲೆ ರಕ್ಷಣೆಗೆ ನಿಂತ ಬಜರಂಗದಳ ಕಾರ್ಯಕರ್ತರಿಗೆ ಸಿಕ್ಕ ಮೊದಲ ಜಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel