Advertisement
ಸುದ್ದಿಗಳು

ರಾಸಾಯನಿಕ ಬಳಕೆಯ ಮಾವು ಬರುತ್ತಿದೆ ಎಚ್ಚರ ಇರಲಿ…! | ನೀವೇ ಪತ್ತೆ ಮಾಡಿ ಅಂತಹ ಮಾವಿನ ಹಣ್ಣು…|

Share

ಇದು ಮಾವಿನ ಕಾಲ.. ಎಲ್ಲೆಲ್ಲೂ ಹಣ್ಣಿನ ರಾಜನದ್ದೇ ಕಾರುಬಾರು. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರಲ್ಲಿ ರಸಭರಿತ ತರಹೇವಾರಿ ಮಾವಿನ ಹಣ್ಣುಗಳು. ನೋಡಿದವರು ಯಾರು ಒಂದು ಕೆಜಿ ಕೊಳ್ಳದೆ ಇರಲಾರರು. ಆದರೆ ಈ ಮಾವಿನ ಹಣ್ಣುಗಳು ಎಷ್ಟು ಸೇಫ್ಟಿ ಅನ್ನೋದೆ ಪ್ರಶ್ನೆ. ಮಾರುಕಟ್ಟೆಯಲ್ಲಿ ಬರುವ ಬಹುತೇಕ ಹಣ್ಣುಗಳನ್ನು ಕೆಮಿಕಲ್ ಹಾಕಿ ಹಣ್ಣು ಮಾಡಲಾಗುತ್ತದೆ. ಕಳೆದ ವರ್ಷ  ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಚೆನ್ನೈನ ಲ್ಲಿ 7000 ಕೆಜಿ ಮಾವಿನಹಣ್ಣು ವಶಪಡಿಸಿಕೊಂಡಿದ್ದರು. 

ಕಳೆದ ವರ್ಷ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಚೆನ್ನೈನ ಕೊಯಂಬೆಡು ಮಾರುಕಟ್ಟೆಯಲ್ಲಿ  ದಾಳಿ ನಡೆಸಿ ಬರೋಬ್ಬರಿ 7 ಸಾವಿರ ಕೆಜಿಯಷ್ಟು ಕೃತಕವಾಗಿ ಮಾಗಿಸಿದ ಮಾವಿನ ಹಣ್ಣನ್ನು ವಶಪಡಿಸಿಕೊಂಡಿದ್ದರು. ಇನ್ನೀಗ ಮಳೆಯಾಗುವ ಆರಂಭದಲ್ಲಿ ಮಾವು ಕಟಾವು ಮಾಡಿ  ರಾಸಾಯನಿಕ ಬಳಸಿ ಮಾಗಿಸಿದ ಮಾವಿನ ಹಣ್ಣುಗಳ ಮಾರಾಟ ಮಾಡುವ ದೊಡ್ಡ ಜಾಲ ಸಕ್ರಿಯವಾಗುತ್ತದೆ.  ಕೃತಕವಾಗಿ ಮಾಗಿದ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಏರುಪೇರುಗಳಾಗುತ್ತವೆ. ಹೀಗಾಗಿ ರಾಸಾಯನಿಕಗಳಿಂದ ಮಾಗಿಸಿದ ಹಣ್ಣುಗಳ ಮಾರಾಟವನ್ನು ಪರಿಶೀಲಿಸಲು ಮಾರುಕಟ್ಟೆ ಪ್ರದೇಶಗಳಲ್ಲಿ ತಪಾಸಣೆ ಕೈಗೊಳ್ಳುವಂತೆ ಆಹಾರ ಸುರಕ್ಷತಾ ಇಲಾಖೆಗಳು ಸೂಚಿಸಿದರೂ, ಇಲಾಖೆಗಳ ಕಣ್ಣು ತಪ್ಪಿಸಿ ಈ ಮಾರಾಟ ಜಾಲ ಇರುತ್ತದೆ.

ರಾಸಾಯನಿಕವಾಗಿ ಮಾಗಿಸಿದ ಹಣ್ಣುಗಳನ್ನು ಗುರುತಿಸುವುದು ಹೇಗೆ?: ರಾಸಾಯನಿಕವಾಗಿ ಮಾಗಿದ ಮಾವಿನಹಣ್ಣುಗಳು ಅಸ್ವಾಭಾವಿಕವಾಗಿ ಮೃದುವಾದ ಅಥವಾ ಮೆತ್ತಗಿನ ವಿನ್ಯಾಸವನ್ನು ಹೊಂದಿರಬಹುದು. ನಿಧಾನವಾಗಿ ಒತ್ತಿದಾಗ, ನೈಸರ್ಗಿಕವಾಗಿ ಮಾಗಿದ ಮಾವಿನ ಮಾಂಸವು ಸ್ವಲ್ಪಮಟ್ಟಿಗೆ ಒತ್ತಡಕ್ಕೆ ಒಳಗಾಗಬೇಕು. ನೈಸರ್ಗಿಕ ಮಾವಿನಹಣ್ಣುಗಳು ಸಂಪೂರ್ಣವಾಗಿ ಹಣ್ಣಾದಾಗ ಬಲವಾದ, ಸಿಹಿ ಪರಿಮಳವನ್ನು ಹೊಂದಿರುತ್ತವೆ. ರಾಸಾಯನಿಕವಾಗಿ ಮಾಗಿದ ಮಾವಿನಹಣ್ಣುಗಳು ದುರ್ಬಲ ಅಥವಾ ಗಮನಾರ್ಹವಾದ ಪರಿಮಳವನ್ನು ಹೊಂದಿರುವುದಿಲ್ಲ. ಮಾವಿನ ಕಾಂಡದ ತುದಿಯನ್ನು ಪರೀಕ್ಷಿಸಿ. ಇದು ಚಿಕ್ಕದಾದ, ಸುಕ್ಕುಗಟ್ಟಿದ ಕಾಂಡವನ್ನು ಹೊಂದಿದ್ದರೆ, ಅದು ಮಾವು ಸರಿಯಾಗಿ ಹಣ್ಣಾಗಿದೆ ಎಂಬ ಸೂಚನೆಯಾಗಿದೆ. ದೊಡ್ಡದಾದ, ಹಸಿರು ಕಾಂಡಗಳನ್ನು ಹೊಂದಿರುವ ಮಾವಿನಹಣ್ಣುಗಳನ್ನು ತಪ್ಪಿಸಿ ಏಕೆಂದರೆ ಅವು ಇನ್ನೂ ಹಣ್ಣಾಗಿಲ್ಲ ಎಂದರ್ಥ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿ ಅಲರ್ಟ್ | ಎಪ್ರಿಲ್ 15 -17 ರವರೆಗೆ ಆರೆಂಜ್ ಅಲರ್ಟ್ ಘೋಷಣೆ

ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಏಪ್ರಿಲ್ 15ರಿಂದ 17ರವರೆಗೆ ಬಿಸಿಗಾಳಿ ತೀವ್ರವಾಗುವ ಸಾಧ್ಯತೆ…

6 hours ago

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರ ಆರಂಭ

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರ ಆರಂಭವಾಗಿದೆ. ಇದು ರೈತರಿಗೆ ನಿಖರ…

7 hours ago

ವನ್ಯಜೀವಿಗಳಿಗೆ ಸಂತಾನಹರಣ ಚಿಂತನೆಗೆ ವಿರೋಧ

ವನ್ಯಜೀವಿಗಳಿಗೆ ಸಂತಾನಹರಣ ಚಿಂತನೆಗೆ ವಿರೋಧಿಸಿ ಚಾಮರಾಜನಗರದಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.…

7 hours ago

ಬಾಳೆಬರೆ ಘಾಟಿಯಲ್ಲಿ ವಾಹನ ಸಂಚಾರ ತಾತ್ಕಾಲಿಕ ನಿಷೇಧ

ಬಾಳೆಬರೆ ಘಾಟಿಯಲ್ಲಿ ಕಾಮಗಾರಿ ಹಿನ್ನೆಲೆ ವಾಹನ ಸಂಚಾರ ತಾತ್ಕಾಲಿಕ ನಿಷೇಧಿಸಲಾಗಿದೆ. ಪ್ರಯಾಣಿಕರು ಪರ್ಯಾಯ…

7 hours ago

ಅಡಿಕೆ ಮಾರುಕಟ್ಟೆಯ ಸ್ಥಿತಿಗತಿ ಮತ್ತು ಬೆಳೆಗಾರರ ಅಭಿಪ್ರಾಯ : ಸಮೀಕ್ಷಾ ವರದಿ

ಅಡಿಕೆ ಮಾರುಕಟ್ಟೆಯಲ್ಲಿ ವರ್ತಕರ ಸಿಂಡಿಕೇಟ್ ಮತ್ತು ವಿದೇಶಿ ಆಮದು ಬೆಲೆ ಅಸ್ಥಿರತೆಗೆ ಕಾರಣವಾಗಿವೆ.…

22 hours ago

ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಐತಿಹಾಸಿಕ ಏರಿಕೆ : 55 ಗಿಗಾವ್ಯಾಟ್ ಹೆಚ್ಚಳ – ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಭಾರತದಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ಐತಿಹಾಸಿಕವಾಗಿ 55 ಗಿಗಾವ್ಯಾಟ್ ಹೆಚ್ಚಳವಾಗಿದೆ. ನವೀಕರಿಸಬಹುದಾದ ಇಂಧನ…

23 hours ago